<?xml version='1.0' encoding='UTF-8'?><?xml-stylesheet href="http://www.blogger.com/styles/atom.css" type="text/css"?><feed xmlns='http://www.w3.org/2005/Atom' xmlns:openSearch='http://a9.com/-/spec/opensearchrss/1.0/' xmlns:georss='http://www.georss.org/georss' xmlns:gd='http://schemas.google.com/g/2005' xmlns:thr='http://purl.org/syndication/thread/1.0'><id>tag:blogger.com,1999:blog-5064341961341191540</id><updated>2011-08-21T19:54:48.155+08:00</updated><category term='chutuka'/><category term='hanigavana'/><category term='kannada poems'/><title type='text'>ಕಪ್ಪು-ಬಿಳುಪು</title><subtitle type='html'>ನನ್ನನ್ನೇ ಹುಡುಕುವ ಯತ್ನ!</subtitle><link rel='http://schemas.google.com/g/2005#feed' type='application/atom+xml' href='http://girishjamadagni.blogspot.com/feeds/posts/default'/><link rel='self' type='application/atom+xml' href='http://www.blogger.com/feeds/5064341961341191540/posts/default?max-results=100'/><link rel='alternate' type='text/html' href='http://girishjamadagni.blogspot.com/'/><link rel='hub' href='http://pubsubhubbub.appspot.com/'/><author><name>Girish Jamadagni</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><generator version='7.00' uri='http://www.blogger.com'>Blogger</generator><openSearch:totalResults>24</openSearch:totalResults><openSearch:startIndex>1</openSearch:startIndex><openSearch:itemsPerPage>100</openSearch:itemsPerPage><entry><id>tag:blogger.com,1999:blog-5064341961341191540.post-5670857160118108519</id><published>2010-07-19T20:02:00.005+08:00</published><updated>2010-07-19T20:23:40.806+08:00</updated><title type='text'>ಚಕ್ರ !</title><content type='html'>&lt;span style="font-size:130%;"&gt;(ಈ ಕಥೆ ಹೊಸ ಓದುಗರಿಗೆ! ಇದರಲ್ಲಿ ಅನುಭವಕ್ಕಿಂತ ಕಲ್ಪನೆಯೇ ಹೆಚ್ಚು..ಇದರಲ್ಲಿರುವುದು ನಿಮ್ಮೆಲ್ಲರ ಅನುಭವವೂ ಆಗಿರಬಹುದು...!)&lt;br /&gt;&lt;br /&gt;ಸಲೂನ್ ಶಾಪಿಗೆ ಬಂದು ಇಪ್ಪತ್ತು ನಿಮಿಷವಾಗಿತ್ತು. ಮೆತ್ತನೆಯ sofa ಮೇಲೆ ಕುಳಿತು, "filmfare" ಓದುತ್ತಿದ್ದೆ. ಎಂದಿನ ಭಾನುವಾರದಂತೆ ಬಹಳ ಜನ. ಕನ್ನಡಿ ಮುಂದಿನ ಒಂದು ಜಾಗ ಖಾಲಿಯಾಗಿತ್ತು. ಕ್ಷೌರಿಕ, "ಸಾರ್" ಎಂದು ಕೂಗಿ ಕರೆದು ಮೆತ್ತನೆಯ ಕುರ್ಚಿಯನ್ನೊಮ್ಮೆ ತಟ್ಟಿ ಕುಳಿತುಕೊಳ್ಳುವಂತೆ ಸನ್ಹೆ ಮಾಡಿದ. ನನ್ನ ಕನ್ನಡಕವನ್ನು ತೆಗೆದು, ಮಡಿಸಿ, ಮುಂದಿದ್ದ ಟೇಬಲ್ ಮೇಲಿಟ್ಟ. ಮುಂದಿನ ಕಪಾಟಿನಿಂದ ಮಡಿಸಿಟ್ಟಿದ್ದ ಹೊದಿಕೆಯನ್ನು ತೆಗೆದು, ಕೊಡವಿ, ನನ್ನ ಮೇಲೆ ಹೊದಿಸಿ, ಕತ್ತಿನ ಹಿಂಬಾಗದಲ್ಲಿ ಕ್ಲಿಪ್ ಹಾಕಿದ. ನನಗೆ ಮೊದಲು ಬಂದು ಹೋದವರಿಗೂ, ಅದನ್ನೆ ಹೊದಿಸಿ, ಕೆಲಸವಾದ ಮೇಲೆ ನೀಟಾಗಿ ಮಡಿಸಿಟ್ಟಿದ್ದನ್ನು ನಾನೇ ನೋಡಿದ್ದೆ!&lt;br /&gt;&lt;br /&gt;"ಸಾ(ಶಾ)ರ್ಟ್ ಮಾಡ್ಬೇಕಾ ಸಾರ್?" ಎಂದ. "ಮೀಡಿಯಂ" ಅಂದೆ. ಅವನ ಮಾಮೂಲಿ ಪ್ರಶ್ನೆಗೆ, ನನ್ನ ಮಾಮೂಲಿ ಉತ್ತರ. ಕತ್ತರಿ, ಬಾಚಣಿಗೆ ಹಿಡಿದು ಅವನ ಕಾರ್ಯದಲ್ಲಿ ಮಗ್ನನಾದ, ಕ್ಷೌರಿಕ ರಾಮು. ಅವನು ತಿರುಗಿಸಿದಂತೆ ನನ್ನ ತಲೆಯನ್ನು, ಮೇಲೆ, ಕೆಳಗೆ, ಅತ್ತ, ಇತ್ತ ಆಡಿಸುತ್ತಿದ್ದೆ. ಮಧ್ಯದಲ್ಲಿ ಅವನ ಮಾಮೂಲಿ ಗೊಣಗಾಟ ಕೇಳುತ್ತಿತ್ತು. "ಸಾರ್, ನಿಮ್ಮದು ರಿಂಕಲ್ಸ್ ಜಾಸ್ತಿ. ಕಟ್ ಮಾಡೋದು ಕಷ್ಟ". "ಗುಂಗುರು" ಕೂದಲು ಎಂದು ಹೇಳಲು, ಅವನೇ ಕಂಡು ಹಿಡಿದುಕೊಂಡಿದ್ದ ಇಂಗ್ಲಿಷ್ ಪದ ಅದು! ಅವನಿಗೆ ಗೊತ್ತು, ಹೀಗೆ ಅವನು ಹೇಳುವುದರಿಂದಲೇ, ಅವನಿಗೆ ಎರಡು ರೂಪಾಯಿ ಭಕ್ಷೀಸು, ನನ್ನಿಂದ ಅವನಿಗೆ ಸಿಗುತ್ತಿತ್ತು!&lt;br /&gt;&lt;br /&gt;ಗೋಣು ಕೆಳಗೆ ಹಾಕಿ ಕೂತ ನನ್ನ ದೃಷ್ಠಿ, ಅಕಸ್ಮಾತ್ತಾಗಿ ನನ್ನ ನೀಲಿ ಮೇಲು ಹೊದಿಕೆಯ ಮೇಲೆ ಬೀಳುತ್ತಿದ್ದ ಕೂದಲ ಗುಂಪಿನ ಮೇಲೆ ಬಿದ್ದಿತ್ತು. ಬರೀ ಕಪ್ಪು ಕೂದಲಲ್ಲ. ಅದರ ಜೊತೆಗೆ ಬಿಳಿ ಕೂದಲು! ಆಗಲೇ ನನಗೆ ಜ್ಞಾನೋದಯವಾಗಿದ್ದು. ನನ್ನ ಎಣಿಕೆಗಿಂತಲೂ ಹೆಚ್ಚಾಗಿ ಕೂದಲು ಬೆಳ್ಳಗಾಗಿತ್ತು. ಪ್ರತೀ ಸಾರಿ ಕ್ಷೌರಕ್ಕೆ ಬಂದಾಗಲೂ ಹೆಚ್ಚು ವಯಸ್ಸಾದಂತೆ ಭಾಸವಾಗುತ್ತಿತ್ತು. ಹೌದು! ನನಗೆ ವಯಸ್ಸಾಗುತ್ತಿದೆ! ಹಿಂದೆಲ್ಲ "ಅರವತ್ತು" ವರ್ಷಕ್ಕೆ ವಯಸ್ಸಾಯ್ತು ಅನ್ನುತ್ತಿದ್ದರು. ಈಗ ಮೂವತ್ತೈದು ದಾಟಿದರೆ ವಯಸ್ಸಾದಂತೆ ಕಾಣುವ ಪರಿಸ್ಥಿತಿ. ಅದರಲ್ಲೂ ನನ್ನ ವಯಸ್ಸು ೩೮. ಇತ್ತ ಯುವಕನೂ ಅಲ್ಲ, ಅತ್ತ ಮುದುಕನೂ ಅಲ್ಲ! ಸಧ್ಯಕ್ಕೆ, ನೆರೆಮನೆ ಮಕ್ಕಳಿನ್ನೂ, "ಅಂಕಲ್" ಎಂದೇ ಕೂಗುತ್ತಿದ್ದಾರೆ. ಕಪ್ಪು ಕೂದಲು ಹೀಗೆ ಮಾಯವಾಗುತ್ತಾ ಬಂದರೆ, "ತಾತ" ಎಂದು ಕರೆಸಿಕೊಳ್ಳುವ ದಿನ ಬಹಳ ದೂರವೇನಿಲ್ಲ!&lt;br /&gt;&lt;br /&gt;ನನಗಿನ್ನೂ ನೆನಪಿದೆ, ಚಿಕ್ಕವನಾಗಿದ್ದಾಗ ನಾನು ಹೋಗುತ್ತಿದ್ದ ಆ "ರೋಮಿಯೊ" ಹೇರ್ ಕಟಿಂಗ್ ಶಾಪ್. ಅಪ್ಪ ನನ್ನ ಒಳಗೆ ಕಳಿಸಿ, ಹೊರಗೆ ನಿಲ್ಲುತ್ತಿದ್ದರು. ನನಗೊ, ಕಟಿಂಗ್ ಶಾಪಿನಲ್ಲಿ, ಅವನು ನನಗೋಸ್ಕರ ಹಾಕುತ್ತಿದ್ದ ಆ ಎತ್ತರದ ಮಣೆ, ಬಹಳ ಆಕರ್ಷಣೆ. ಅದರ ಮೇಲೆ ಕುಳಿತಾಗಲೆಲ್ಲಾ ಏನೋ ರಾಜನ ಸಿಂಹಾಸನದ ಮೇಲೆ ಕುಳಿತಷ್ಟು ಆನಂದ. ಯಾವುದೋ ಗುಂಗಿನಲ್ಲಿರುತ್ತಿದ್ದೆ. ಕ್ಷೌರಿಕನ ಕಚಗುಳಿ ಇಡುವ ಆ ರೇಜ಼ರ್, ನನ್ನ ಆನಂದಕ್ಕೆ ಭಂಗ ತರುತ್ತಿತ್ತು. ಕಟಿಂಗ್ ಮುಗಿಯುತ್ತಿದ್ದಂತೇ, ಅಪ್ಪನ ಅಪ್ಪಣೆಯಾಗುತ್ತಿತ್ತು."ನೋಡು, ಮನೆಗೆ ಹೋಗಿ ಯಾರನ್ನೂ ಮುಟ್ಟದೆ, ಏನ್ನನ್ನು ಮುಟ್ಟದೆ ಸ್ನಾನ ಮಾಡ್ಬೇಕು ಗೊತ್ತಾ?" ಎಷ್ಟಾದರೂ ನಮ್ಮದು ಮಡಿವಂತರ ಮನೆ, ಕೇಳಬೇಕೇ? ನೂಎಂಟು ನಿಯಮಗಳು. ಅದಕ್ಕೆಂದೇ, ನಮ್ಮನೇಲಿ, ಕಟಿಂಗ್‌ಗೆ ಹೋಗಿ ಬಂದವರಿಗೆ, ಹಿಂದಿನ ಬಾಗಿಲಿಂದಲೇ ಪ್ರವೇಶ. ಮನೆ ಒಳಗೆ ಹೋಗುವ ಮೊದಲು, ಅಲ್ಲೇ ಹಿತ್ತಲಲ್ಲಿ ಒಗೆಯುವ ಕಟ್ಟೆ ಹತ್ತಿರ ಅಮ್ಮ ರೆಡಿ ಮಾಡಿ ಇಟ್ಟಿರುತ್ತಿದ್ದ ಬಿಸಿ ನೀರಿನ ಸ್ನಾನ. ನಾನು ಎಷ್ಟೋ ಸಾರಿ, ಅಲ್ಲಿ ಇಲ್ಲಿ ಮುಟ್ಟಿ, ಅಮ್ಮನನ್ನು ಮುಟ್ಟಿ, ಉಗಿಸಿ ಕೊಂಡದ್ದಿದೆ. ಅಪ್ಪನಿಂದ ಒಂದೆರಡು ಬಾರಿ ಮಡಿ ಹಾಳು ಮಾಡಿದ್ದಕ್ಕಾಗಿ ಕಜ್ಜಾಯ ಕೂಡ ತಿಂದಿದ್ದೇನೆ!&lt;br /&gt;&lt;br /&gt;ನಾನಾಗೇ ಮೊದಲ ಸಾರಿ, ಸ್ವತಂತ್ರವಾಗಿ, ಕಟಿಂಗ್‌ಗೆ ಹೋದ ದಿನ ನನಗಿನ್ನೂ ನೆನಪಿದೆ. ಅಪ್ಪ ಬೇರೆ ಊರಿಗೆ ಹೋಗಿದ್ದರಿಂದ, ಅಮ್ಮ ನನ್ನ ಕೈಯಲ್ಲಿ ಎರಡು ರೂಪಾಯಿಯ ಎರಡು ನೋಟಿತ್ತು, "ತಗೊ ನಾಲಕ್ಕು ರೂಪಾಯಿ. ಚಿಲ್ಲರೆ ಜೋಪಾನವಾಗಿ ತಗೊಂಬಾ, ತಿಳೀತಾ?" ಅಂದಿದ್ದಳು. ಅದೇ ಮೊದಲ ಬಾರಿ ನನ್ನ ಕೈಯಲ್ಲಿ ನಾಲಕ್ಕು ಭಾರೀ ರೂಪಾಯಿಗಳು! ಚೆಡ್ಡಿಯ ಕಿಸೆಯಲ್ಲಿಟ್ಟರೆ, ಎಲ್ಲಿ ಕಳೆದು ಹೋಗುತ್ತದೊ ಎಂದು, ಭದ್ರವಾಗಿ ಬಲಗೈ ಮುಷ್ಠಿಯಲ್ಲಿ, ಕಟಿಂಗ್ ಆಗುವರೆಗೂ ಮಡಿಸಿಟ್ಟುಕೊಂಡಿದ್ದೆ. ಅವನು ಕೊಟ್ಟ "ಎಂಟಾಣೆ" ಚಿಲ್ಲರೆಯನ್ನು ಅಮ್ಮನಿಗೆ ಒಪ್ಪಿಸುವ ತನಕ ನನಗೆ ಬಹಳ ಕಳವಳ. ಎಂದಿನಂತೆ ಅಲ್ಲಿ , ಇಲ್ಲಿ ಹೋಗದೆ, ಸೀದಾ ಮನೆಗೆ "ಬಸ್ಸು" ಬಿಡುತ್ತಾ ಓಡಿ ಬಂದಿದ್ದೆ. ನಾನು ನೆಲದ ಮೇಲೆ ಹಾಕಿದ ಎಂಟಾಣೆಯನ್ನು. ನೀರು ಚೆಲ್ಲಿ, ಶುದ್ಧಿಗೊಳಿಸಿ, ಅಮ್ಮ ತೆಗೆದುಕೊಂಡ ಮೇಲೇನೆ, ನಾನು ದೊಡ್ಡ ಜವಾಬ್ದಾರಿ ಕಳೆದಂತೆ ನಿಟ್ಟಿಸುರು ಬಿಟ್ಟಿದ್ದು!&lt;br /&gt;&lt;br /&gt;ಆಮೇಲೆಲ್ಲಾ, ಕಟಿಂಗ್‌ಗೆ ಒಬ್ಬನೇ ಹೋಗುತ್ತಿದ್ದೆ. ನನಗೆ ತುಂಬಾ ಭಯ ಹುಟ್ಟಿಸುತ್ತಿದ್ದ ಆಸಾಮಿಯೊಬ್ಬನಿದ್ದ. ಅವನಿಗೆ ನಾನಿಟ್ಟ ಹೆಸರು "ಮೀಸೆ ಮಾಮ". ನನ್ನನ್ನು ಕಂಡರೆ, ಅವನಿಗೇನೋ ಮೋಜು. ಬಹಳ ಕೀಟಳೆ ಮಾಡುತ್ತಿದ್ದ. ನಾನು ಕ್ಷೌರಕ್ಕೆಂದು ಕೂತಾಗ, ಹಿಂದಿನಿಂದ ಬಂದು, ಕೈಯಲ್ಲಿದ್ದ ರೇಜ಼ರ್ ಝಳಪಿಸುತ್ತಾ, "ನಿನ್ನ ಕಿವಿ ಕುಯ್ದು ಬಿಡ್ತೀನಿ" ಎಂದು ಕರ್ಕಷವಾಗಿ ನಗುತ್ತಿದ್ದ. ಎಷ್ಟೊ ಸಾರಿ, ಕಟಿಂಗ್‌ಗೆ ಹೋಗಿ ಅವನಲ್ಲಿರುವುದ ಕಂಡು, ಒಳಗೆ ಹೋಗದೆ, ವಾಪಸ್ಸು ಮನೆಗೆ ಬಂದಿದ್ದಿದೆ. ಅಪ್ಪನಿಗೆ ಹೇಳಿದರೆ, ಕೇಳಿ ನಕ್ಕು ಬಿಡುತ್ತಿದ್ದರು. ಕೆಲವು ಸಾರಿ, ನನ್ನ ಕನಸಲ್ಲೂ ಅವನು ಬಂದು, ನಾನು ಹಾಸಿಗೆ ಒದ್ದೆ ಮಾಡಿದ್ದಿದೆ.&lt;br /&gt;&lt;br /&gt;ನಾನು ಹೈಸ್ಕೂಲು ಓದುತ್ತಿದ್ದಾಗ, ಬಚ್ಚನ್‌ನ ಸ್ಟೆಪ್ ಕಟಿಂಗ್ ಸ್ಟೈಲು ಬಹಳ ಜನಪ್ರಿಯವಾಗಿತ್ತು. ನನಗೂ ಅದೇನೊ ಸ್ಟೆಪ್ ಕಟಿಂಗ್ ಮಾಡಿಸಿಕೊಳ್ಳಬೇಕೆಂಬ ಹುಚ್ಚು ಹಿಡಿದಿತ್ತು. ಅಪ್ಪನಿಗೆ ಹೇಳುವ ಧೈರ್ಯವಿರಲಿಲ್ಲ. ಅಮ್ಮನನ್ನು ಕಾಡಿದ್ದೆ, ಬೇಡಿದ್ದೆ. ಎಷ್ಟೇ ಗೋಳಿಟ್ಟರೂ ಮನೆಯಲ್ಲಿ ಯಾರೂ ಒಪ್ಪಲೇ ಇಲ್ಲ. ನನಗೋ ಆ ಹೈರ್ ಸ್ಟೈಲ್ ಮಾಡಿಸಿಕೊಳ್ಳಲೇ ಬೇಕೆಂಬ ಹುಚ್ಚು ಹಠ. ಕಡೆಗೊಂದು ದಿನ, ನನ್ನ ಫಜೀತಿ ನೋಡಲಾಗದೆ, ಅಮ್ಮನೇ ಅಪ್ಪನಲ್ಲಿ ಮಾತಾಡಿ, ಒಪ್ಪಿಸಿದ್ದಳು. "ಆ ಹಾಳು ಕಟಿಂಗ್ ಮಾಡಿಸಿಕೊಂಡು, ಅದೇನು ಉದ್ಧಾರ ಆಗ್ತಾನೋ ನಾನೂ ನೋಡ್ತಿನಿ" ಅಂತ ಅಪ್ಪ ಅಮ್ಮನಿಗೆ ಹೇಳಿದ್ದು ಕಿಟಕಿ ಹಿಂದೆ ನಿಂತು ಕೇಳಿಸಿಕೊಳ್ಳುತ್ತಿದ್ದ ನನ್ನ ಕಿವಿಗೆ ಬಿದ್ದಿತ್ತು. ಏನಾದರಾಗಲಿ, ಒಪ್ಪಿಗೆ ದೊರೆಯಿತಲ್ಲ ಎಂದು ಹಿರಿ ಹಿರಿ ಹಿಗ್ಗಿದ್ದೆ. ಮರು ದಿನವೇ ಕಟಿಂಗ್ ಶಾಪ್‌ಗೆ ಓಡಿದ್ದೆ. ಕುರ್ಚಿ ಮೇಲೆ ಕುಳಿತು "ಸ್ಟೆಪ್ ಕಟಿಂಗ್" ಎಂದು ಅಪ್ಪಣೆ ಇತ್ತಿದ್ದೆ. ಮನದಲ್ಲೇ ಏನೋ ಖುಶಿ. ಕಟಿಂಗ್ ಆದಮೇಲೆ, ನಾನು ಬಚ್ಚನ್‌ನಂತೆಯೇ ಕಾಣುತ್ತೇನೆ ಎನ್ನುವ ಭ್ರಮೆ! ಕಟಿಂಗ್ ಮುಗಿದಿತ್ತು. ನನಗೆ ನಿರಾಶೆ ಕಾದಿತ್ತು. ನನ್ನ ಮುಖ ಮೊದಲಿಗಿಂತಲೂ ವಿಚಿತ್ರವಾಗಿ ಕಾಣುತ್ತಿತ್ತು. ನನ್ನ ಆಶಾ ಗೋಪುರವೆಲ್ಲ ಕಳಚಿಬಿದ್ದಿತ್ತು. ಕಟಿಂಗ್ ಶಾಪ್‌ನಲ್ಲಿದ್ದವರೆಲ್ಲ " ಹಲೋ ಬಚ್ಚನ್" ಎಂದು ಗೇಲಿ ಮಾಡಿದ್ದರು. ಮನೆಯಲ್ಲೂ ಮುಖಕ್ಕೆ ಮಂಗಳಾರತಿಯಾಗಿತ್ತು. "ಏನೋ ಅವಸ್ಥೆ ನಿಂದು? ಕಿವಿ ಮೇಲೆ ಕೂದಲು ಹಾಗೆ ಇದೆ. ಕಟಿಂಗ್ ಮಾಡದಲೇ, ಆರು ರುಪಾಯಿ ಕಿತ್ಕೊಂಡು ಕಳ್ಸಿದ್ದಾನೆ, ಹಜಾಮ" ಎಂದು ಮಾತಲ್ಲೇ ಕೊಂದರು ಅಪ್ಪ. ನನಗೆ ಮುಖಭಂಗವಾಗಿತ್ತು. ಅಂದಿನಿಂದ, ಕಟಿಂಗ್‌ಗೆ ಹೋದಾಗ "ಮೀಡಿಯಂ" ಎಂದು ಹೇಳಿ ತೆಪ್ಪಗೆ ಕೂರುತ್ತೇನೆ. ಬಹಳ ದಿನಗಳವರೆಗೆ ನಮ್ಮ ಏರಿಯದಲ್ಲಿ, "ಬಚ್ಚನ್" ಎಂದೇ ನನ್ನ ಕರೆದು ಗೇಲಿ ಮಾಡುತ್ತಿದ್ದರು ಜನ.&lt;br /&gt;&lt;br /&gt;ಈ ಬಚ್ಚನ್ ವೃತ್ತಾಂತವಾದ ಮೇಲೆ, ಕಟಿಂಗ್ ಶಾಪ್‌ನಲ್ಲಿ, ನಾನು ತಮಾಷೆಯ ವಸ್ತುವಾಗಿದ್ದೆ. ಇನ್ನೂ ಮೀಸೆ, ಗಡ್ಡ ಬರದ ನನಗೆ, "ಸೇ(ಶೇ)ವ್ ಮಾಡಲಾ ಮಗಾ?" ಎಂದು ಕೇಳಿ ಅವರವರಲ್ಲೆ, ತೆಲುಗಿನಲ್ಲಿ ಮಾತಾಡಿಕೊಂಡು ನಗುತ್ತಿದ್ದರು, ಕ್ಷೌರಿಕರು. ಆಗೆಲ್ಲಾ ಬಹಳ ಸಿಟ್ಟು ಬರುತ್ತಿತ್ತು. ಈ ಗಡ್ಡ,ಮೀಸೆ ಯಾಕಿಷ್ಟು ತಡ ಬರುವುದು ಎಂದು ಹಲುಬಿದ್ದಿದೆ. ಗಡ್ಡ, ಮೀಸೆ ಇದ್ದವರನ್ನು ನೋಡಿದಾಗ ಏನೋ ಒಂದು ತರಹದ ದ್ವೇಷ. ಛೆ! ಈ ಹಾಳು ಯೌವ್ವನ, ಬೇಗಲಾದರೂ ಬರಬಾರದೇ ಎಂದು ಕೊರಗಿದ್ದಿದೆ. ಆಗ ಬೇಗ ವಯಸ್ಸಾಗಲಿ ಎಂಬ ಆತುರ. ಈಗ, ಅಯ್ಯೋ , ಏಕಿಷ್ಟು ಬೇಗ ವಯಸ್ಸಾಗುತ್ತಿದೆ ಎಂಬ ದುಃಖ! ಜೀವನವೇ ಹೀಗೆ. ಬೇಕು ಎಂಬುದು ನಮಗೆ ಬೇಕಾದಾಗ ಸಿಗುವುದಿಲ್ಲ. ಸಿಕ್ಕಾಗ, ಅದು ನಮಗೆ ಬೇಡವಾಗಿರುತ್ತೆ!&lt;br /&gt;&lt;br /&gt;"ಸಾರ್, ಆಯ್ತು" ಎನ್ನುವ ಧ್ವನಿ, ನನ್ನನ್ನು ವಾಸ್ತವಕ್ಕೆ ಕರೆತಂದಿತ್ತು. ಕ್ಷೌರದ ರಾಮ, ಹೊದಿಕೆಯನ್ನು ಸರಿಸಿ, ಕೊಡವಿ, ಮತ್ತೆ ಯಥಾಸ್ಥಾನದಲ್ಲಿ ಮಡಿಸಿಟ್ಟ. ಇನ್ನೊಂದು ಕುರ್ಚಿಯಲ್ಲಿ, ನನ್ನ ಮಗನ ಕ್ಷೌರ ನಡೆದಿತ್ತು. ಯಾಕೋ ಮುಖ ಊದಿಸಿ ಕುಳಿತಿದ್ದ. " ಯಾಕೋ, ಏನಾಯ್ತು?" ಅಂದೆ.&lt;br /&gt;"ಮತ್ತೆ, ಮತ್ತೆ, ಅಂಕಲ್ ನನ್ನ ಕಿವಿ ಕುಯ್ತೀನಿ ಅಂತ ಹೆದರಿಸ್ತಾರೆ" ಅಂದ.&lt;br /&gt;ಮೀಸೆಯಡಿಯಲ್ಲೇ ನಕ್ಕಿದೆ. ಜೀವನದ ಚಕ್ರ ತಿರುಗುತ್ತಿತ್ತು!&lt;br /&gt;&lt;br /&gt;ಗಿರೀಶ್ ಜಮದಗ್ನಿ&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5064341961341191540-5670857160118108519?l=girishjamadagni.blogspot.com' alt='' /&gt;&lt;/div&gt;</content><link rel='replies' type='application/atom+xml' href='http://girishjamadagni.blogspot.com/feeds/5670857160118108519/comments/default' title='Post Comments'/><link rel='replies' type='text/html' href='http://www.blogger.com/comment.g?blogID=5064341961341191540&amp;postID=5670857160118108519' title='2 Comments'/><link rel='edit' type='application/atom+xml' href='http://www.blogger.com/feeds/5064341961341191540/posts/default/5670857160118108519'/><link rel='self' type='application/atom+xml' href='http://www.blogger.com/feeds/5064341961341191540/posts/default/5670857160118108519'/><link rel='alternate' type='text/html' href='http://girishjamadagni.blogspot.com/2010/07/blog-post.html' title='ಚಕ್ರ !'/><author><name>Girish Jamadagni</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>2</thr:total></entry><entry><id>tag:blogger.com,1999:blog-5064341961341191540.post-2064434119535485359</id><published>2010-06-22T19:23:00.002+08:00</published><updated>2010-06-22T19:47:22.954+08:00</updated><title type='text'>ಅಪ"ಶಕುನಿ"ಗಳು!</title><content type='html'>&lt;span style=";font-family:Tunga;font-size:130%;"  &gt;ಗಾಢನಿದ್ದೆಯಲ್ಲಿ  ಕನಸು ಕಾಣುತ್ತಾ ಮಲಗಿದ್ದ ನನಗೆ ಎಲ್ಲೋ  ದೂರದಲ್ಲಿ ಗಂಟೆ ಬಾರಿಸಿದ ಸದ್ದು. ಏನಿದು ಎಂದು ನೋಡಲು  ಪ್ರಯತ್ನಿಸಿದರೆ, ಕಣ್ಣೂ ಬಿಡಲಾಗಲಿಲ್ಲ. ತಲೆ ಮೇಲೆ ಏನೊ  ಬಂಡೆಹೊತ್ತಿರುವಂತೆ ಭಾಸವಾಯ್ತು. ಗಾಬರಿಯಿಂದ ಅರೆನಿದ್ದೆಯಲ್ಲೇ  ಕಿರುಚಿದೆ "ತಲೆ ಮೇಲೆ ಬಂಡೆ..ತೆಗೀರಿ..ತೆಗೀರಿ". ನನಗಿಂತಲೂ  ಜೋರಾಗಿ ಅರಚುತ್ತಲೇ ಬಂದ ನನ್ನವಳು "ಬಂಡೆಯಲ್ಲ ಅದು..ನಿಮ್ಮದೆ  ದಿಂಬು" ಎಂದು ತಲೆ ಮೇಲಿಂದ ದಿಂಬು ಸಡಿಲಿಸಿದಳು. "ಗಂಟೆ  ಏಳಾಯ್ತು...ಇವತ್ತಾದ್ರೂ ಎದ್ದು ತಾಲ್ಲೂಕು ಆಫೀಸ್‌ಗೆ  ಹೋಗ್ತೀರೊ ಇಲ್ಲ ಯಾವ್ದೋ ಅಪಶಕುನ ಅಂತ ಮನೇಲೇ ಕೂತಿರ್ತೀರೋ?".  "ಹೋಗ್ತೀನಿ, ಹೋಗ್ತೀನಿ...ಇಲ್ದೆ ಇದ್ರೆ ಮನೇಲಿ ನಿರಾಳವಾಗಿ  ಕೂರಕ್ಕೆ ನೀ ಬಿಡಬೇಕಲ್ಲ" ಗೊಣಗುತ್ತಲೇ ಬೆಡ್‌ಶೀಟ್  ಸರಿಸುತ್ತಾ ಎದ್ದೆ. ಏಳುತ್ತಾ ಒಂದು ತಪ್ಪು ಕೆಲಸ ಮಾಡಿದ್ದೆ.  ಅಪ್ಪಿ ತಪ್ಪಿ ಎಡದಾಮಗ್ಗಲಿನಿಂದ ಎದ್ದಿದ್ದೆ. ಅಯ್ಯೋ,  ಇನ್ನು ಇವತ್ತು ನನ್ನ ಕೆಲಸ ಆದ ಹಾಗೆ! ಏಳುತ್ತಲೇ ಅಪಶಕುನ.  ನನ್ನವಳು ರೂಮಿನಲ್ಲಿ ಇಲ್ಲದ್ದು ಖಾತ್ರಿ ಮಾಡಿಕೊಂಡು  ಐದು ನಿಮಿಷವಾದ ಮೇಲೆ ಬಲದ ಮಗ್ಗಲಿನಿಂದ ಸರಿಯಾಗಿ ಏಳೋಣವೆಂದು  ಮತ್ತೆ ಮಲಗಿದೆ.&lt;br /&gt;&lt;br /&gt;&lt;/span&gt; &lt;p style="text-align: left; margin: 0.0001pt;"&gt;&lt;span style=";font-family:Tunga;font-size:130%;"  &gt; &lt;/span&gt;&lt;span style="font-size:130%;"&gt; &lt;/span&gt;&lt;/p&gt; &lt;p style="text-align: left; margin: 0.0001pt;"&gt;&lt;span style=";font-family:Tunga;font-size:130%;"  &gt;ಸರಿಯಾಗಿ  ಐದು ನಿಮಿಷವಾದ ಮೇಲೆ, ಹೊಸ ಹುರುಪಿನಿಂದ ಸರಿಯಾಗಿ  ಬಲದ ಕಡೆಯಿಂದ ಹಾಸಿಗೆ ಬಿಟ್ಟೆದ್ದೆ. ಏಳುತ್ತಾ ಇನ್ನೊಂದು  ಎಡವಟ್ಟೂ ಮಾಡಿದ್ದೆ. ಕೆಳಗೆ ಹಾಸಿಗೆ ಮೇಲೆ ಮಲಗಿದ್ದ ನನ್ನ  ಮಗನ ಕೈ ತುಳಿದಿದ್ದೆ. ಸಿಹಿ ನಿದ್ದೆಯಲ್ಲಿದ್ದ ಅವನು "ಹೋ"  ಎಂದು ಅಳಲು ಶುರು ಮಾಡಿದ. ಇನ್ನೊಂದು ಅಪಶಕುನವಾಯ್ತಲ್ಲಪ್ಪ  ! ಬೆಳಗ್ಗೆ ಏಳ್ತಾ ಮಗು ಅಳ್ತಿರೋ ಸದ್ದು ಕೇಳಿ ಎದ್ದರೆ,  ದಿನದಲ್ಲಿ ಯಾವ ಕೆಲಸವೂ ನೆಟ್ಟಗೆ ಆಗೋಲ್ಲ ಅಂತ ಅಜ್ಜಿ  ಹೇಳಿದ್ದು ನೆನಪಾಯ್ತು. ಮಗನನ್ನು ಸಮಾಧಾನ ಮಾಡುವಷ್ಟರಲ್ಲಿ,  ಅಡಿಗೆ ಮನೆಯಿಂದಲೇ "ಏನಾಯ್ತ್ರಿ ಮಗೂಗೆ" ಅಂತ ಧಾವಿಸಿ  ಬಂದೇ ಬಿಟ್ಟಳು ಮಡದಿ, ಕೈಯಲ್ಲಿ ವಿಷ್ಣು ಸಹಸ್ರನಾಮದ ಪುಸ್ತಕ  ಹಿಡಿದು. ಕೆಕ್ಕರಿಸಿ ನನ್ನತ್ತಲೇ ನೊಡಿದಳು, ನಾನೇ ಅಪರಾಧಿ  ಎನ್ನುವಂತೆ. "ನಿದ್ದೆ ಮಾಡುತ್ತಿದ್ದ ಮಗು ಯಾಕೆ ಅಳ್ತಿದೆ?  ನಿಮ್ದೇ ಏನಾದ್ರು ಕಿತಾಪತಿ ಅನ್ಸುತ್ತೆ". ನನ್ನನ್ನೂ,  ನನ್ನ ಗುಣಗಳನ್ನೂ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಳು.  ಇನ್ನು ಹೇಳದಿದ್ದರೆ ಭೂಮಿ ಆಕಾಶ ಒಂದು ಮಾಡಿಬಿಡುತ್ತಿದ್ದಳು.  ಸರಿ, ಮನಸ್ಸು ಗಟ್ಟಿ ಮಾಡಿಕೊಂಡು ಆಗಿದ್ದೆಲ್ಲ ಒಂದೇ ಉಸಿರಿನಲ್ಲಿ  ಒಪ್ಪಿಸಿಬಿಟ್ಟೆ. ವಿಷ್ಣುಸಹಸ್ರನಾಮದ ಪುಸ್ತಕ ಮುಚ್ಚಿಟ್ಟು,  ಹತ್ತು ನಿಮಿಷ ನನ್ನ ಸಹಸ್ರನಾಮ ಮಾಡಿದಳು. ದಿನದ ಆರಂಭ ಎರಡು  ಅಪಶಕುನದಿಂದ ಶುರುವಾದ ಮೇಲೆ ಇನ್ನು ಮುಂದೇನು ಕಾದಿದೆಯೊ  ಅಂತ ಗಾಬರಿಯಾಯ್ತು.&lt;/span&gt;&lt;/p&gt; &lt;p style="text-align: left; margin: 0.0001pt;"&gt;&lt;span style=";font-family:Tunga;font-size:130%;"  &gt; &lt;/span&gt;&lt;span style="font-size:130%;"&gt; &lt;/span&gt;&lt;/p&gt; &lt;p style="text-align: left; margin: 0.0001pt;"&gt;&lt;span style=";font-family:Tunga;font-size:130%;"  &gt;ತಾಲ್ಲೂಕು  ಆಫೀಸಿನಲ್ಲಿ ನನಗೆ ಬಹಳ ಮುಖ್ಯ ಕೆಲಸವಾಗಬೇಕಿತ್ತು.  ಎಷ್ಟೋ ದಿನದಿಂದ ಪ್ರಯತ್ನಪಟ್ಟರೂ ಒಂದಿಲ್ಲೊಂದು ಅಪಶಕುನ  ಎದುರುಬಂದು ನನ್ನ ಕೆಲಸವಾಗುತ್ತಲೇ ಇರಲಿಲ್ಲ. ಇವತ್ತು  ಏನಾದರೂ ಮಾಡಿ ಆ ಕೆಲಸ ಮುಗಿಸಲೇ ಬೇಕೆಂದು ನಿರ್ಧಾರಮಾಡಿದ್ದೆ.  ಆದರೆ, ಅಪಶಕುನಗಳ ಮೇಲೆ ಅಪಶಕುನಗಳು. ಸ್ನಾನ ಮಾಡಿ ದೇವರ  ವಿಗ್ರಹದ ಮೇಲೆ ಹೂವಿಟ್ಟು ಕಣ್ಣು ಮುಚ್ಚಿ ನಿಂತೆ "ಹೋಗ್ತಾ  ಇರೋ ಕೆಲಸ ನಿರ್ವಿಜ್ಞವಾಗಿ ಆಗಲಪ್ಪ" ಎಂದು ಮನದಲ್ಲೇ  ಬೇಡಿಕೊಂಡೆ. ಕಣ್ಣು ಬಿಟ್ಟಾಗ ನಾ ಇಟ್ಟಿದ್ದ ಹೂವು ಕೆಳ  ಬಿದ್ದಿತ್ತು. ಯಾವ ಕಡೆಯಿಂದ ಬಿತ್ತೋ.. ಬಲಗಡೆಯಿಂದಲೋ, ಇಲ್ಲ  ಎಡಗಡೆಯಿಂದಲೋ...ಛೆ...ಇಂದಿನ ಶಕುನವೇ ಸರಿ ಇಲ್ಲ. ಹೂವನ್ನು,  ನನ್ನ ಕಿವಿಯ ಮೇಲಿಟ್ಟುಕೊಂಡು ಹೊರಬಂದೆ.&lt;/span&gt;&lt;/p&gt;&lt;p style="text-align: left; margin: 0.0001pt;"&gt;&lt;span style=";font-family:Tunga;font-size:130%;"  &gt;&lt;br /&gt;&lt;/span&gt;&lt;/p&gt; &lt;p style="text-align: left; margin: 0.0001pt;"&gt;&lt;span style=";font-family:Tunga;font-size:130%;"  &gt; &lt;/span&gt;&lt;span style="font-size:130%;"&gt; &lt;/span&gt;&lt;/p&gt; &lt;p style="text-align: left; margin: 0.0001pt;"&gt;&lt;span style=";font-family:Tunga;font-size:130%;"  &gt;"ಲೇ,  ಶರ್ಟ್ ಎಲ್ಲಿಟ್ಟಿದಿಯಾ" ಕೂಗಿದೆ. "ಇನ್ನೆಲ್ಲಿ,  ದಿನ ಇಡೋ ಜಾಗದಲ್ಲಿ" ಒಳಗಿನಿಂದ ಬಂದಿತ್ತು ಟೆಲಿಗ್ರಾಂ‌ನಂತೆ  ಕ್ಲಿಷ್ಟ ಸಂದೇಶ. ಹೌದಲ್ವಾ? ನಾ ಯಾಕೆ ದಿನಾ ಇದೆ ಪ್ರಶ್ನೆ  ಕೇಳಿ ಮಂಗಳಾರತಿ ಮಾಡಿಸ್ಕೊತೀನಿ? ಅದು ದಿನ ಅಲ್ಲೆ ಇರುತ್ತೆ  ಅನ್ನೋದು ಮರೆತೇ ಹೊಗುತ್ತೆ. ವೃತ್ತಿಯಲ್ಲಿ ಲಾಯರ್. ಹಾಳಾದ್ದು  ಪ್ರಶ್ನೆ ಕೇಳೋ ಅಭ್ಯಾಸ ಆಗಿಹೋಗಿದೆ. ಶರ್ಟ್‌ನ ಗುಂಡಿ  ಹಾಕುತ್ತ, ಇವತ್ತು ಆಫೀಸರ್‌ನ ಭೇಟಿಯಾದಾಗ ಹೇಗೆ, ಏನು ಮಾತನಾಡಬೇಕು  ಅಂತ ಮನದಲ್ಲೇ ಅಭ್ಯಾಸಮಾಡಿಕೊಳ್ಳುತ್ತಿದ್ದೆ. ಅಷ್ಟರಲ್ಲಿ  ಬಾಂಬಿನ ಸದ್ದಿನಂತೆ ನನ್ನ ಕಿವಿಗೆ ಅಪ್ಪಳಿಸಿದ್ದು ಕಸ  ಗುಡಿಸುತ್ತಿದ್ದ ಕೆಲಸದವಳು ಸೀನಿದ ಸದ್ದು. ಒಂಟಿ ಸೀನು!  ಮತ್ತೊಂದು ಅಪಶಕುನ. ಇನ್ನು ಮುಗಿದೇ ಹೋಯಿತು. ಜೋಡಿಯಾಗಲೆಂದು  ನಾನೇ ಇನ್ನೊಂದು ಸೀನಿದೆ. ಆದರೂ ಮನಸ್ಸಿಗೆ ಸಮಾಧಾನವಾಗಲಿಲ್ಲ. &lt;/span&gt;&lt;/p&gt; &lt;p style="text-align: left; margin: 0.0001pt;"&gt;&lt;span style=";font-family:Tunga;font-size:130%;"  &gt; &lt;/span&gt;&lt;span style="font-size:130%;"&gt; &lt;/span&gt;&lt;/p&gt; &lt;p style="text-align: left; margin: 0.0001pt;"&gt;&lt;span style=";font-family:Tunga;font-size:130%;"  &gt;ಇಷ್ಟೆಲ್ಲಾ  ಅಪಶಕುನವಾದ ಮೇಲೂ ಹೋಗಲೇಬೇಕಾ ಎನ್ನುವಂತೆ  ನನ್ನವಳ ಕಡೆ ನೊಡಿದೆ. "ಸಾಧ್ಯವೇ ಇಲ್ಲ. ಹೋಗಲೇಬೇಕು"  ಎನ್ನುವಂತೆ ಕಣ್ಣಿಂದಲೇ ಬಂದಿತ್ತು ಉಗ್ರ ಸಂದೇಶ. ಸರಿ,  ನನ್ನ ಕರ್ಮ ಎಂದು ಚಪ್ಪಲಿ ಮೆಟ್ಟಿ ಮೆಟ್ಟಿಲಿಳಿದೆ. ನಡೆದು  ಹೋದರೆ ಇನ್ನು ಬೆಕ್ಕೋ, ಒಂಟಿ ಬ್ರಾಹ್ಮಣನೋ ಎದುರು ಬಂದು  ಇನ್ನಷ್ಟು ಅಪಶಕುನಗಳಾಗುತ್ತೆ ಎಂದು, ಮನೆ ಬಾಗಿಲಲ್ಲೇ  ನಿಂತೆ, ಆಟೋಗಾಗಿ ಕಾಯುತ್ತ. ಹತ್ತು ನಿಮಿಷವಾದರೂ ಆಟೋದವರು  ಖಾಲಿಯಿದ್ದರೂ ನಿಲ್ಲಿಸಲೇ ಇಲ್ಲ. ಕೊನೆಗೂ ಅಂತೂ ಒಬ್ಬ  ನಿಲ್ಲಿಸಿದ. ಸಧ್ಯ ಎಂದು ಅವನು ನಿಲ್ಲಿಸಿದಲ್ಲಿಗೇ ಓಡಿದೆ.  ಕೇಳೇಬಿಟ್ಟ ಅವನು "ಎಲ್ಲಿಗೇ ಸಾರ್". ನನಗೆ ಬಂದ ಕೋಪದಲ್ಲಿ,  "ಸುಡುಗಾಡಿಗೆ" ಎಂದು ಬಾಯಿಗೆ ಬಂದಿತ್ತು. ಎಲ್ಲಿಗೆ  ಅಂತ ಕೇಳಿಸಿಕೊಂಡ ಮೇಲೆ ಇನ್ನು ಹೋದ ಕೆಲಸ ಆಗುತ್ಯೆ? ಕೆಟ್ಟ  ಅಪಶಕುನವಲ್ಲವೇ?&lt;/span&gt;&lt;/p&gt;&lt;p style="text-align: left; margin: 0.0001pt;"&gt;&lt;span style=";font-family:Tunga;font-size:130%;"  &gt;&lt;br /&gt;&lt;/span&gt;&lt;/p&gt; &lt;p style="text-align: left; margin: 0.0001pt;"&gt;&lt;span style=";font-family:Tunga;font-size:130%;"  &gt; &lt;/span&gt;&lt;span style="font-size:130%;"&gt; &lt;/span&gt;&lt;/p&gt; &lt;p style="text-align: left; margin: 0.0001pt;"&gt;&lt;span style=";font-family:Tunga;font-size:130%;"  &gt;ವಾಪಸ್ಸು  ಮನೆಗೆ ಹೋದರೆ ನನ್ನವಳ ಶೋಕಾಸ್ ನೋಟೀಸ್‌ಗೆ ಉತ್ತರಿಸಬೇಕು.  ನನ್ನ ಗ್ರಹಚಾರ ಎಂದು ಹತ್ತಿ ಕುಳಿತೆ. ಮನಸ್ಸಿನಲ್ಲಿ ನಾನೇ  "ಬಿಡ್ತು" ಎಂದು ಮೂರು ಬಾರಿ ಹೇಳಿಕೊಂಡೆ. ಈ ವಿದ್ಯೆಯೆಲ್ಲಾ  ಅಜ್ಜಿ ಹೇಳಿಕೊಟ್ಟಿದ್ದು. "ಸಾರ್ ನಾನು ತಾಲ್ಲುಕ್ ಆಫೀಸ್  ಹತ್ರ ಬಿಡಲ್ಲ ಸಾರ್, ಅದರ ಮೊದ್ಲೇ ಇಳ್ಕೊಳ್ಳಿ" ಅಂದ. ಇದು  ಮಾಮೂಲಿ ಅಲ್ಲವ. ಆಟೋದವರು ಹೋದ ಕಡೆ ತಾನೆ ನಾವು ಹೋಗ್ಬೇಕು?  "ಸರಿ ಮಹರಾಯ, ಮೀಟರ್ ಹಾಕು" ಅಂತ ಹೇಳಿ ಹಿಂದಕ್ಕೆ ಒರಗಿ  ಕುಳಿತೆ.&lt;/span&gt;&lt;/p&gt;&lt;p style="text-align: left; margin: 0.0001pt;"&gt;&lt;span style=";font-family:Tunga;font-size:130%;"  &gt;&lt;br /&gt;&lt;/span&gt;&lt;/p&gt; &lt;p style="text-align: left; margin: 0.0001pt;"&gt;&lt;span style=";font-family:Tunga;font-size:130%;"  &gt; &lt;/span&gt;&lt;span style="font-size:130%;"&gt; &lt;/span&gt;&lt;/p&gt; &lt;p style="text-align: left; margin: 0.0001pt;"&gt;&lt;span style=";font-family:Tunga;font-size:130%;"  &gt;ಎರಡು  ನಿಮಿಷವಾಗಿರಲಿಲ್ಲ. "ಸಾರ್, ಮೀಟರ್ ಓಡ್ತಾ ಇದ್ಯಾ,  ಸ್ವಲ್ಪ ನೋಡಿ ಹೇಳಿ" ಅಂದ. ಮೀಟರ್ ಕಡೆ ನೋಡಿದೆ. ಗಾಬರಿಯಾಯ್ತು.  ನಿಜವಾಗ್ಲೂ ಜೋರಾಗೇ "ಓಡ್ತಾ" ಇತ್ತು. "ಏನಪ್ಪ ಸಿಕ್ಕಾಪಟ್ಟೆ  ಓಡ್ತಾ ಇದ್ಯಲ್ಲ?" ಅಂದೆ. "ಆಟೋನೂ ಜೋರಾಗೇ ಓಡ್ತಾ ಇದ್ಯಲ್ಲಾ  ಸಾರ್" ಅಂತ ಹಲ್ಲು ಕಿರಿದ.&lt;br /&gt;&lt;/span&gt;&lt;/p&gt;&lt;p style="text-align: left; margin: 0.0001pt;"&gt;&lt;span style=";font-family:Tunga;font-size:130%;"  &gt;&lt;br /&gt;&lt;/span&gt;&lt;/p&gt; &lt;p style="text-align: left; margin: 0.0001pt;"&gt;&lt;span style=";font-family:Tunga;font-size:130%;"  &gt; &lt;/span&gt;&lt;span style="font-size:130%;"&gt; &lt;/span&gt;&lt;/p&gt; &lt;p style="text-align: left; margin: 0.0001pt;"&gt;&lt;span style=";font-family:Tunga;font-size:130%;"  &gt;ಆಟೋ  ನಿಲ್ಲಿಸಿದ್ದಲ್ಲಿಂದಲೇ ಏದುಸಿರು ಬಿಡುತ್ತಾ ತಾಲ್ಲೂಕ್  ಕಚೇರಿಯತ್ತ ನಡೆದೆ. ಬಾಗಿಲಲ್ಲೇ ಪ್ಯೂನ್ ಪುಟ್ಸಾಮಿ ಸಿಕ್ಕಿ  ಹಲ್ಲು ಕಿರಿದ. ನನ್ನಿಂದ ಆದಷ್ಟು ದುಡ್ಡು ಕಸಿಯಬೇಕೆಂದು,  ಬಹಳ ದಿನಗಳಿಂದ ಪ್ರಯತ್ನಿಸುತ್ತಲೇ ಇದ್ದ. "ಸಾಯೇಬ್ರು  ಲೇಟ್ ಇವತ್ತು. ಅವರ ಸಂಬಂಧಿ ಮದುವೆ. ಕುಂತ್ಕಳಿ ಬತ್ತಾರೆ"  ಅಂದ. ಬೆಂಚಿನ ಮೇಲೆ ಕುಳಿತೆ. ಸಮಯ ನೋಡಿದೆ. ಹತ್ತು ಗಂಟೆ  ಆಗುತ್ತಿತ್ತು. ಆಗಲೇ ನನಗೆ ನೆನಪಿಗೆ ಬಂದಿದ್ದು. ಇವತ್ತು  ಸೋಮವಾರ. ರಾಹುಕಾಲ ೭.೩೦ ಇಂದ ೯.೦೦. ಅಂದರೆ, ನಾನು ಮನೆ ರಾಹುಕಾಲದಲ್ಲಿ  ಬಿಟ್ಟಿದ್ದೆ. ಛೆ! ಏನಾಗಿದೆ ಇವತ್ತು. ಒಂದರ ಮೇಲೆ ಒಂದು  ಅಪಶಕುನಗಳು. ನನ್ನ ಮೇಲೆಯೇ ನನಗೆ ಸಿಟ್ಟು ಬಂದಿತ್ತು.&lt;/span&gt;&lt;/p&gt;&lt;p style="text-align: left; margin: 0.0001pt;"&gt;&lt;span style=";font-family:Tunga;font-size:130%;"  &gt;&lt;br /&gt;&lt;/span&gt;&lt;/p&gt; &lt;p style="text-align: left; margin: 0.0001pt;"&gt;&lt;span style=";font-family:Tunga;font-size:130%;"  &gt; &lt;/span&gt;&lt;span style="font-size:130%;"&gt; &lt;/span&gt;&lt;/p&gt; &lt;p style="text-align: left; margin: 0.0001pt;"&gt;&lt;span style=";font-family:Tunga;font-size:130%;"  &gt;ಇನ್ನೇನು  ಮಾಡುವುದು. ಬಂದಾಗಿತ್ತಲ್ಲ. ಕಾಲಹರಣ ಮಾಡುತ್ತಾ  ಕುಳಿತೆ. ಅತ್ತಿತ್ತ ನೋಡಿದೆ. ನನ್ನತ್ತಲೇ ವಯಸ್ಸಾದ ವ್ಯಕ್ತಿಯೊಬ್ಬ  ಬರುತ್ತಿದ್ದ. ಹತ್ತಿರ ಬಂದಾಗ ಗೊತ್ತಾಯ್ತು ಯಾರು ಅಂತ.  ಹಿಂದೊಮ್ಮೆ ಸಿಕ್ಕಿ ಒಂದು ಗಂಟೆ ತಲೆ ಕೊರೆದಿದ್ದ ಮನುಷ್ಯ.  ಈಗಾಗಲೇ ಅಪಶಕುನಗಳ ಹೊಡೆತಗಳಿಂದ ತಲೆ ಕೆಟ್ಟಿತ್ತು. ಇನ್ನು  ಅವನ ಭೈರವಿ ರಾಗ ಕೇಳಲು ಸಂಯಮವೇ ಇಲ್ಲ. ಹತ್ತಿರ ಬಂದು ಕೇಳೇ  ಬಿಟ್ಟ.&lt;/span&gt;&lt;/p&gt; &lt;p style="text-align: left; margin: 0.0001pt;"&gt;&lt;span style=";font-family:Tunga;font-size:130%;"  &gt; &lt;/span&gt;&lt;span style="font-size:130%;"&gt; &lt;/span&gt;&lt;/p&gt; &lt;p style="text-align: left; margin: 0.0001pt;"&gt;&lt;span style=";font-family:Tunga;font-size:130%;"  &gt;"ನೀವು  ಸೀತಾರಾಂ ಅಲ್ಲವೇ".&lt;/span&gt;&lt;/p&gt; &lt;p style="text-align: left; margin: 0.0001pt;"&gt;&lt;span style=";font-family:Tunga;font-size:130%;"  &gt; &lt;/span&gt;&lt;span style="font-size:130%;"&gt; &lt;/span&gt;&lt;/p&gt; &lt;p style="text-align: left; margin: 0.0001pt;"&gt;&lt;span style=";font-family:Tunga;font-size:130%;"  &gt;"ಅಲ್ಲ  ನಾನು ಸೇತುರಾಂ" ಗಡಸು ದನಿಯಲ್ಲೇ ಉತ್ತರಿಸಿದೆ.  ಅರುಳೊ ಮರುಳೊ ಆದರೂ, ನನ್ನ ಹೆಸರನ್ನು ಹೆಚ್ಚು ಕಮ್ಮಿ ಸರಿಯಾಗೇ  ನೆನಪಿನಲ್ಲಿಟ್ಟುಕೊಂಡಿದ್ದ.&lt;/span&gt;&lt;/p&gt; &lt;p style="text-align: left; margin: 0.0001pt;"&gt;&lt;span style=";font-family:Tunga;font-size:130%;"  &gt; &lt;/span&gt;&lt;span style="font-size:130%;"&gt; &lt;/span&gt;&lt;/p&gt; &lt;p style="text-align: left; margin: 0.0001pt;"&gt;&lt;span style=";font-family:Tunga;font-size:130%;"  &gt;"ಎರಡೂ  ಹೆಸರೂ ಸಾಕೇತಪುರವಾಸಿ ಶ್ರಿರಾಮಚಂದ್ರನದೇ ಅಲ್ಲವೇ,  ಪರವಾಗಿಲ್ಲ. ಏನು ಬಂದಿದ್ದು?". ನನಗೆ ಸಾಕು ಸಾಕಾಯ್ತು. &lt;/span&gt;&lt;/p&gt; &lt;p style="text-align: left; margin: 0.0001pt;"&gt;&lt;span style=";font-family:Tunga;font-size:130%;"  &gt; &lt;/span&gt;&lt;span style="font-size:130%;"&gt; &lt;/span&gt;&lt;/p&gt; &lt;p style="text-align: left; margin: 0.0001pt;"&gt;&lt;span style=";font-family:Tunga;font-size:130%;"  &gt;"ತಾಲ್ಲೂಕ್  ಕಚೇರಿಯಲ್ಲಿ ಹಾಕೋ ತಿಥಿ ಊಟಕ್ಕೆ ಬಂದಿದ್ದೆ"  ಎಂದು ಹೇಳೋಣವೆಂದುಕೊಂಡೆ. ಆ ವ್ಯಕ್ತಿ ಅದೂ ನಿಜವೆಂದುಕೊಂಡುಬಿಟ್ಟರೆ  ಅಂತ "ಅದೇ ಹಿಂದಿನ ಸಾರಿ ಹೇಳಿದ್ನಲ್ಲ, ಅದೇ ಕೆಲಸಕ್ಕೆ"  ಬಂದೆ ಅಂದೆ.&lt;/span&gt;&lt;/p&gt; &lt;p style="text-align: left; margin: 0.0001pt;"&gt;&lt;span style=";font-family:Tunga;font-size:130%;"  &gt; &lt;/span&gt;&lt;span style="font-size:130%;"&gt; &lt;/span&gt;&lt;/p&gt; &lt;p style="text-align: left; margin: 0.0001pt;"&gt;&lt;span style=";font-family:Tunga;font-size:130%;"  &gt;"ಏನು?  ಇನ್ನೂ ಆಗಿಲ್ಲವೇ ನಿಮ್ಮ ಆ ಕೆಲಸ?" ಗಾಯದ ಮೇಲೆ  ಉಪ್ಪು ಖಾರ ಚೆನ್ನಾಗಿ ಹಚ್ಚುತ್ತಿದ್ದ ಆ ಆಸಾಮಿ. ನನಗೆ  ಹುಚ್ಚು ಹಿಡಿಯುವುದು ಒಂದು ಬಾಕಿ. ಬರುತ್ತಿರುವ ಕೋಪ ತಡೆದು  "ಇಲ್ಲ" ಅಂದಷ್ಟೆ ಹೇಳಿ ಬೇರೆತ್ತಲೋ ನೋಡಿದೆ.&lt;br /&gt;&lt;/span&gt;&lt;/p&gt;&lt;p style="text-align: left; margin: 0.0001pt;"&gt;&lt;span style=";font-family:Tunga;font-size:130%;"  &gt;&lt;br /&gt;&lt;/span&gt;&lt;/p&gt; &lt;p style="text-align: left; margin: 0.0001pt;"&gt;&lt;span style=";font-family:Tunga;font-size:130%;"  &gt; &lt;/span&gt;&lt;span style="font-size:130%;"&gt; &lt;/span&gt;&lt;/p&gt; &lt;p style="text-align: left; margin: 0.0001pt;"&gt;&lt;span style=";font-family:Tunga;font-size:130%;"  &gt;ಇನ್ನು  ಇವತ್ತು ನನ್ನ ಕೆಲಸವಾಗುವ ಹಾಗೆ ಕಾಣಿಸೋದಿಲ್ಲ  ಅಂತ ಜಾಗ ಬಿಟ್ಟು ಎದ್ದೆ. "ಅಯ್ಯೊ, ಯಾಕೆ ಹೊರಟು ಬಿಟ್ಟಿರಿ.  ಬನ್ನಿ ಕೂತ್ಕೊಳ್ಳಿ. ಬಹಳ ದಿನವಾಯ್ತು, ನಿಮ್ಮೊಂದಿಗೆ  ಮಾತನಾಡಿ" ಕೈ ಹಿಡಿದು ಮತ್ತೆ ಕೂರಿಸಿದ ಆ ವ್ಯಕ್ತಿ. ನನಗೆ  ಬಲವಂತದ ಮಾಘ ಸ್ನಾನ. "ಸರಿ ಹೇಳಿ" ಅಂದೆ.&lt;/span&gt;&lt;/p&gt;&lt;p style="text-align: left; margin: 0.0001pt;"&gt;&lt;span style=";font-family:Tunga;font-size:130%;"  &gt;&lt;br /&gt;&lt;/span&gt;&lt;/p&gt; &lt;p style="text-align: left; margin: 0.0001pt;"&gt;&lt;span style=";font-family:Tunga;font-size:130%;"  &gt; &lt;/span&gt;&lt;span style="font-size:130%;"&gt; &lt;/span&gt;&lt;/p&gt; &lt;p style="text-align: left; margin: 0.0001pt;"&gt;&lt;span style=";font-family:Tunga;font-size:130%;"  &gt;"ಮತ್ತೆ,  ನೀವು ಯಾವ ಕೆಲಸದ ಮೇಲೆ ಇಲ್ಲಿ ಬಂದಿರೋದು".  ಸರಿ, ಶುರುವಾಯ್ತು. ಇನ್ನು ಮೊದಲಿನಿಂದ ಪೂರ್ತಿ  ಹೇಳಬೇಕು.  ಅಷ್ಟರಲ್ಲಿ, ಪುಟ್ಸಾಮಿ ಬಂದು ಮತ್ತೆ ಹಲ್ಲು ಕಿರಿದ "ಸಾಯೆಬ್ರು,  ಬೇಗ್ನೇ ಬಂದವ್ರೆ. ಸೀಟ್ನಾಗೆ ಕುಂತವ್ರೆ" ಅಂದ. ಸಧ್ಯ  ಎಂದು ಹೊರಡಲು ಎದ್ದೆ. ಬಿಡಬೇಕಲ್ಲ ನನ್ನ ಪಕ್ಕದಲ್ಲಿದ್ದ  ಸೀನಿಯರ್ ಸಿಟಿಜ಼ನ್. "ಕೂತ್ಕೊಳ್ಳಿ, ಕೂತ್ಕೊಳ್ಳಿ, ಮಾತಾಡೋಣ"  ಅನ್ನೋದೆ. ಅಲ್ಲ ನಾ ಏನು ಮಾತನಾಡುವ ಗೊಂಬೇನಾ? ಸಿಕ್ಕಿದವರ  ಹತ್ತಿರವೆಲ್ಲ, ಅವರ ಸಮಯ ಕಳೆಯಲು ಹರಟೆ ಹೊಡೆಯುವುದಕ್ಕೆ.  "ಅದೆ, ನಿಮ್ಮ ಕೇಸ್ ಹೇಳ್ತಿದ್ದರಲ್ಲ, ಹೇಳಿ" ಅಂದ. "ಮರ್ಡರ್  ಕೇಸ್" ಅನ್ನೋಣವೆಂದುಕೊಂಡೆ. ಮುದುಕ ಹಾಗೆ ಹಾರ್ಟ್ ಅಟಾಕ್  ಆಗಿ ಗೊಟಕ್ ಅಂದ್ರೆ ಅಂತ ಹೆದರಿ "ದೊಡ್ಡ ಕೇಸ್ ಏನಿಲ್ಲ,  ಸಣ್ಣ ಕೆಲಸ" ಅಂದೆ.&lt;/span&gt;&lt;/p&gt;&lt;p style="text-align: left; margin: 0.0001pt;"&gt;&lt;span style=";font-family:Tunga;font-size:130%;"  &gt;&lt;br /&gt;&lt;/span&gt;&lt;/p&gt; &lt;p style="text-align: left; margin: 0.0001pt;"&gt;&lt;span style=";font-family:Tunga;font-size:130%;"  &gt; &lt;/span&gt;&lt;span style="font-size:130%;"&gt; &lt;/span&gt;&lt;/p&gt; &lt;p style="text-align: left; margin: 0.0001pt;"&gt;&lt;span style=";font-family:Tunga;font-size:130%;"  &gt;ಮತ್ತೆ  ಬಂದ ಪುಟ್ಸಾಮಿ "ಇನ್ನು ಅರ್ದ ಗಂಟೆ ಯಾನು ಬಿಡಬೇಡ  ಅಂತ ಸಾಯೇಬ್ರು ಏಳವ್ರೆ" ಅಂದ. ಸರಿ ಹೋಯ್ತು. ಇನ್ನು ಬೇರೆ  ವಿಧಿ ಇರಲಿಲ್ಲ. ನನ್ನ ಕೇಸು, ಕೆಲಸ ಎಲ್ಲ ಮುದುಕನಿಗೆ ಒದರಿದೆ.  ಎಲ್ಲ ಕೇಳಿ "ಅಯ್ಯೋ ಇಷ್ಟೇನಾ? ಇದಕ್ಕೆ ನೀವು ಆರು ತಿಂಗಳಿಂದ  ಅಲೆಯುತ್ತಿದ್ದೀರಾ?" ಅಂತ ಬೊಚ್ಚು ಬಾಯಗಲಿಸಿ ನಕ್ಕ.  ಅದರಲ್ಲಿ ಅಷ್ಟೊಂದು ನಗಲು ಜೋಕ್ ಏನಿದೆ ಎಂದು ಅರ್ಥವಾಗಲಿಲ್ಲ.  ಎಲ್ಲ ಅಪಶಕುನಗಳ ಲೀಲೆ ಎನ್ನಲು ಹೋದೆ. ಹಾಳಾಗಿ ಹೋಗಲಿ ಅವನಿಗ್ಯಾಕೆ  ಜಾಸ್ತಿ ವಿವರಣೆ ಅಂತ ಸುಮ್ಮನಾದೆ.&lt;/span&gt;&lt;/p&gt;&lt;p style="text-align: left; margin: 0.0001pt;"&gt;&lt;span style=";font-family:Tunga;font-size:130%;"  &gt;&lt;br /&gt;&lt;/span&gt;&lt;/p&gt; &lt;p style="text-align: left; margin: 0.0001pt;"&gt;&lt;span style=";font-family:Tunga;font-size:130%;"  &gt; &lt;/span&gt;&lt;span style="font-size:130%;"&gt; &lt;/span&gt;&lt;/p&gt; &lt;p style="text-align: left; margin: 0.0001pt;"&gt;&lt;span style=";font-family:Tunga;font-size:130%;"  &gt;ನಕ್ಕಿದ್ದೆಲ್ಲ  ಮುಗಿದ ಮೇಲೆ "ಎಲ್ಲಿ ನಿಮ್ಮ ಕೇಸ್‌ನ  ಕಾಗದ ಎಲ್ಲ ಕೊಡಿ" ಅಂದ. ಇನ್ನೇನಪ್ಪ ಗ್ರಹಚಾರ? ಎಲ್ಲ ಕಾಗದ  ನನ್ನಿಂದ ಕಸಿದು ಓಡಿ ಹೋಗಿ ಬಿಟ್ಟರೆ? ಹುಚ್ಚರಂತೆ ಕಾಣುವುದಿಲ್ಲ.  ಆದರೂ ಕಲಿಯುಗದಲ್ಲಿ ಯಾರನ್ನೂ ನಂಬಲಾಗುವುದಿಲ್ಲ. "ಇಲ್ಲ  ಬೇಡ ಬಿಡಿ" ಅಂದೆ. ಉಹೂಂ..ಮುದುಕ ಕೇಳಬೇಕಲ್ಲ! ನನ್ನ ಬ್ಯಾಗ್‌ನಿಂದ  ಪೇಪರ್ ಎಲ್ಲಾ ತೆಗೆದುಕೊಂಡು ಹೊರಟೇಬಿಟ್ಟ. ಅಯ್ಯೊ.. ಇದೊಳ್ಳೆ  ಕಥೆ ಆಯ್ತಲ್ಲಾ ಎಂದು ಅವರ ಹಿಂದೆ ಓಡಿದೆ. ಪುಟ್ಸಾಮಿಯೇ  ನನ್ನ ತಡೆದು ಹೇಳಿದ. "ಎದರ್ಕೊಬ್ಯಾಡಿ. ಓಗ್ಲಿ ಬಿಡಿ. ಎಲ್ಲಿ  ಓಗ್ತಾರೆ. ಆಯಪ್ಪನೆ ಬಂದು ನಿಮಗೆ ಪೇಪರ್ ವಾಪಸ್ಸು ಕೊಡ್ತಾರೆ  ಅತ್ತು ನಿಮಿಷದಲ್ಲಿ". ನಾನು ಅಳೋದೊಂದು ಬಾಕಿ.&lt;/span&gt;&lt;/p&gt;&lt;p style="text-align: left; margin: 0.0001pt;"&gt;&lt;span style=";font-family:Tunga;font-size:130%;"  &gt;&lt;br /&gt;&lt;/span&gt;&lt;/p&gt; &lt;p style="text-align: left; margin: 0.0001pt;"&gt;&lt;span style=";font-family:Tunga;font-size:130%;"  &gt; &lt;/span&gt;&lt;span style="font-size:130%;"&gt; &lt;/span&gt;&lt;/p&gt; &lt;p style="text-align: left; margin: 0.0001pt;"&gt;&lt;span style=";font-family:Tunga;font-size:130%;"  &gt;ಇನ್ನೇನು  ಮಾಡೊದು? ಅಲ್ಲೇ ಕಾದೆ. ಹತ್ತಲ್ಲ. ಇಪ್ಪತ್ತು ನಿಮಿಷವಾಯ್ತು.  ಮುದುಕನ ಪತ್ತೇಯೇ ಇಲ್ಲ. ಬಂದ ಕೆಲಸ ಆಗೋದು ಇರಲಿ, ನನ್ನ  ಎಲ್ಲಾ ಕಾಗದಗಳನ್ನೂ ಕಳಕೊಂಡಿದ್ದೆ. ಇನ್ನು ನನಗೆ ಮನೆಯಲ್ಲಿ  ಏನು ಕಾದಿದೆಯೋ ಎಂದು ಹೊರಡುತ್ತಿದ್ದಾಗ, ಬಂದೇ ಬಿಟ್ಟ  ಮುದುಕಪ್ಪ. "ತಗೊಳ್ಳಿ, ನಿಮ್ಮ ಎಲ್ಲ ಕಾಗದಗಳು..ಹಿ.ಹಿ.ಹಿ..ಹಾಗೆ  ಇದೆ. ಯಾವ್ದೂ ಕಳೆದಿಲ್ಲ". ಸಧ್ಯ ಸಿಕ್ಕಿತಲ್ಲ, ಒಳ್ಳೆ  ಹುಚ್ಚನ ಸಹವಾಸವಾಯ್ತು, ಎಂದು ಬ್ಯಾಗಿನಲ್ಲಿ ತುರುಕಿದೆ.  ಸಾಹೇಬರ ರೂಮಿಗೆ ಹೊರಡುತ್ತಿದ್ದವನನ್ನು ಮತ್ತೆ ಹಿಡಿದು  ನಿಲ್ಲಿಸಿದ ಮುದುಕ. "ಕಾಗದ ನೋಡದೆ ಬ್ಯಾಗ್‌ಗೆ ಸೇರಿಸಿಬಿಟ್ರಲ್ಲ.  ಒಮ್ಮೆ ತೆಗೆದು ನೋಡಿ". ಅದ್ಯಾಕಪ್ಪ, ಅದರಲ್ಲೂ ಏನಾದ್ರು  ಕರಾಮತ್ತು ಮಾಡಿದಾನ? ಹಾಳಾಗಿ ಹೋಗ್ಲಿ ಅಂತ ಪೇಪರ್ ತೆಗೆದೆ.  ಆಶ್ಚರ್ಯ! ಎಲ್ಲ ಕಾಗದದ ಮೇಲೂ ಸಾಹೇಬ್ರ ಸಹಿ! ಅಂದರೆ ಆರು  ತಿಂಗಳಿಂದ ಅಲೆಯುತ್ತಿದ್ದ ಕೆಲಸ ಆಗಿ ಹೋಗಿತ್ತು.&lt;br /&gt;&lt;/span&gt;&lt;/p&gt;&lt;p style="text-align: left; margin: 0.0001pt;"&gt;&lt;span style=";font-family:Tunga;font-size:130%;"  &gt;&lt;br /&gt;&lt;/span&gt;&lt;/p&gt; &lt;p style="text-align: left; margin: 0.0001pt;"&gt;&lt;span style=";font-family:Tunga;font-size:130%;"  &gt; &lt;/span&gt;&lt;span style="font-size:130%;"&gt; &lt;/span&gt;&lt;/p&gt; &lt;p style="text-align: left; margin: 0.0001pt;"&gt;&lt;span style=";font-family:Tunga;font-size:130%;"  &gt;ಮುದುಕ  ಬೊಚ್ಚು ಬಾಯಗಲಿಸಿ ನಗುತ್ತಿದ್ದ. "ನಿಮಗೆ ಗೊತ್ತಿಲ್ಲ,  ನೀವು ಯಾರನ್ನು ಸಾಹೇಬ್ರು ಅಂತೀರೋ, ಅವರು ನನ್ನ ಎರಡನೇ  ಅಳಿಯ. ನಿಮ್ಮ ಕೇಸ್‌ನಲ್ಲಿ, ಸುಮಾರು ತೊಂದರೆಗಳಿತ್ತು.  ನೀವೇ ಹೋಗಿ ಮಾಡೋದಾದ್ರೆ, ತುಂಬಾ ಸತಾಯಿಸ್ತಾರೆ. ಅದಕ್ಕೆ,  ನಾನೇ ಅಳಿಯನಿಗೆ ಕೊಟ್ಟು ಕೆಲಸ ಮಾಡಿಸಿದ್ದೀನಿ. ನಿಮ್ಮ  ಕೇಸ್‌ನಲ್ಲಿರೊ ಕೆಲವು ತೊಂದರೆಗಳನ್ನು ಸರಿ ಮಾಡ್ಸಿದ್ದೀನಿ.  ನಿಮ್ಮ ಕೆಲಸ ಆಗಿದೆ" ಎನ್ನುತ್ತಾ, ಮತ್ತೆ ಕಿರುನಗೆ ನಕ್ಕು  ಹೊರಟೆ ಬಿಟ್ಟರು. ನನಗಾಗಿದ್ದ ಸಂತೋಷ, ಆಶ್ಚರ್ಯದಲ್ಲಿ,  ಅವರನ್ನು ಬಾಯಿತುಂಬಾ ಅಭಿನಂದಿಸುವುದನ್ನೂ ಮರೆತಿದ್ದೆ.  ಹಿಂದಿನ ಪೀಳಿಗೆಯವರೇ ಹಾಗೇ ಏನೋ. ಗೊತ್ತು, ಪರಿಚಯ ಇಲ್ಲದೇ  ಇದ್ರೂ, ಇನ್ನೊಬ್ಬರಿಗೆ ಸಹಾಯ ಮಾಡಲು ಸದಾ ಸಿದ್ಧ. ಪಾಪ,  ಅವರ ಬಗ್ಗೆ ಅಪಾರ್ಥ ಮಾಡಿಕೊಂಡಿದ್ದಕ್ಕೆ ನನಗೇ ನಾಚಿಕೆಯಾಯ್ತು. &lt;/span&gt;&lt;/p&gt; &lt;p style="text-align: left; margin: 0.0001pt;"&gt;&lt;span style=";font-family:Tunga;font-size:130%;"  &gt; &lt;/span&gt;&lt;span style="font-size:130%;"&gt; &lt;/span&gt;&lt;/p&gt; &lt;p style="text-align: left; margin: 0.0001pt;"&gt;&lt;span style=";font-family:Tunga;font-size:130%;"  &gt;ಬೆಳಗ್ಗಿನಿಂದ  ಅಷ್ಟೊಂದು ಅಪಶಕುನಗಳು ನನ್ನನ್ನು ಕಾಡಿದ್ದರೂ  ನನ್ನ ಬಹುದಿನಗಳ ಕೆಲಸ ಸುಗಮವಾಗಿ ಆಗಿತ್ತು! ಬೇಗ ಮನೆಗೆ  ಹೋಗಿ ನನ್ನವಳ ಮುಂದೆ ಈ ನನ್ನ (!) ಸಾಧನೆಯನ್ನು ಕೊಚ್ಚಿಕೊಳ್ಳಬೇಕೆಂದು  ಆಟೋ ಹತ್ತಿದೆ.&lt;/span&gt;&lt;/p&gt; &lt;p style="text-align: left; margin: 0.0001pt;"&gt;&lt;span style=";font-family:Tunga;font-size:130%;"  &gt; &lt;/span&gt;&lt;span style="font-size:130%;"&gt; &lt;/span&gt;&lt;/p&gt; &lt;p style="text-align: left; margin: 0.0001pt;"&gt;&lt;span style=";font-family:Tunga;font-size:130%;"  &gt;ಬಾಗಿಲು  ತೆಗೆದ ಅವಳ ಗಡಿಗೆ ಮುಖ ನನ್ನನ್ನು ನೋಡಿದಾಕ್ಷಣ  ಇನ್ನೂ ಊದಿ ಕೆಂಪು ಕುಂಬಳಕಾಯಾಯ್ತು. ನನ್ನ ಕೆಲಸವಾಗಿದ್ದನ್ನು  ಬಡಬಡನೆ ಹೇಳಿದೆ. ಯಾಕೋ ಖುಶಿಯಾಗಲಿಲ್ಲ ಅವಳಿಗೆ. ಸಿಟ್ಟು  ಇನ್ನೂ ಜೋರಾಗುತ್ತಿರುವಂತಿತ್ತು. ಅವಳ ಹಿಂದೆ ಅದುವರೆಗೂ  ಮರೆಯಾಗಿ ನಿಂತಿದ್ದ ನನ್ನ ಕುಮಾರ ಕಂಠೀರವ ಮುಂದೆ ಬಂದ.  ನೋಡಿದರೆ, ಅವನ ಎಡಗೈಗೆ ಪ್ಲಾಸ್ಟರ್!!!&lt;br /&gt;&lt;/span&gt;&lt;/p&gt;&lt;p style="text-align: left; margin: 0.0001pt;"&gt;&lt;span style=";font-family:Tunga;font-size:130%;"  &gt;&lt;br /&gt;&lt;/span&gt;&lt;/p&gt; &lt;p style="text-align: left; margin: 0.0001pt;"&gt;&lt;span style=";font-family:Tunga;font-size:130%;"  &gt; &lt;/span&gt;&lt;span style="font-size:130%;"&gt; &lt;/span&gt;&lt;/p&gt; &lt;p style="text-align: left; margin: 0.0001pt;"&gt;&lt;span style=";font-family:Tunga;font-size:130%;"  &gt;"ಏನಾಯ್ತೋ?  ಎಲ್ಲಿ ಬಿದ್ದು ಬಂದೆ" ಅಂದೆ.&lt;br /&gt;&lt;/span&gt;&lt;/p&gt;&lt;p style="text-align: left; margin: 0.0001pt;"&gt;&lt;span style=";font-family:Tunga;font-size:130%;"  &gt;&lt;br /&gt;&lt;/span&gt;&lt;/p&gt; &lt;p style="text-align: left; margin: 0.0001pt;"&gt;&lt;span style=";font-family:Tunga;font-size:130%;"  &gt; &lt;/span&gt;&lt;span style="font-size:130%;"&gt; &lt;/span&gt;&lt;/p&gt; &lt;p style="text-align: left; margin: 0.0001pt;"&gt;&lt;span style=";font-family:Tunga;font-size:130%;"  &gt;"ಅವನು  ಎಲ್ಲೂ ಬೀಳಲಿಲ್ಲ. ಇದೆಲ್ಲಾ ನಿಮ್ಮ ಅಪಶಕುನದ  ಪರಮಾವಧಿ" ಎಂದಳು ಅರ್ಧಾಂಗಿ. ಯೋಚಿಸಿದೆ. ಸಮಸ್ಯೆಯ ಅರ್ಧ  ಭಾಗವೂ ಅರ್ಥವಾಗಲಿಲ್ಲ. ಪ್ರಶ್ನಾರ್ಥಕ ಚಿಹ್ನೆಯನ್ನು  ಮುಖದ ಮೇಲಿಟ್ಟುಕೊಂಡು ಅವಳತ್ತ ನೋಡಿದೆ.&lt;/span&gt;&lt;/p&gt;&lt;p style="text-align: left; margin: 0.0001pt;"&gt;&lt;span style=";font-family:Tunga;font-size:130%;"  &gt;&lt;br /&gt;&lt;/span&gt;&lt;/p&gt; &lt;p style="text-align: left; margin: 0.0001pt;"&gt;&lt;span style=";font-family:Tunga;font-size:130%;"  &gt; &lt;/span&gt;&lt;span style="font-size:130%;"&gt; &lt;/span&gt;&lt;/p&gt; &lt;p style="text-align: left; margin: 0.0001pt;"&gt;&lt;span style=";font-family:Tunga;font-size:130%;"  &gt;"ನಿಮ್ಮ  ಶಕುನ ಶಾಸ್ತ್ರದ ಪ್ರಕಾರ, ಬೆಳಗ್ಗೆ ಬಲದಾ ಮಗ್ಗಲಿನಿಂದ  ಏಳಲು ಹೋಗಿ, ಮಗನ ಕಾಲು ತುಳಿದ್ರಲ್ಲಾ, ಅದರ ಫಲಿತಾಂಶ ಇದು.  ಎಡ ಮಗ್ಗಲಲ್ಲೇ ಎದ್ದು ಹೋಗಿದ್ದರೆ ಏನಾಗ್ತಿತ್ತು ನಿಮ್ಗೆ?".&lt;br /&gt;&lt;/span&gt;&lt;/p&gt;&lt;p style="text-align: left; margin: 0.0001pt;"&gt;&lt;span style=";font-family:Tunga;font-size:130%;"  &gt;&lt;br /&gt;&lt;/span&gt;&lt;/p&gt; &lt;p style="text-align: left; margin: 0.0001pt;"&gt;&lt;span style=";font-family:Tunga;font-size:130%;"  &gt; &lt;/span&gt;&lt;span style="font-size:130%;"&gt; &lt;/span&gt;&lt;/p&gt; &lt;p style="text-align: left; margin: 0.0001pt;"&gt;&lt;span style=";font-family:Tunga;font-size:130%;"  &gt;ಮುಂದಿನ  ಅರ್ಧ ಗಂಟೆ ಏನಾಯ್ತು ಎಂದು ಹೇಳುವ ಅವಶ್ಯಕತೆ  ಇಲ್ಲ ಅಲ್ಲವಾ? ಅದರ ಕಲ್ಪನೆ ನಿಮಗೆ ಬಿಟ್ಟದ್ದು. ಒಟ್ಟಿನಲ್ಲಿ  ಶಕುನವೇ ಸರಿ ಇಲ್ಲ ಸಾರ್ ಇವತ್ತು...!&lt;/span&gt;&lt;/p&gt; &lt;p style="text-align: left; margin: 0.0001pt;"&gt;&lt;span style=";font-family:Tunga;font-size:130%;"  &gt;&lt;/span&gt;&lt;span style=";font-family:Tunga;font-size:130%;"  &gt;-------------------------&lt;/span&gt;&lt;/p&gt; &lt;p style="text-align: left; margin: 0.0001pt;"&gt;&lt;span style=";font-family:Tunga;font-size:130%;"  &gt;ಗಿರೀಶ್  ಜಮದಗ್ನಿ&lt;/span&gt;&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5064341961341191540-2064434119535485359?l=girishjamadagni.blogspot.com' alt='' /&gt;&lt;/div&gt;</content><link rel='replies' type='application/atom+xml' href='http://girishjamadagni.blogspot.com/feeds/2064434119535485359/comments/default' title='Post Comments'/><link rel='replies' type='text/html' href='http://www.blogger.com/comment.g?blogID=5064341961341191540&amp;postID=2064434119535485359' title='5 Comments'/><link rel='edit' type='application/atom+xml' href='http://www.blogger.com/feeds/5064341961341191540/posts/default/2064434119535485359'/><link rel='self' type='application/atom+xml' href='http://www.blogger.com/feeds/5064341961341191540/posts/default/2064434119535485359'/><link rel='alternate' type='text/html' href='http://girishjamadagni.blogspot.com/2010/06/blog-post.html' title='ಅಪ&quot;ಶಕುನಿ&quot;ಗಳು!'/><author><name>Girish Jamadagni</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>5</thr:total></entry><entry><id>tag:blogger.com,1999:blog-5064341961341191540.post-7676325055474753535</id><published>2010-04-24T12:50:00.001+08:00</published><updated>2010-04-24T12:54:08.049+08:00</updated><title type='text'>ಹಂಡೆಯ ಹಗರಣ</title><content type='html'>ಹೀಗೆ ಒಂದು ಭಾನುವಾರದ ಮಧ್ಯಾಹ್ನ, ಮನೆ ಹಿತ್ತಲಿನ ಕಡೆ ಹೆಜ್ಜೆ ಹಾಕಿದ್ದೆ. ಮನೆ ಹಿಂದಿನ ಒಗೆಯೋ ಕಟ್ಟೆ ಮೇಲೆ ಕುಳಿತು, ಬಿಸಿಲು ಕಾಯಿಸುವುದು ನನ್ನ ಭಾನುವಾರದ ಪ್ರಮುಖ ಕಲಾಪಗಳಲ್ಲಿ ಒಂದು! ಕುಳಿತು ನಾಲ್ಕು ನಿಮಿಷವಾಗಿರಲಿಲ್ಲ, ಆಗಲೇ ಯಾರದೊ "ಅಣ್ಣಾ" ಎಂಬ ಆರ್ತನಾದ. ತಿರುಗಿ ನೋಡಿದರೆ, ಯಾರೂ ಇಲ್ಲ. ಮತ್ತೆರಡು ನಿಮಿಷದಲ್ಲಿ, ಮತ್ತೊಮ್ಮೆ ಕೂಗಿದ ಧ್ವನಿ. ಈ ಸಾರಿ ಬಿಡಲಿಲ್ಲ. ಕಂಡು ಹಿಡಿದೇ ಬಿಟ್ಟೆ. ಕೂಗಿದ್ದು ಮತ್ತಾರೂ ಅಲ್ಲ, "ಕೊಡ"ದ ಕಜ಼಼್ಇನ್..ಅದೇ ರೀ ಹಂಡೆ. ಹಿತ್ತಲಲ್ಲಿ ಹತ್ತು ವರುಷದಿಂದ ಹಾಳಾಗಿ ಬಿದ್ದಿದ್ದ ನಮ್ಮ ಮನೆ ಹಳೆ ಹಂಡೆ.&lt;br /&gt;&lt;br /&gt;ಹತ್ತಿರ ಹೋದೆ. ಪಾಪ, ತುಂಬಾ ವಯಸ್ಸಾದಂತೆ ಕಂಡಿತು. ಅಲ್ಲವೇ ಮತ್ತೆ! ನಮ್ಮ ಮುತ್ತಾತನ ಕಾಲದಿಂದಲೂ ನಮ್ಮ ಮನೆ ಸೇವೆಯಲ್ಲೇ ಜೀವ ತೇಯ್ದಿತ್ತು. ಕಳಕಳಿಯಿಂದ ಕೇಳಿದೆ. "ಏನಪ್ಪ, ಏನು ಸಮಾಚಾರ?"&lt;br /&gt;&lt;br /&gt;"ಅಯ್ಯೊ ಬುಡಿ, ಏನು ಏಳೋದು, ಯಾಕೋ ಟೇಮೇ ಸರಿ ಇಲ್ಲ", ಒಂದು ಕಡೆ ವಾಲಿಕೊಂಡು ಕುಳಿತಿದ್ದ ಹಂಡೆ ಹೇಳಿತು.&lt;br /&gt;&lt;br /&gt;"ಯಾಕಪ್ಪ, ಈಗೇನಾಯ್ತು?&lt;br /&gt;&lt;br /&gt;"ಮತ್ತಿನ್ನೇನಣ್ಣ, ಮೊದಲೆಲ್ಲ, ನನ್ನನ್ನ ಮನೆಯಾಗೆ ಮಡಿಕತಿದ್ರು. ಈಗ, ಗೀಜರ್ರು, ಈಟರ್ರು, ಸೋಲಾರು ಬಂದಮೇಲೆ ನಮ್ದು ಬೀದಿ ನಾಯಿ ಗತಿ. ಅದೂ ಸಾಲ್ದು ಅಂತ, ಈ ವಾಸ್ತು, ಪಾಸ್ತು ಅಂತ ನೋಡಿ, ನಮ್ಮನ್ನೆಲ್ಲ, ಮನೆ ಇಂದೆ ಅಟ್ತಿದಾರೆ, ಅಲೂರ?" ಅಂತು.&lt;br /&gt;&lt;br /&gt;ಹೌದು ಅನ್ನಿಸಿತು. ನಮ್ಮ ಮನೆಯಲ್ಲೂ ಅಷ್ಟೆ. ಮನೆ ಒಡೆದು ಕಟ್ಟಿಸಿದಾಗ, ೬೦ ವರುಷಗಳಿಂದ ನಮ್ಮ ಬಚ್ಚಲು ಮನೆಯಲ್ಲಿ ವಿರಾಜಮಾನವಾಗಿದ್ದ ಹಂಡೆಯನ್ನು ಮನೆ ಹಿಂದಕ್ಕೆ ದಯ ದಾಕ್ಷಿಣ್ಯವಿಲ್ಲದೆ ಎತ್ತಂಗಡಿ ಮಾಡಲಾಗಿತ್ತು.&lt;br /&gt;&lt;br /&gt;"ನಮಗೆ ಮೊದಲಿಂದ್ಲೂ ಈಗೆ, ತಾರ-ತಮ್ಮ ಮಾಡ್ಬುಟ್ಟವ್ರೆ ಎಲ್ಲ" ಅಂತು. "ಏನಪ್ಪ ಅದು ತಾರತಮ್ಯ" ಅಂದೆ.&lt;br /&gt;&lt;br /&gt;"ಇಲ್ವ ಮತ್ತೆ. ನಮಕ್ಕಿಂತ ಗಾತ್ರದಲ್ಲಿ ಕಮ್ಮಿ ಇರೋ ಆ ಕೊಡಕ್ಕೆ ಸಿಗೊ ಮರ್ವಾದೇಲಿ, ೧ ಪರ್ಸೆಂಟು ಸಿಗಾಕಿಲ್ಲ. ಕೊಡಕ್ಕೆ ಪೂಜೆ ಮಾಡ್ತಾರೆ, ಅಡಿಗೆ ಮನೇಲಿ ಜೋಪಾನವಾಗಿ ಮಡಿಕ್ಕತಾರೆ, ಎಲ್ಲಕಿಂತ ಎಚ್ಚಾಗಿ, ಉಡ್ಗೀರು, ಎಂಗಸ್ರೆಲ್ಲಾ, ಸೊಂಟದ್ಮೇಲೆ ಕುಂಡ್ರಿಸ್ಕೊಂಡು ಸುತ್ತಾಡಿಸ್ತಾರೆ. ಅದನ್ನೆಲ್ಲ ನೋಡಿದ್ರೆ, ರುದಯ ಚುರ್ರ್ ಅಂತೈತೆ ". ಓಹೋ, ಪೂಜೆ, ಅಡುಗೆ ಮನೇಲಿ ಜಾಗಕ್ಕಿಂತ ಹೆಚ್ಚಾಗಿ, ಪ್ರಾಯದ ಹುಡುಗಿಯರ ಸೊಂಟದ ಮೇಲೆ ಸೀಟ್ ಸಿಗಲಿಲ್ಲ ಅನ್ನೊ ಬೇಜಾರು.&lt;br /&gt;&lt;br /&gt;"ಅಲ್ಲ, ನಿನ್ನನ್ನ ಸೊಂಟದ ಮೇಲೆ ಕೂರಿಸ್ಕೊಂಡು, ಊರೆಲ್ಲ ಸುತ್ತಾಡಿದ್ರೆ, ಆ ನಾಜೂಕು ಸೊಂಟದ ಗತಿ ಏನೋ?" ಅಂದೆ.&lt;br /&gt;&lt;br /&gt;"ಹಿ..ಹಿ ಹಿ..ಅದು ಸರಿ ಬುಡಿ, ಏನೋ, ಉಣೆಸೆ ಅಣ್ಣಿನ ಉಳೀಲಿ ಮೈ ಉಜ್ಜಿಸ್ಕೊಂಡ ಮೇಲೆ, ಇದೆಲ್ಲ ಆಸೆ ಆಗುತ್ತಲ್ವಾ?" ಅನ್ನೊದೆ!&lt;br /&gt;&lt;br /&gt;"ಆದ್ರುನು, ಮೊದಲಿಂದ್ಲೂ, ನಮಗೆ, ಸಿಕ್ಕಾಪಟ್ಟೆ ದ್ರೋಹ ಆಗ್ಬುಟ್ಟೈತೆ".&lt;br /&gt;&lt;br /&gt;"ಅದು ಹ್ಯಾಗಪ್ಪಾ?"&lt;br /&gt;&lt;br /&gt;"ಮತ್ತೆ, ಕೊಡನಾ ದಿನಾ ಬೆಳಗಿ ಬೆಳಗಿ ಇಡ್ತಾರೆ. ಆದ್ರೆ, ನಮಗೆ ಚಿತ್ರ ಇಂಸೆ. ಅಲ್ಲಾಡದಂಗೆ ಕುಂಡ್ರಿಸಿ, ನಮ್ಮ ಒಟ್ಟೇ ತುಂಬಾ ನೀರು ಸುರಿದು, ದಿನ ಬೆಳಗ್ಗೆ, ಇಡಬಾರದ್ ಜಾಗದಲ್ಲೆಲ್ಲಾ, ಕೊಳ್ಳಿ, ಭೆರಣಿ ಇಟ್ಟು ಸೀಮೆ‌ಎಣ್ಣೆ ಆಕಿ ಸುಡತಾರೆ. ದಿನವೆಲ್ಲ ಉರಿಯತ್ತೆ ಗೊತ್ತಾ ಅಣ್ಣ?" ಅಂತು. ಥೂ...ಅಲ್ಲ..ಛೆ, ಅನ್ನಿಸ್ತು.&lt;br /&gt;&lt;br /&gt;"ಗಾದೆನಲ್ಲೂ ಅಷ್ಟೆ. ತುಂಬಿದ್ ಕೊಡ ತುಳಕಲ್ಲಾ, ಅಂತಾ ಏಳ್ಬುಟ್ಟವ್ರೆ. ಆದ್ರೆ, ಅಲ್ಲಾಡ್ದೆ, ಒಂದೇ ಕಡೆ ಕೂರೊ ನಾವು ತುಂಬಿದ್ರೂ ತುಳ್ಕೊದಿಲ್ಲ, ತುಂಬದೇ ಇದ್ರೂ ತುಳ್ಕಾದಿಲ್ಲ. ಅಲ್ಲೇನ್ ಸಾಮಿ?"&lt;br /&gt;&lt;br /&gt;ಪಾಯಿಂಟ್ ಸರಿ ಅಲ್ವ ಅನ್ನಿಸ್ತು.&lt;br /&gt;&lt;br /&gt;"ದೇವರು ಕೊಟ್ಟರೂ ಪೂಜಾರಿ ಕೊಡ, ಅನ್ನೊ ಗಾದೆನಲ್ಲೂ, ಕೊಡ ಯಾಕೆ ಸಾಮಿ"&lt;br /&gt;&lt;br /&gt;ಅಯ್ಯೊ, ಆ ಕೊಡ ಈ ಕೊಡ ಒಂದೆ ಅಲ್ಲ ಅಂತ ಹೇಳಲು ಹೋದರೆ, ಹಂಡೆ ಮಾತು ಮುಂದುವರಿಸೇ ಬಿಟ್ಟಿತ್ತು.&lt;br /&gt;&lt;br /&gt;"ಸರ್ವಙ್ನ ಮಹಾಸಯ ಕೂಡ, ಸೊಡಲೆಣ್ಣೆ ತೀರಿದರೆ, ಕೊಡನೆತ್ತಿ ಸುರಿವರೇ? ಅಂತ ಕೇಳ್ಬುಟ್ಟವ್ರೆ, ಅದ್ರೆ ಸೊಡಲೆಣ್ಣೆ ತೀರಿದರೆ, ಹಂಡೆಯನೆತ್ತಿ ಸುರಿವರೆ? ಅಂದಿದ್ರೆ, ಅದು ಸರಿ ಓಯ್ತಿತ್ತು" ಅಂತ ಇನ್ನೂ ಒಂದು ಇಂಟಲೆಕ್ಚುಯಲ್ ಪಾಯಿಂಟ್ ಆಕಿತ್ತು..ಅಲ್ಲ ಹಾಕಿತ್ತು.&lt;br /&gt;&lt;br /&gt;"ಆ ಬಿಂದಿಗೆಗೆ, ಬಕೆಟ್‌ಗೆ ಸಿಗೋ ಮರ್ವಾದೇನೂ ಸಿಗ್ತಾ ಇಲ್ಲ ನಮಗೆ. ಮನುಸ್ಸತ್ವ ಇಲ್ದಿದ್ರೂ, ನಮಗೂ ತಾಮ್ರತ್ವ ಅಂತ ಐತೆ ಅಲೂರಾ, ಶ್ಯಾನೆ ಪೀಲಿಂಗ್ ಆಯ್ತದೆ" ಹಂಡೆಯ ಬೇಸರ ಹೆಚ್ಚಾಗುತಿತ್ತು.&lt;br /&gt;&lt;br /&gt;ಸಾಂತ್ವನ ಮಾಡಲು ಏನಾದ್ರು ಹೇಳೋಣ ಅಂದರೆ, ಹಂಡೆಯ ರೆಫ಼ರೆನ್ಸ್ ಇರೋ ಗಾದೆ ಆಗಲಿ, ಹಾಡಾಗಲಿ ಹಾಳಾದ್ದು ಜ್ಞಾಪಕವೇ ಬರಲಿಲ್ಲ. ಯಾಕೋ ಸಮಸ್ಯೆ ಹಂಡೆ ಗಾತ್ರದ್ದೆ ಅನ್ನಿಸಿತು. ಹಂಡೆಯ ಸಮಾಧಾನಕ್ಕೆ, ಅಣ್ಣೋರ ಚಿತ್ರದ "ಕಂಡೆ ಹರಿಯ ಕಂಡೆ" ಹಾಡನ್ನ ಅಣುಕು ಮಾಡಿ "ಹಂಡೆ ಕರಿಯ ಹಂಡೆ" ಅಂತ ಹೇಳೋಣ ಅಂದ್ಕೊಂಡೆ. ಆದ್ರೆ, ನನ್ನ ಗಾರ್ದಭ ಕಂಠದಲ್ಲಿ, ಅಣಗಿಸೋ ಹಾಡು ಕೇಳಿ, ಹಂಡೆ ಹೊಟ್ಟೆಲಿರೋ ಸಿಟ್ಟು ನೆತ್ತಿಗೆ ಬಂದ್ರೆ ಕಷ್ಟ ಅಂತ ಸುಮ್ಮನಾದೆ.&lt;br /&gt;&lt;br /&gt;"ಏನಣ್ಣಾ, ಸುಮ್ನಾಗ್ಬುಟ್ಟೆ, ಒಸಿ ಮಾತಾಡಣ್ಣಾ..." ಕೈ ಹಿಡಿದು ಎಳೆಯುತ್ತಿತ್ತು.&lt;br /&gt;&lt;br /&gt;ಹಿಂದೆಯೆ ಒಂದು ಕರ್ಕಶ ಧ್ವನಿ..ನನ್ನವಳದ್ದು! "ರೀ..ಏನು ಸೋಮಾರಿರೀ ನೀವು. ಹಗಲು ರಾತ್ರಿ ನೋಡದೆ ಜಾಗ ಕಂಡ ಕಡೆ ಮಲಗಿ ಗೊರಕೆ ಹೊಡೀತೀರಲ್ಲ...ಏಳ್ತೀರೋ..ಇಲ್ಲ.. ಆ ಹಂಡೆ ತಂದು ಕುಕ್ಕಲೋ..."&lt;br /&gt;&lt;br /&gt;"ಬೇಡ ಮಾರಾಯ್ತಿ.. ಏಳ್ತೀನಿ. ಹಂಡೆನಲ್ಲಿ ನೀನು ನನ್ನ ಕುಕ್ಕಿದ್ರೆ, ಆಮೇಲೆ, ಆಸ್ಪತ್ರೆಗೆ ನಾನು ದುಡ್ಡು ಕಕ್ಕಬೇಕು ಅಷ್ಟೆ". ಛೆ! ಒಳ್ಳೆ ನಿದ್ದೆ ಹಾಳು ಮಾಡಿ ಬಿಟ್ಟಳು..ಕನಸು ಬೇರೆ....ಕೊಡವಿಕೊಂಡು ಎದ್ದೆ!&lt;br /&gt;&lt;br /&gt;ನಡೆಯುತ್ತಾ ಹಂಡೆ ಕಡೆ ನೋಡಿದೆ. ಮೂಲೆಯಲ್ಲಿ ಮಾತಿಲ್ಲದೆ ಮಲಗಿತ್ತು.&lt;br /&gt;---------------------------------------&lt;br /&gt;ಈ ಲೇಖನವನ್ನು ನೀವು ಇಲ್ಲೂ ಕೂಡ ಓದಬಹುದು. &lt;a href="http://thatskannada.oneindia.in/column/humor/2010/0423-the-plight-of-poor-big-water-pot.html"&gt;http://thatskannada.oneindia.in/column/humor/2010/0423-the-plight-of-poor-big-water-pot.html&lt;/a&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5064341961341191540-7676325055474753535?l=girishjamadagni.blogspot.com' alt='' /&gt;&lt;/div&gt;</content><link rel='replies' type='application/atom+xml' href='http://girishjamadagni.blogspot.com/feeds/7676325055474753535/comments/default' title='Post Comments'/><link rel='replies' type='text/html' href='http://www.blogger.com/comment.g?blogID=5064341961341191540&amp;postID=7676325055474753535' title='3 Comments'/><link rel='edit' type='application/atom+xml' href='http://www.blogger.com/feeds/5064341961341191540/posts/default/7676325055474753535'/><link rel='self' type='application/atom+xml' href='http://www.blogger.com/feeds/5064341961341191540/posts/default/7676325055474753535'/><link rel='alternate' type='text/html' href='http://girishjamadagni.blogspot.com/2010/04/blog-post.html' title='ಹಂಡೆಯ ಹಗರಣ'/><author><name>Girish Jamadagni</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>3</thr:total></entry><entry><id>tag:blogger.com,1999:blog-5064341961341191540.post-4368265538251463995</id><published>2009-06-20T00:11:00.002+08:00</published><updated>2009-06-20T00:32:29.260+08:00</updated><title type='text'>ನಿಮಗೆ ಅನಿಸಿದ್ದು....</title><content type='html'>&lt;a href="http://2.bp.blogspot.com/_NP0RFn7ienw/Sju9SF_co5I/AAAAAAAAB8o/zflATSTp7sw/s1600-h/karaDi+mattu+manushya.jpg"&gt;&lt;img style="MARGIN: 0px 0px 10px 10px; WIDTH: 400px; FLOAT: right; HEIGHT: 293px; CURSOR: hand" id="BLOGGER_PHOTO_ID_5349077100976186258" border="0" alt="" src="http://2.bp.blogspot.com/_NP0RFn7ienw/Sju9SF_co5I/AAAAAAAAB8o/zflATSTp7sw/s400/karaDi+mattu+manushya.jpg" /&gt;&lt;/a&gt;&lt;span style="font-family:verdana;"&gt; &lt;/span&gt; &lt;div&gt;&lt;span style="font-size:130%;"&gt;&lt;span style="font-family:verdana;"&gt;ಕ್ಷಮಿಸಿ...ಕಾರಣಾಂತರಗಳಿಂದ ನನ್ನ ಬ್ಲಾಗ್ನಲ್ಲಿ ಬರೆಯಲಾಗಲಿಲ್ಲ. ಇತ್ತೀಚೆಗೆ ಒಂದು ಚಿತ್ರ ನನ್ನ ಗಮನ ಸೆಳೆಯಿತು. ಈ ಚಿತ್ರ ನೋಡಿ ನಿಮಗೆ ಅನಿಸಿದ್ದನ್ನು ಕಾಮೆಂಟ್ ಜಾಗದಲ್ಲಿ ಬರೆಯಿರಿ. ಏನು ಬೇಕಾದರೂ ಆಗಬಹುದು- ಕಥೆ, ನ್ಯಾನೋ ಕಥೆ, ಕವನ, ಅನಿಸಿಕೆ, ಹಾಸ್ಯ ಚಿತ್ರ, ಇತ್ಯಾದಿ. ಈ ಸಂಚಿಕೆ ನಿಮ್ಮದು. ಇಲ್ಲಿ ಬರೆಯಲು ಇಚ್ಚೆ ಇಲ್ಲದವರು, ನನಗೆ ಇ-ಅಂಚೆ ಕೂಡ ಮಾಡಬಹುದು ( girish.jamadagni@gmail.com) . ಕಳಿಸುತ್ತೀರಾ ತಾನೆ?&lt;br /&gt;&lt;br /&gt;ಹೊಸ ಲೇಖನ/ ಕಥೆಗಳಿಗಾಗಿ ನಿರೀಕ್ಷಿಸಿ.&lt;br /&gt;&lt;br /&gt;ಈ-ಮೈಲ್ ಮಾಡಿ ನನ್ನ ಮತ್ತು ನನ್ನ ಬ್ಲಾಗ್ ಬಗ್ಗೆ ವಿಚಾರಿಸಿದವರೆಲ್ಲರಿಗೂ ನನ್ನ ಧನ್ಯವಾದಗಳು. ವಿಶ್ವಾಸ ಹೀಗೇ ಇರಲಿ.&lt;/span&gt; &lt;/span&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5064341961341191540-4368265538251463995?l=girishjamadagni.blogspot.com' alt='' /&gt;&lt;/div&gt;</content><link rel='replies' type='application/atom+xml' href='http://girishjamadagni.blogspot.com/feeds/4368265538251463995/comments/default' title='Post Comments'/><link rel='replies' type='text/html' href='http://www.blogger.com/comment.g?blogID=5064341961341191540&amp;postID=4368265538251463995' title='6 Comments'/><link rel='edit' type='application/atom+xml' href='http://www.blogger.com/feeds/5064341961341191540/posts/default/4368265538251463995'/><link rel='self' type='application/atom+xml' href='http://www.blogger.com/feeds/5064341961341191540/posts/default/4368265538251463995'/><link rel='alternate' type='text/html' href='http://girishjamadagni.blogspot.com/2009/06/blog-post.html' title='ನಿಮಗೆ ಅನಿಸಿದ್ದು....'/><author><name>Girish Jamadagni</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_NP0RFn7ienw/Sju9SF_co5I/AAAAAAAAB8o/zflATSTp7sw/s72-c/karaDi+mattu+manushya.jpg' height='72' width='72'/><thr:total>6</thr:total></entry><entry><id>tag:blogger.com,1999:blog-5064341961341191540.post-5871658379285629032</id><published>2009-05-09T00:10:00.002+08:00</published><updated>2009-05-09T00:16:42.078+08:00</updated><title type='text'>ಎಂತ "ಮರಳ"ಯ್ಯ ಇದು ಎಂತಾ "ಮರಳು"!</title><content type='html'>ಓದುಗರೆ, ಏಪ್ರಿಲ್‌ನ ತುಂತುರು ನಗೆಹನಿ, ಮೇ ತಿಂಗಳ ತನಕ ಮುಂದುವರೆದದಕ್ಕೆ ಕ್ಷಮೆ ಇರಲಿ! ಕೆಲಸದ ಕಾರಣ ಎರಡು ತಿಂಗಳಿಂದ ನನ್ನ ವಾಸ ಸೌದಿ ಅರೇಬಿಯದ ಮರಳುಗಾಡಿನಲ್ಲಿ. ಬರೆಯಲು ಬಿಡುವಾಗಲಿಲ್ಲ. ಬಿಡುವಾದಾಗ ಏನು ಬರೆಯಬೇಕೆಂದು ತೋಚಲಿಲ್ಲ! ನನಗಂತೂ ಬೇಕೆಂದಾಗ ಬರೆಯಲು ಆಗುವುದೇ ಇಲ್ಲ. ಎಲ್ಲರಿಗೂ ಹೀಗೆಯೇ ಆಗುತ್ತದೆಯೋ ಗೊತ್ತಿಲ್ಲ. ಲ್ಯಾಪ್ ಟಾಪ್ ಮೇಲೆ ಕೈ ಬೆರಳುಗಳು ನಡೆದಾಡಲು ರೆಡಿ ಇದ್ದರೂ, ತಲೆಯಲ್ಲಿ ವಿಚಾರಗಳು ಬರುವುದೇ ಇಲ್ಲ! ಈ ದಿನ, ಶುಕ್ರವಾರ ಇಲ್ಲಿ ರಜಾ ದಿನ. ಬರೆಯಲು ಕುಳಿತೆ.&lt;br /&gt;&lt;br /&gt;ಸೌದಿ ಅರೇಬಿಯದ ಬಗ್ಗೆ ಇಲ್ಲಿಗೆ ಬರುವ ಮೊದಲು ಬಹಳ ಕೇಳಿದ್ದೆ. ಕುತೂಹಲವಿತ್ತು. ಬಹಳ ಸೋಜಿಗದ ದೇಶ ಇದು. ನಾ ಇಲ್ಲಿಗೆ ಬಂದಾಗ ಇನ್ನೂ ಬಹಳ ಚಳಿ ಇತ್ತು. ನಾ ಬಂದ ಮೇಲೆ ಇಲ್ಲಿ ಧಾರಾಕಾರವಾಗಿ ಮಳೆಯೂ ಆಯ್ತು (ಸಿಂಗಪುರದಿಂದ ನನ್ನ ಜೊತೆಗೆ ಬಂದಿತೇನೊ ಆ ಮಳೆ). ಮರಳುಗಾಡಿನಲ್ಲಿ ಮಳೆಯೇ ಬರುವುದಿಲ್ಲ ಎನ್ನುವ ನನ್ನ ಭ್ರಮೆ ಸುಳ್ಳಾಗಿತ್ತು. ಕೆಲವು ದಿನವಂತೂ ಆಲಿಕಲ್ಲಿನ ಮಳೆ ಕೂಡ ಬಿತ್ತು! ಮಲೆನಾಡಿನ ಮಡಿಲಲ್ಲಿ ಹುಟ್ಟಿದ ನನಗೆ ಮಳೆ ಹೊಸದಲ್ಲ. ಪರವಾಗಿಲ್ಲ, ತೊಂದರೆಯಿಲ್ಲ ಎಂದು ನಿಟ್ಟುಸಿರುವ ಬಿಡುವ ಮೊದಲೇ, ಶುರುವಾಗಿತ್ತು ಬಿಸಿಲಿನ ಪ್ರಹಾರ. ಒಂದೇ ವಾರದಲ್ಲಿ, ೪೭ ಸೆಂ.ಗ್ರೇ ತನಕ ಏರಿತ್ತು ತಾಪಮಾನ. ಇಲ್ಲಿಯವರು ಹೇಳಿದರು, ಇದಿನ್ನೂ ಪ್ರಾರಂಭ ಅಷ್ಟೆ, ಮುಂದಿದೆ ಮುದುಕಿ ಹಬ್ಬ ಅಂತ! ದ್ರುಷ್ಠಿ ಸಾಗುವವರೆಗೂ ಬರೀ ಮರಳು. ಹನಿ ನೀರಾವರಿ ಬಳಸಿ, ರಸ್ತೆಬದಿಯ ಗಿಡಗಳನ್ನು ಜೀವಂತವಿರುಸುತ್ತಾರೆ. ಹಸಿರು ತುಂಬಿದ ಮಲೆನಾಡಿನ ಐಸಿರಿ ಅಗಾಗ ನೆನಪಾಗುತ್ತದೆ. ನಮ್ಮ ದೇಶದ ಪ್ರಾಕ್ರುತಿಕ ಸಂಪತ್ತಿನ ಬಗ್ಗೆ ಹೆಮ್ಮೆನಿಸುತ್ತದೆ. ಅಲ್ಲಿದ್ದಾಗ ಅದರ ಪ್ರಾಮುಖ್ಯತೆ ಅರಿಯದೆ, ನಮ್ಮೂರು ಬಿಟ್ಟು ದೂರ ಬಂದಾಗ, ಅದರ ಅಮೂಲ್ಯ ಬೆಲೆಯ ಅರಿವಾಗುತ್ತದೆ.&lt;br /&gt;&lt;br /&gt;ಇಲ್ಲಿನ ಜನರೊಂದಿಷ್ಟು ನನಗೆ ಪರಿಚಯವಾಗಿದ್ದಾರೆ. ನನಗನ್ನಿಸಿದಂತೆ ಬಹಳ ಸ್ನೇಹ ಪ್ರಿಯರು ಇವರು. ಅವರ ಪಾಡಿಗಿರುತ್ತಾರೆ. ಸ್ವಲ್ಪ ಆಲಸಿಗಳೆಂದು ಕಾಣುತ್ತಾರೆ. ಈ ದೇಶದ ರೀತಿ ನೀತಿಗಳ ಬಗ್ಗೆ ಇಲ್ಲಿ ಬರೆಯಲಿಚ್ಚಿಸುವುದಿಲ್ಲ. ಏಕೆಂದರೆ, ಇದು ಅವರ ದೇಶ , ಅವರ ಕಾನೂನು. ತಪ್ಪು ಸರಿಗಳ ತುಲನೆ ಇಲ್ಲಿ ಅನಗತ್ಯ.&lt;br /&gt;&lt;br /&gt;ಮತ್ತೆ ಆದಾಗ ಬರೆಯುತ್ತೇನೆ. ತಾಣಕ್ಕೆ ಭೇಟಿ ನೀಡುತ್ತಿರಿ.&lt;br /&gt;ಗಿರೀಶ್ ಜಮದಗ್ನಿ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5064341961341191540-5871658379285629032?l=girishjamadagni.blogspot.com' alt='' /&gt;&lt;/div&gt;</content><link rel='replies' type='application/atom+xml' href='http://girishjamadagni.blogspot.com/feeds/5871658379285629032/comments/default' title='Post Comments'/><link rel='replies' type='text/html' href='http://www.blogger.com/comment.g?blogID=5064341961341191540&amp;postID=5871658379285629032' title='4 Comments'/><link rel='edit' type='application/atom+xml' href='http://www.blogger.com/feeds/5064341961341191540/posts/default/5871658379285629032'/><link rel='self' type='application/atom+xml' href='http://www.blogger.com/feeds/5064341961341191540/posts/default/5871658379285629032'/><link rel='alternate' type='text/html' href='http://girishjamadagni.blogspot.com/2009/05/blog-post.html' title='ಎಂತ &quot;ಮರಳ&quot;ಯ್ಯ ಇದು ಎಂತಾ &quot;ಮರಳು&quot;!'/><author><name>Girish Jamadagni</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>4</thr:total></entry><entry><id>tag:blogger.com,1999:blog-5064341961341191540.post-2997361341405967206</id><published>2009-04-03T16:41:00.001+08:00</published><updated>2009-04-03T16:45:07.045+08:00</updated><category scheme='http://www.blogger.com/atom/ns#' term='kannada poems'/><category scheme='http://www.blogger.com/atom/ns#' term='hanigavana'/><category scheme='http://www.blogger.com/atom/ns#' term='chutuka'/><title type='text'>ಏಪ್ರಿಲ್‌ಗೊಂದಿಷ್ಟು ತುಂತುರು ನಗೆ ಹನಿ !</title><content type='html'>&lt;p&gt;&lt;strong&gt;&lt;u&gt;(ನನ್ನ ಬರಹ ಸಂಗ್ರಹದಿಂದ) &lt;/u&gt;&lt;/strong&gt;&lt;/p&gt;&lt;p&gt;&lt;strong&gt;&lt;u&gt;ಪೂರ್ವಜರು!&lt;/u&gt;&lt;/strong&gt;&lt;br /&gt;ಹೀಗೆ ಒಂದು ಮುಸ್ಸಂಜೆ&lt;br /&gt;ನನ್ನ ನೆರೆಮನೆಯಾತನನ್ನು ಕೇಳಿದೆ,&lt;br /&gt;"ನಮ್ಮ ಪೂರ್ವಜರು&lt;br /&gt;ಮಂಗಗಳಾಗಿದ್ದರಂತೆ, ಹೌದೇ?"&lt;br /&gt;&lt;br /&gt;"ನನ್ನವರ ಬಗ್ಗೆ ಗೊತ್ತಿಲ್ಲ,&lt;br /&gt;ನಿಮ್ಮವರ ಬಗ್ಗೆ&lt;br /&gt;ಅನುಮಾನವಿಲ್ಲ!!"&lt;br /&gt;ಎನ್ನುವುದೇ ಆ ಪ್ರಾಣಿ?&lt;br /&gt;&lt;br /&gt;---------&lt;br /&gt;&lt;strong&gt;&lt;u&gt;ನಗು..?&lt;/u&gt;&lt;/strong&gt;&lt;br /&gt;ನೀನೇಕೆ ನಗಲಿಲ್ಲ ಹೀಗೆ ಅಂದು...&lt;br /&gt;ನಾ ನಿನ್ನ ಮೊದಲ ದಿನ ನೋಡಿದಂದು?&lt;br /&gt;&lt;br /&gt;ನಕ್ಕಿದ್ದರೆ, ಕಾಣಬಹುದಿತ್ತಲ್ಲೆ..&lt;br /&gt;ಈ ನಿನ್ನ ವಕ್ರ ಹಲ್ಲು..&lt;br /&gt;ಒಂದು ಹಿಂದು, ಒಂದು ಮುಂದು..&lt;br /&gt;&lt;br /&gt;-------&lt;br /&gt;&lt;strong&gt;&lt;u&gt;ಕಂಪನಿ&lt;/u&gt;&lt;/strong&gt;&lt;br /&gt;ನಾ ಸತ್ತಾಗ,&lt;br /&gt;ನನ್ನೊಡನೆ ಬರುವುದಿಲ್ಲ&lt;br /&gt;"ನನ್ನವರು" ಈ ಲೋಕ ಬಿಟ್ಟು,&lt;br /&gt;ಚಿತೆವರೆಗೂ&lt;br /&gt;ನನಗೆ ಜೊತೆ,&lt;br /&gt;ನನ್ನ ಹಲ್ಲಿನ ಸೆಟ್ಟು.!!!&lt;br /&gt;&lt;br /&gt;---------&lt;br /&gt;&lt;strong&gt;&lt;u&gt;ಗತಿ&lt;/u&gt;&lt;/strong&gt;&lt;br /&gt;ಯ , ರ , ಲ , ವ&lt;br /&gt;ಹೇಳಿಕೊಟ್ಟವನನ್ನೇ&lt;br /&gt;"ಯಾರ್‍ಲಾ ಅವ?"&lt;br /&gt;ಅನ್ನುತ್ತೆ&lt;br /&gt;ಯುವ ಪೀಳಿಗೆ!!&lt;br /&gt;&lt;br /&gt;------&lt;br /&gt;&lt;strong&gt;&lt;u&gt;ವ್ಯತ್ಯಾಸ&lt;/u&gt;&lt;/strong&gt;&lt;br /&gt;ಹೀಗೆ ಬರೆದರೆ,&lt;br /&gt;ಭಾವಗೀತೆ.&lt;br /&gt;ಹೀ&lt;br /&gt;ಗೆ&lt;br /&gt;ಬ&lt;br /&gt;ರೆ&lt;br /&gt;ದ&lt;br /&gt;ರೆ,&lt;br /&gt;ನವ್ಯ ಕವಿತೆ!!!&lt;br /&gt;&lt;br /&gt;--------&lt;br /&gt;&lt;strong&gt;&lt;u&gt;ಕನಸು...!&lt;/u&gt;&lt;/strong&gt;&lt;br /&gt;ನನ್ನ ಮದುವೆಯಾಗುವ ಹುಡುಗ,&lt;br /&gt;"ಕಪ್ಪ" ಗಿದ್ದರೂ ಪರವಾಗಿಲ್ಲ,&lt;br /&gt;ನಾ ಮಾತನಾಡುವಾಗ,&lt;br /&gt;"ತೆಪ್ಪ"ಗಿದ್ದರೆ ಸಾಕು!!!&lt;br /&gt;&lt;br /&gt;------------------&lt;br /&gt;&lt;strong&gt;&lt;u&gt;ಸ್ಥಿತಿ?&lt;br /&gt;&lt;/u&gt;&lt;/strong&gt;ಹಿಂದೆ-&lt;br /&gt;"ಸಿರಿಗನ್ನಡಂ - ಗೆಲ್ಗೆ"&lt;br /&gt;ಈಗ -&lt;br /&gt;"ಸಿರಿಗನ್ನಡಂ ?? - ಶ್....ಮೆಲ್ಲಗೆ!"&lt;br /&gt;&lt;br /&gt;-------------------------&lt;br /&gt;&lt;strong&gt;&lt;u&gt;ಒಲ್ಲೆ!&lt;/u&gt;&lt;/strong&gt;&lt;br /&gt;ನನಗೆ ಬೇಡ&lt;br /&gt;ಲಂಚ,&lt;br /&gt;ಕುರ್ಚಿ,&lt;br /&gt;ಕಪ್ಪು ಹಣ!&lt;br /&gt;&lt;br /&gt;ಅವರಾಗೆ ಕೊಟ್ಟರೆ,&lt;br /&gt;ಬೇಡ-ಎನುವುದಿಲ್ಲ,&lt;br /&gt;"ಗೌರವ" ಧನ,&lt;br /&gt;ಮಂತ್ರಿ ಸ್ಥಾನ,&lt;br /&gt;ಆಗಾಗ&lt;br /&gt;ವಿದೇಶ ಪ್ರಯಾಣ!&lt;br /&gt;&lt;br /&gt;--------------&lt;br /&gt;&lt;strong&gt;&lt;u&gt;ಸಾಕ್ಷಿ&lt;/u&gt;&lt;/strong&gt;&lt;br /&gt;ನಮ್ಮ ಪ್ರೀತಿಯ ಕುರುಹಿಗೆ,&lt;br /&gt;ಕಟ್ಟಿಸಬೇಕಾಗಿಲ್ಲ ತಾಜ್ ಮಹಲ್ಲು,&lt;br /&gt;ಬೇಕಾದರೆ ನೋಡು ಸಾಕ್ಷಿಗೆ ,&lt;br /&gt;ನಾ ಕಟ್ಟುವ ಮೊಬೈಲ್ billಉ !&lt;br /&gt;&lt;br /&gt;-------&lt;br /&gt;&lt;strong&gt;&lt;u&gt;ವಚನ&lt;/u&gt;&lt;/strong&gt;&lt;br /&gt;ನಮ್ಮ ದಾಂಪತ್ಯ&lt;br /&gt;ದಲ್ಲೂ ವಚನ ಸಾಹಿತ್ಯವೇ!&lt;br /&gt;ನನ್ನವಳ "ಬಹು"&lt;br /&gt;ವಚನಗಳೆಲ್ಲಾ ಮುಗಿದ ಮೇಲೆ,&lt;br /&gt;ನನ್ನದು ಬರಿ "ಏಕ"&lt;br /&gt;ವಚನ.."ಆಗಲಿ" ಎಂದು!&lt;br /&gt;&lt;br /&gt;--------&lt;br /&gt;&lt;strong&gt;&lt;u&gt;ವರ್ಷಾಂತರ&lt;/u&gt;&lt;/strong&gt;&lt;br /&gt;ಅಂದು,&lt;br /&gt;ಮಧು ಮಂಚದಲಿ&lt;br /&gt;ಕಾಯುತ ನನಗಾಗಿ ನೀನಿದ್ದೆ.&lt;br /&gt;&lt;br /&gt;ಇಂದು,&lt;br /&gt;ನಾ ಕೋಣೆಗೆ ಬರುವ ಮೊದಲೇ&lt;br /&gt;ನೀ&lt;br /&gt;ನಿದ್ದೆ !&lt;br /&gt;&lt;br /&gt;- ಗಿರೀಶ್ ಜಮದಗ್ನಿ&lt;br /&gt;(girish.jamadagni@gmail.com)&lt;br /&gt; &lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5064341961341191540-2997361341405967206?l=girishjamadagni.blogspot.com' alt='' /&gt;&lt;/div&gt;</content><link rel='replies' type='application/atom+xml' href='http://girishjamadagni.blogspot.com/feeds/2997361341405967206/comments/default' title='Post Comments'/><link rel='replies' type='text/html' href='http://www.blogger.com/comment.g?blogID=5064341961341191540&amp;postID=2997361341405967206' title='5 Comments'/><link rel='edit' type='application/atom+xml' href='http://www.blogger.com/feeds/5064341961341191540/posts/default/2997361341405967206'/><link rel='self' type='application/atom+xml' href='http://www.blogger.com/feeds/5064341961341191540/posts/default/2997361341405967206'/><link rel='alternate' type='text/html' href='http://girishjamadagni.blogspot.com/2009/04/blog-post.html' title='ಏಪ್ರಿಲ್‌ಗೊಂದಿಷ್ಟು ತುಂತುರು ನಗೆ ಹನಿ !'/><author><name>Girish Jamadagni</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>5</thr:total></entry><entry><id>tag:blogger.com,1999:blog-5064341961341191540.post-548229059950090274</id><published>2009-03-28T00:26:00.003+08:00</published><updated>2009-03-28T11:08:41.366+08:00</updated><title type='text'>ವೈಫಲ್ಯದಿಂದ ಯಶಸ್ಸು!!</title><content type='html'>ಕಳೆದಬಾರಿ ನಾನು ಬೆಂಗಳೂರಿಗೆ ಹೋಗಿದ್ದು ಪರೀಕ್ಷೆಗಳ ಪಲಿತಾಂಶ ಪ್ರಕಟವಾಗುವ ಸಮಯದಲ್ಲಿ. ಯಾವುದೇ ದಿನ ಪತ್ರಿಕೆ ತಿರುವಿ ಹಾಕಿದರೂ, ಮುಖಪುಟದಲ್ಲಿ, ಮೊದಲ ರ್‍ಯಾಂಕ್ ಬಂದ ಹುಡುಗ / ಹುಡುಗಿ, ಅವರ ತಂದೆ ತಾಯಿಯ ಜೊತೆ ಸಿಹಿ ಹಂಚಿ, ಸಂತೋಷ ಪಡುತ್ತಿರುವ ಭಾವಚಿತ್ರ. ಅದೇ ಪತ್ರಿಕೆಯ ಒಳ ಪುಟಗಳಲ್ಲಿ, ನಪಾಸದ ಹುಡುಗ, ಹುಡುಗಿಯರು ಆತ್ಮಹತ್ಯೆ ಮಾಡಿಕೊಂಡ ಸುದ್ಧಿಗಳು!&lt;br /&gt;&lt;br /&gt;ನನ್ನ ಆಫೀಸ್ ಸ್ನೇಹಿತನೊಬ್ಬ ಅಮೇರಿಕಾದ ಯಾವುದೋ MBA ಕೋರ್ಸ್ ಪ್ರವೇಶ ಪರೀಕ್ಷೆ‌ಯಲ್ಲಿ ಅನುತ್ತೀರ್ಣನಾಗಿದ್ದ. ಆ ಫಲಿತಾಂಶದಿಂದ ತತ್ತರಿಸಿಹೋಗಿದ್ದ. ನಾಲಕ್ಕು ದಿನ ಅದನ್ನೆ ಯೋಚನೆ ಮಾಡುತ್ತಾ ಆಫೀಸ್ ಬರಲೇ ಇಲ್ಲ. ನನಗೊಂದಿಷ್ಟು ಬಾರಿ ಫೋನ್ ಕೂಡ ಮಾಡಿದ್ದ. ಅವನು ಆ ಪರೀಕ್ಷೆಯಲ್ಲಿ ಪಾಸ್ ಆಗೆ ಆಗುತ್ತೆ, ಉತ್ತಮ ಯೂನಿವರ್ಸಿಟಿ‌ಯಲ್ಲಿ ಅವನಿಗೆ ಸೀಟು ಸಿಕ್ಕೇ ಸಿಗುತ್ತೆ ಎಂಬ ನಂಬಿಕೆ‌ಯಿಂದಿದ್ದ. ಆ ಸೋಲಿನಿಂದ ಖಿನ್ನನಾಗಿದ್ದ. ಆವನಿಗೆ ಅ ಸೊಲನ್ನು ಎದುರಿಸಲು, ಒಪ್ಪಿಕೊಳ್ಳಲು ಬಹಳ ದಿನಗಳೇ ಹಿಡಿದವು!&lt;br /&gt;&lt;br /&gt;ಮೊನ್ನೆ ದಿನ, ಇನ್ನೊಂದು ಸುದ್ದಿ ಇಂಟರ್ನೆಟ್‌ನಲ್ಲಿ ಓದಿದೆ. ಒಂದು ರಿಯಾಲಿಟಿ ಶೊ ಹಾಡಿನ ಸ್ಪರ್ಧೆಯಲ್ಲಿ, ಭಾಗವಹಿಸಿದ ಹುಡುಗಿ, ತೀರ್ಪುಗಾರರ ಅಭಿಪ್ರಾಯ ಮತ್ತು ತನ್ನ ಕಳಪೆ ಪ್ರದರ್ಶನದಿಂದ ಬುಧ್ಧಿಭ್ರಮಣೆಗೆ ಒಳಗಾಗಿದ್ದು. ಈಗಲೂ ಆ ಮುದ್ದು ಹುಡುಗಿ, ಬೆಂಗಳೂರಿನ NIMHANS ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.&lt;br /&gt;&lt;br /&gt;ಇದೆಲ್ಲ ನೋಡಿದರೆ, ಎಂತ ವಿಪರ್ಯಾಸ ಅನ್ನಿಸಿತು! ಗೆಲುವಿಗೆ ಎಷ್ಟೊಂದು ಮಹತ್ವ! ಆದರೆ ಸೋಲಿಗೆ? ಸೋಲಿನ ಮಹತ್ವ ಅರಿಯಬೇಕಾದರೆ, ಒಮ್ಮೆ ಸೋತು ನಂತರ ಗೆದ್ದವನನ್ನೇ ಕೇಳಬೇಕು! ಒಂದು ಗೆಲುವಿಗೆ ಎಷ್ಟು ಕಾರಣಗಳೋ, ಸೋಲಲೂ ಕೂಡ ಅಷ್ಟೇ ಕಾರಣಗಳು. ವ್ಯಕ್ತಿಯ ನಿಜವಾದ ವ್ಯಕ್ತಿತ್ವದ ಪರಿಚಯವಾಗುವುದು ಅವನು ಸೋಲನ್ನು ಕಂಡಾಗಲೇ ! ಅದರಲ್ಲಿ ಬಹಳ ಮುಖ್ಯವಾದದ್ದು ವ್ಯಕ್ತಿಯ ಮನೋಭಾವನೆ. ಸೋಲನ್ನು ಸ್ವೀಕರಿಸುವ ಮನೋಭಾವನೆ. ಒಮ್ಮೆ ಸೋತರೂ, ಇನ್ನೊಮ್ಮೆ ಪ್ರಯತ್ನಿಸಬೇಕೆಂಬ ಮನೋಭಾವನೆ.&lt;br /&gt;&lt;br /&gt;ಆದರೆ, ನಮ್ಮ ಈಗಿನ ಶಿಕ್ಷಣದ (ಅ)ವ್ಯವಸ್ಥೆಯಲ್ಲಿ, ಒಳ್ಳೆ ಮನೋಭಾವನೆ ಬೆಳೆಸಿಕೊಳ್ಳುವ, ಜೀವನವನ್ನು ಹೇಗೆ ಜೀವಿಸಬೇಕೆಂಬ ಪಾಠಗಳಿರುವುದಿಲ್ಲವಲ್ಲ! ಹಾಗೆ, ನಮ್ಮ, ಅಂದರೆ ಪೋಷಕರ ಚಿಂತನೆ, ನಾವು ಬದುಕನ್ನು ನೋಡುವ ಪರಿ, ನಮ್ಮ ಮಕ್ಕಳಿಗೆ ನಾವು ನೀಡುವ ಮಾರ್ಗದರ್ಶನದಲ್ಲೂ ಎಲ್ಲೋ ಲೋಪವಿದೆ ಅನ್ನಿಸುತ್ತದೆ.&lt;br /&gt;&lt;br /&gt;ಜೀವನದಲ್ಲಿ ಯಶಸ್ಸು ಬಹಳ ಮುಖ್ಯ. ಆದರೆ, ನಮ್ಮ ಮಕ್ಕಳಿಗೆ ಯಾವಾಗಲೂ ನಾವು ಯಶಸ್ಸಿನ ಬಗ್ಗೆಯೇ ಹೇಳೀ, ಹೇಳೀ, ಅವರಿಗೆ ಜೀವನದಲ್ಲಿ ಯಶಸ್ಸು ಬಿಟ್ಟು ಬೇರ್‍ಏನಿಲ್ಲ ಎನ್ನುವ ಒಂದು ಸುಳ್ಳು ಪ್ರಪಂಚದ ಸೃಷ್ಟಿ ಮಾಡುತ್ತೇವಲ್ಲವೆ? ಎಲ್ಲರ ಮಕ್ಕಳೂ ಮೊದಲನೆ ರ್‍ಯಾಂಕ್ ಬರಲು ಸಾಧ್ಯವಿಲ್ಲ! ಹಾಗೇ, ಎಲ್ಲರ ಬುದ್ಧಿಮತ್ತೆ ಮತ್ತು ಗ್ರಹಣ ಶಕ್ತಿ ಒಂದೇ ಸಮ ಇರುವುದಿಲ್ಲ. ನಾವು ಅವರ ತಲೆಯಲ್ಲಿ ಬಿಡುವ ಯಶಸ್ಸಿನ ಹುಳ, ಅವರಿಗೆ ಒಳ್ಳೆಯದು ಮಾಡುವುದಕ್ಕಿಂತ ಹಾನಿ ಮಾಡುವುದೇ ಹೆಚ್ಚು. ಸೋತವರಿಗೆ, ವೈಫಲ್ಯತೆಯ ಹೆದರಿಕೆಗಿಂತ ಅದು ತರುವ ಮುಂದಿನ ಪರಿಣಾಮಗಳೇ ಭಯಾನಕ. ಅಕಸ್ಮಾತ್ ಅವರು ಯಶಸ್ಸು ಕಾಣುವ ಬದಲು, ಅವರ ಪ್ರಯತ್ನದಲಿ ವಿಫಲವಾದರೆ, ಅವರಿಗೆ ಏನು ಮಾಡಬೇಕೆಂದು ಗೊತ್ತಿರುವುದಿಲ್ಲ! ಯಾಕೆಂದರೆ, ವಿಫಲವಾದರೆ ಏನು ಮಾಡಬೇಕೆಂದು ಅವರಿಗೆ ನಾವು ಹೇಳಿ ಕೊಡುವುದೇ ಇಲ್ಲ! ವೈಫಲ್ಯವನ್ನು ಎದುರಿಸಲು ಅವರ ಮನಸ್ಸನ್ನು ಸಿಧ್ಧ ಮಾಡುವುದಿಲ್ಲ. ಇದು ತಪ್ಪಲ್ಲವೆ? ನನ್ನ ಮಗ / ಮಗಳು ಮಾಡಿದ್ದೆಲ್ಲದರಲ್ಲೂ ಯಶಸ್ಸು ಕಾಣಲೆಂಬುದು ಪೋಷಕರ ಹುಚ್ಚು ಹಂಬಲ! ಇದು ತಪ್ಪಲ್ಲ. ಆದರೆ, ಯಾವಾಗಲೂ ಇದು ಸಾಧಿಸಲಾಗುವುದಿಲ್ಲ.&lt;br /&gt;&lt;br /&gt;ಹಾಗಾದರೆ, ನಮ್ಮ ಮಕ್ಕಳಿಗೆ ವೈಫಲ್ಯವನ್ನು ಎದುರಿಸುವ ಬಗ್ಗೆ ಹೇಗೆ, ಯಾವಾಗ , ಎಷ್ಟು ಹೇಳಿಕೊಡಬೇಕು? ಅವರು ವಿಫಲವಾಗುವ ಮುನ್ನ? ಅಥವಾ, ವೈಫಲ್ಯವನ್ನು ಕಂಡು, ನನ್ನ ಜೀವನವೇ ಮುಗಿಯಿತು, ನಾನು ಅಪ್ರಯೋಜಕ ಅಂತ ಛಿದ್ರವಾದ ಮನಸ್ಸಿನಿಂದ ಕಂಗೆಟ್ಟು ಹೋದ ಮೇಲಾ? ಬಹಳ ಕ್ಲಿಷ್ಟವಾದ ಪ್ರಶ್ನೆ! ಇದಕ್ಕೆ ಉತ್ತರ ಪ್ರತಿ ತಂದೆ ತಾಯಿಯರು ಆದಷ್ಟು ಬೇಗ ಕಂಡುಕೊಳ್ಳಬೇಕು. ಏಕೆಂದರೆ, ಪ್ರತಿ ಮಗುವೂ ವಿಶಿಷ್ಟ. ಮಗು ಏನನ್ನು, ಹೇಗೆ, ಸ್ವೀಕರಿಸುತ್ತದೆ ಎಂಬುದು ಬೇರೆಯವರಿಗಿಂತ ತಂದೆ ತಾಯಿಗಳಿಗೇ ಹೆಚ್ಚು ಗೊತ್ತಿರಲು ಸಾಧ್ಯ.&lt;br /&gt;&lt;br /&gt;ಇಷ್ಟಂತೂ ಹೇಳಿಕೊಡುವುದು ಅಥವ ಕಲಿತುಕೊಳ್ಳುವುದು ಅವಶ್ಯ. ಯಶಸ್ಸು ಮತ್ತೆ ವೈಫಲ್ಯ ಎರಡೂ ಶಾಶ್ವತವಲ್ಲ! ಪ್ರತಿಯೊಬ್ಬ ಮನುಷ್ಯನಿಗೂ ಅವನ ಜೀವನದಲ್ಲಿ ಆಗಾಗ ಸೋಲನ್ನು ಅನುಭವಿಸಲೇಬೇಕಾಗುತ್ತದೆ. ಇದು ಕಹಿಯಾದರೂ ಸತ್ಯ! ಸೋಲಿಗೆ ಹೆದರದಿರುವುದನ್ನು ಕಲಿತುಕೊಳ್ಳಬೇಕು ಅಥವ ಕಲಿಸಬೇಕು. ಸೋಲಿಗೆ ಹೆದರುವುದು ನಿಂತರೆ, ಮುಂದಿನ ದಾರಿ ಸುಗಮ. ವಿಫಲವಾದಾಗ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವುದಕ್ಕಿಂತ, ಏನು ಮಾಡಿದ್ದರೆ ಯಶಸ್ಸು ಸಿಗುತ್ತಿತ್ತು ಎನ್ನುವ ಆತ್ಮಾವಲೋಕನ ಅಗತ್ಯ. ಎಲ್ಲಿ ತಪ್ಪಿದ್ದು ಎಂದು ಅರಿತರೆ, ಮತ್ತೆ ಅದೇ ತಪ್ಪನ್ನು ಮಾಡುವ ಸಾಧ್ಯತೆ ಕಮ್ಮಿ ಹಾಗು ಯಶಸ್ಸಿನ ಮೆಟ್ಟಿಲಿಗೆ ಹತ್ತಿರವಾಗುವುದು ಖಂಡಿತ. ಪ್ರತಿ ಪ್ರಯತ್ನವನ್ನು ಒಂದು ಕಲಿಕೆ ಎಂದು ಪರಿಗಣಿಸಿದರೆ, ಸೋಲಿನಲ್ಲೂ ಜಯ ಸಾಧಿಸಿದಂತಾಗುತ್ತದೆ! ಹಾಗೆ, ಪರಿಶ್ರಮವಿಲ್ಲದೇ ಯಶಸ್ಸಿನ ಕೈ ಕುಲುಕಲು ಸಾಧ್ಯವಿಲ್ಲ. ಪರಿಶ್ರಮವಿರಬೇಕು ಹಾಗೂ, ತನ್ನ ಸಾಮರ್ಥ್ಯದಲ್ಲಿ ನಂಬಿಕೆಯಿರಬೇಕು. ಅರ್ಧಮನಸ್ಸಿನ ಪ್ರಯತ್ನದ ಪಲಿತಾಂಶ ಯಾವಾಗಲೂ ಅರ್ಧವೇ !&lt;br /&gt;&lt;br /&gt;ಸೋತು ಗೆದ್ದವರ ಉದಾಹರಣೆಗಳು ಈ ಪ್ರಪಂಚದಲ್ಲಿ ಹೇರಳವಾಗಿ ಸಿಗುತ್ತವೆ. ಆಗಾಗ ಅಂತ ಮಹಾನುಭಾವರ ಆತ್ಮ ಚರಿತ್ರೆಯನ್ನು ಓದುವುದು ಅಥವಾ ಅವರ ಯಶಸ್ಸಿನ ಗುಟ್ಟನ್ನು ಅರಿಯುವುದು ನಮ್ಮ ಜೀವನಕ್ಕೆ ಉತ್ತಮ ಮಾರ್ಗದರ್ಶಿಯಾಗಬಲ್ಲದು.&lt;br /&gt;&lt;br /&gt;ಎಲ್ಲದಕ್ಕಿಂತ ಮುಖ್ಯವಾಗಿ, ಸೋಲಿನ ನಂತರ ಪ್ರಯತ್ನವನ್ನು ನಿಲ್ಲಿಸದಿರುವುದು. ವಿಙ್ನಾನಿ ಥಾಮಸ್ ಆಳ್ವ ಎಡಿಸನ್ ಮತ್ತೆ ಅವನ ಸಂಗಡಿಗರು, ವಿದ್ಯುತ್ ದೀಪ ಕಂಡುಹಿಡಿಯುವಾಗ, ಸಾವಿರ ಬಾರಿ ಪ್ರಯತ್ನಿಸದೆ, ಮೊದಲನೇ , ಎರಡನೇ ಅಥವಾ ಹತ್ತನೆ ಸೋಲಿಗೇ ಕೈ ಚೆಲ್ಲಿ ಕುಳಿತಿದ್ದರೆ ವಿದ್ಯುತ್ ದೀಪದ ಅನ್ವೇಷಣೆ ಅಲ್ಲಿಗೆ ಕೊನೆಗೊಳ್ಳುತ್ತಿತ್ತೋ ಏನೋ! ಅವರ ಪ್ರಯತ್ನ ಸಾವಿರದೊಂದನೇ ಬಾರಿ, ಫಲಕಾರಿಯಾದಾಗ ಆಳ್ವ ಎಡಿಸನ್ ಹೇಳಿದ್ದೇನು ಗೊತ್ತೇ? "ನನಗೀಗ ವಿದ್ಯುತ್ ದೀಪ ಹೇಗೆ ಮಾಡಬಾರದೆಂಬ ಸಾವಿರ ವಿಧಾನಗಳು ಗೊತ್ತಿದೆ!". SLV-3 ರಾಕೆಟ್‌ನ ಮೊದಲ ಉಡಾವಣೆ ವಿಫಲವಾದಾಗ, ಅಬ್ದುಲ್ ಕಲಾಮ್ ಮತ್ತು ಅವರ ಸಹ ವಿಙ್ನಾನಿಗಳು ಹತಾಶರಾಗಿ, ಅವರ ಪ್ರಯತ್ನ ಅಲ್ಲಿಗೇ ನಿಲ್ಲಿಸಿದ್ದರೆ, ಭಾರತ ಇಂದು, ಉಪಗ್ರಹ ಉಡಾವಣೆ ತಂತ್ರಙ್ನಾನದಲ್ಲಿ, ಇಷ್ಟು ಬೆಳೆಯಲು ಸಾಧ್ಯವಾಗುತ್ತಿರಲೇ ಇಲ್ಲ.&lt;br /&gt;&lt;br /&gt;ಕೊನೆಯದಾಗಿ, ಮಾಲ್ಕಮ್ ಫ಼್ಹೊರ್ಬ್ಸ್ ಹೇಳಿರುವಂತೆ, ಸೋಲಿನಿಂದ ಪಾಠ ಕಲಿತರೆ, ಆ ಸೋಲೂ ಕೂಡ ಯಶಸ್ಸೇ ಸರಿ !&lt;br /&gt;&lt;br /&gt;&lt;strong&gt;&lt;span style="color:#cc9933;"&gt;ಓದುಗರೆಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು. ಈ ವಿರೋಧಿನಾಮ ಸಂವತ್ಸರ ನಿಮಗೆಲ್ಲರಿಗೂ ಅನುಕೂಲವಾಗಿರಲೆಂದು ಹಾರೈಸುತ್ತೇನೆ.&lt;br /&gt;&lt;/span&gt;&lt;/strong&gt;&lt;br /&gt;- ಗಿರೀಶ್ ಜಮದಗ್ನಿ&lt;br /&gt;girish.jamadagni@gmail.com&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5064341961341191540-548229059950090274?l=girishjamadagni.blogspot.com' alt='' /&gt;&lt;/div&gt;</content><link rel='replies' type='application/atom+xml' href='http://girishjamadagni.blogspot.com/feeds/548229059950090274/comments/default' title='Post Comments'/><link rel='replies' type='text/html' href='http://www.blogger.com/comment.g?blogID=5064341961341191540&amp;postID=548229059950090274' title='2 Comments'/><link rel='edit' type='application/atom+xml' href='http://www.blogger.com/feeds/5064341961341191540/posts/default/548229059950090274'/><link rel='self' type='application/atom+xml' href='http://www.blogger.com/feeds/5064341961341191540/posts/default/548229059950090274'/><link rel='alternate' type='text/html' href='http://girishjamadagni.blogspot.com/2009/03/blog-post_28.html' title='ವೈಫಲ್ಯದಿಂದ ಯಶಸ್ಸು!!'/><author><name>Girish Jamadagni</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>2</thr:total></entry><entry><id>tag:blogger.com,1999:blog-5064341961341191540.post-8374562286486993062</id><published>2009-03-20T18:46:00.001+08:00</published><updated>2009-03-20T18:49:38.211+08:00</updated><title type='text'>ನಿರ್ಧಾರ</title><content type='html'>ಊರಿನ ಪ್ರಮುಖ ಬಡಾವಣೆ. ರಾತ್ರಿ ಸಮಯ ಹನ್ನೊಂದು ಘಂಟೆ. ಅಮಾವಾಸ್ಯೆಗೆ ಹತ್ತಿರದ ದಿನಗಳು. ನಕ್ಷತ್ರಗಳೂ ಕೂಡ ಮೋಡಗಳ ಹಿಂದೆ ಕಣ್ಮರೆಯಾಗಿದ್ದ ರಾತ್ರಿ. ಬೀದಿ ನಾಯಿಗಳೂ ಸಹ ಬೊಗೊಳೋದು ಬಿಟ್ಟು ಎಲ್ಲೋ ಓಡಿ ಹೋಗಿದ್ದವು. ಬೀದಿ ದೀಪದ ಕಂಬಗಳೂ ಕೂಡ ಎಂದಿನಂತೆ ಬೆಳಕು ನೀಡದೆ ಬೆತ್ತಲೆಯಾಗಿ ನಿಂತಿದ್ದವು. ಎಲ್ಲ ಕಡೆ ಕತ್ತಲೆ. ಊರಿನ ಬೀದಿಯಲ್ಲಿ, ಸ್ಮಶಾನ ಮೌನ.&lt;br /&gt;&lt;br /&gt;ಬಡಾವಣೆಯ ಮನೆಗಳೆಲ್ಲಾ ಕತ್ತಲೆಯನ್ನು ಬಳಿದುಕೊಂಡು ನಿಂತಿದ್ದವು. ದಿನವೆಲ್ಲ ದಣಿದಿದ್ದ ಜನ ಕನಸುಗಳನ್ನಪ್ಪಿ ಮಲಗಿದ್ದರು. ಆದರೆ ಒಂದೇ ಒಂದು ಮನೆಯ ಬೆಡ್ ರೂಮಿನಲ್ಲಿ ದೀಪ ಬೆಳಗುತ್ತಿತ್ತು. ಗಂಡ ಹೆಂಡತಿಯ ಊಟವಾಗಿತ್ತು, ಆದರೆ ಮಲಗಿರಲಿಲ್ಲ. ದಂಪತಿಗಳು ಮಾತನಾಡುತ್ತಿದ್ದರು. ಮಾತೆಂದರೆ ಸರಸ-ಸಲ್ಲಾಪ ಅಲ್ಲ. ಪರಿಸ್ಥಿತಿ ತೀರ ಗಂಭೀರವಾಗಿತ್ತು. ಹೆಂಡತಿ ಗಂಡನ ಮೈಗಂಟಿ ಕುಳಿತಿರಲಿಲ್ಲ. ಶತಪಥ ತಿರುಗುತ್ತಿದ್ದಳು. ಗಂಡ ಅವಳನ್ನು ಸಮಾಧಾನ ಮಾಡುವ ಪ್ರಯತ್ನ ಮುಂದುವರಿಸಿದ್ದ.&lt;br /&gt;&lt;br /&gt;ಓಡಾಡುತ್ತಿದ್ದವಳಿಗೆ ಸುಸ್ತಾಗಿತ್ತು. ಕಿಟಕಿಗೆ ಒರಗಿ, ಕಿಟಕಿಯಿಂದ ಹೊರಗಿದ್ದ ಕತ್ತಲೆಯನ್ನು ದಿಟ್ಟಿಸುತ್ತ ನಿಂತಳು. ಏದುಸಿರು ಮುಂದುವರಿದಿತ್ತು. ಎರಡು ನಿಮಿಶ ಮೌನದ ನಂತರ ಹಿಂದೆ ತಿರುಗದೆ ಹೇಳಿದಳು."ನಾನು ಮಾಡಿರೋ ನಿರ್ಧಾರಾನೇ ಕಡೆ ನಿರ್ಧಾರ. ಇನ್ನು ನನ್ನ ನಿರ್ಧಾರ ಬದಲಿಸೋಕ್ಕೆ ಆಗೋಲ್ಲ."&lt;br /&gt;&lt;br /&gt;ಜಯವಂತ್ ಕೈ ಚೆಲ್ಲಿ ಕುಳಿತ." ವಾಟ್ ಈಸ್ ರಾಂಗ್ ವಿತ್ ಯು, ಉಮಾ? ಪ್ಲೀಸ್, ಕೆಟ್ಟ ನಿರ್ಧಾರ ಮಾಡ್ಬೇಡ".&lt;br /&gt;&lt;br /&gt;ಕಿಟಕಿಯಿಂದ ಹೊರ ನೋಡುತ್ತಿದ್ದವಳು ಗಕ್ಕನೆ ಹಿಂದೆ ತಿರುಗಿ ಕಿರುಚಿದಳು. "ಯಾವುದು ಕೆಟ್ಟ ನಿರ್ಧಾರ? ಆ ಗೋಮುಖ ವ್ಯಾಘ್ರ ನಿರಂಜನ್‌ನ ಸಾಯಿಸ್ಬೇಕು ಅಂಥ ಮಾಡಿರೋ ನಿರ್ಧಾರ ಕೆಟ್ಟದೇನು? ಅವ್ನು ಮಾಡಿರೋ ಕೆಲಸಕ್ಕೆ, ಸಾವೂ ಕೂಡ ಸಣ್ಣ ಶಿಕ್ಷೇನೇ."&lt;br /&gt;&lt;br /&gt;"ಕೂಲ್ ಡೌನ್ ಉಮಾ. ಇಲ್ಲೇ ನೀನು ತಪ್ಪು ಮಾಡ್ತಿರೋದು. ಅವನು ಕೆಟ್ಟ ಕೆಲಸ ಮಾಡಿದ ಅಂತ ಅವನನ್ನ ಸಾಯಿಸಿಬಿಡೊದೇ? ಅವನಿಗೆ ಒಳ್ಳೆಯವನಾಗೋಕ್ಕೆ ಚಾನ್ಸ್ ಕೊಡೋದಿಲ್ವಾ?"&lt;br /&gt;&lt;br /&gt;ಉಮಾಳ ಸಿಟ್ಟು ಇನ್ನೂ ಜಾಸ್ತಿಯಾಯ್ತು. "ಈ ಗಂಡಸರೆಲ್ಲಾ ಒಂದೆ. ಇದೇ ಕೆಲಸ ಒಂದು ಹೆಣ್ಣು ಮಾಡಿದ್ರೆ, ಇದೇ ಮಾತು ಹೇಳ್ತಿದ್ರಾ? ಗಂಡು ಮಾಡೋದಿಕ್ಕೆಲ್ಲ ಎಕ್ಸ್ ಕೂಸ್ ಇದ್ದೇ ಇರುತ್ತೆ. ಛೆ! ಐ ಹೇಟ್ ದಿಸ್ ಮೇಲ್ ಡಾಮಿನೇಟೆಡ್ ಸೊಸೈಟಿ".&lt;br /&gt;&lt;br /&gt;"ನಿನ್ನ ಮಾತು ಒಪ್ತೀನಿ. ನಮ್ಮ ಸಮಾಜದಲ್ಲಿ, ಗಂಡಿಗೊಂದು ಅಳತೆಗೋಲು, ಹೆಣ್ಣಿಗೊಂದು ಅಳತೆಗೋಲು. ನಾನು ಇದನ್ನ ಇಲ್ಲ ಅಂತಿಲ್ಲ. ಆದ್ರೆ ನೀನು , ನನ್ನನ್ನು ಕೂಡ ಆ ಗುಂಪಿಗೆ ಸೇರಿಸಬಾರ್ದಿತ್ತು. ಲುಕ್, ನಾನು ನಿನಗೆ ಸಹಾಯ ಮಾಡೋದಕ್ಕೆ ಪ್ರಯತ್ನ ಪಡ್ತಿದ್ದೆ."&lt;br /&gt;&lt;br /&gt;ಉಮಾ, ಜಯವಂತ್ ಹತ್ತಿರ ನಿಂತು ಕೇಳಿದಳು. " ಹೌದಾ?, ಹಾಗಾದ್ರೆ, ನಿರಂಜನನ ಸಾಯಿಸೋದಿಕ್ಕೆ ನಿಮ್ಮದ್ಯಾಕೆ ಇಷ್ಟೊಂದು ವಿರೋಧ?"&lt;br /&gt;&lt;br /&gt;"ನಿರಂಜನನ ಸಾಯಿಸೋದಿಕ್ಕೆ ಅಂಥ ಅಲ್ಲ ಉಮಾ. ಯಾರನ್ನೇ ಆಗಲಿ, ಎಷ್ಟೇ ಕ್ರೂರಿ ಆಗಿರಲೀ ಆ ವ್ಯಕ್ತಿ, ಸಾಯಿಸೋದು ತಪ್ಪು ಅಂತ ನನ್ನ ಅಭಿಪ್ರಾಯ. ಒಂದು ವ್ಯಕ್ತೀನ ಕೊಲೆ ಮಾಡೋದೇ ಮೊದಲನೆ ನಿರ್ಧಾರ ಆಗ್ಬಾರ್ದು ".&lt;br /&gt;&lt;br /&gt;" ಓ ಹೊ..ಹಾಗಾದ್ರೆ, ನಿಮ್ಮ ಪ್ರಕಾರ, ಮೊದಲನೆ ನಿರ್ಧಾರ ಏನಾಗ್ಬೆಕೋ?" ಉಮಾಳ ಮಾತಿನಲ್ಲಿ ವ್ಯಂಗ್ಯವಿತ್ತು.&lt;br /&gt;&lt;br /&gt;"ನೋಡು, ನಾನು ನೂರು ಸಾರಿ ಹೇಳಿದೀನಿ. ಗೀವ್ ಹಿಮ್ ಎ ಚಾನ್ಸ್. ಅವನಿಗೆ ಇನ್ನೊಂದು ಅವಕಾಶ ಕೊಡು. ಪ್ರತಿಯೊಬ್ಬನಿಗೂ ತನ್ನನ್ನು ತಾನೇ ಸರಿ ಮಾಡ್ಕೊಳ್ಳಕ್ಕೆ ಅವಕಾಶ ಬೇಕೇ ಬೇಕು".&lt;br /&gt;&lt;br /&gt;ಓಡಾಡುತ್ತಿದ್ದವಳಿಗೆ ಸುಸ್ತಾಗಿತ್ತು. ಮಂಚದ ಮೇಲೆ ದೊಪ್ಪನೆ ಕುಳಿತಳು. ತಲೆಯಲ್ಲಿ ದ್ವಂದ್ವದ ಅಲೆ ಎದ್ದಿತ್ತು.&lt;br /&gt;&lt;br /&gt;" ನೋಡು ಉಮಾ, ನೀನು ಬೇಜಾರು ಮಾಡ್ಕೊಳ್ಳಲ್ಲ ಅಂದ್ರೆ, ಎರಡು ಮಾತು ಹೇಳ್ತೀನಿ".&lt;br /&gt;&lt;br /&gt;ಏನು? ಎನ್ನುವಂತೆ ಗಂಡನ ಕಡೆ ನೋಡಿದಳು, ಉಮಾ.&lt;br /&gt;&lt;br /&gt;" ಉಮಾ, ನೀನು ತುಂಬಾ ಎಕ್ಸೈಟ್ ಆಗ್ತಿದೀಯ. ಪ್ಲೀಸ್ ಕಾಮ್ ಡೌನ್. ನಿನಗೂ ಏನು ಕಮ್ಮಿ ವಯಸ್ಸಲ್ಲ. ಅದರ ಮೇಲೆ ಬಿ.ಪಿ ಬೇರೆ. ನೋಡು, ಈಗ್ಲೂ ಹೇಳ್ತೀನಿ. ನೀನು ಬರಿದಿರೋ ಕತೆ, ತುಂಬಾ ಚೆನ್ನಾಗಿದೆ. ವಾಸ್ತವಕ್ಕೆ ಹತ್ತಿರವಾಗಿದೆ. ನಿರಂಜನ್ ನೀನೆ ಹುಟ್ಟು ಹಾಕಿರೋ ಒಂದು ಪಾತ್ರ. ಕತೇಲಿ ಬರೋ ಒಂದು ಕ್ಯಾರಕ್ಟರ್ ಬಗ್ಗೆ ಇಷ್ಟೊಂದು ಯೋಚನೆ ಮಾಡಿ, ನಿನ್ನ ಆರೋಗ್ಯ ಕೆಡಿಸ್ಕೋಬೇಡ. ನಿಜ ಹೇಳ್ತೀನಿ. ನೀನು ಬರಿದಿರೋ ಈ ಕತೆಗೆ, ರಾಜ್ಯ ಮಟ್ಟದ ಕಥಾ ಸ್ಪರ್ಧೆಯಲ್ಲಿ, ಬಹುಮಾನ ಬರೋದು ಖಂಡಿತ".&lt;br /&gt;&lt;br /&gt;" ಹಾ...ಆಮೇಲೆ, ಇನ್ನೊಂದು ವಿಷಯ. ನೀನು ನಿನ್ನ ಸುತ್ತಲೂ ನಡೆಯೋ ದೈನಂದಿನ ಘಟನೆಗಳಿಗೆ ಚೆನ್ನಾಗಿ ಸ್ಪಂದಿಸ್ತಿಯ. ಈಗಿನ ಸಮಾಜದ ಪರಿಸ್ತಿತಿ ಬಗ್ಗೆ ನಿನಗೆ ತುಂಬಾ ಕಳ ಕಳಿ ಇದೆ. ಎಲ್ಲಾ ಸರಿ. ಆದ್ರೆ, ಒಬ್ಬ ಲೇಖಕಿ ಆಗಿ, ವಿದ್ಯಾವಂತೆಯಾಗಿ, ನೀನು ಕ್ರೌರ್ಯದ ಮಾರ್ಗ ಅನುಸರಿಸೋದು ತಪ್ಪು ಅಂತ ನನ್ನ ಭಾವನೆ. ಈಗಾಗ್ಲೇ, ನಮ್ಮ ಸಮಾಜ ದಿನಾ ನಡೆಯೋ ಹಿಂಸೆ, ಅತ್ಯಾಚಾರ, ಕೊಲೆಗಳಿಗೆ ತತ್ತರಿಸಿ ಹೋಗಿದೆ. ನಿನ್ನ ಕತೆಗಳಲ್ಲಿ ನೀನು ನಮ್ಮ ಮಧ್ಯೆ ನಡೀತಿರೋ ಅನ್ಯಾಯನ ಧಿಕ್ಕರಿಸು, ಆದ್ರೆ ಹಿಂಸೆಗೆ ಪ್ರಚಾರ ಕೊಟ್ಟು, ಅದೇ ಕಡೆ ದಾರಿ ಅನ್ನೋ ಹಾಗೆ ಬರೀಬೇಡ".&lt;br /&gt;&lt;br /&gt;ಉಮಾಳ ಮನಸ್ಸು ತಿಳಿಯಾಗಿತ್ತು. " ಐ ಆಮ್ ಸಾರಿ ಜಯ್. ಕತೆಗೆ ಒಳ್ಳೆ ಕೊನೆ ಕೊಡ್ಬೇಕು ಅನ್ನೊ ಯೊಚನೆಯಲ್ಲಿ ಲೇಖಕಿಯಾಗಿ ನನ್ನ ಜವಾಬ್ದಾರಿ ಮರೆತಿದ್ದೆ. ಏನೇನೋ ಹೇಳಿ, ನಿಮ್ಮ ಮನಸ್ಸು ಕೂಡ ನೋಯಿಸ್ಬಿಟ್ಟೆ. ಹಾಗೆ ನೋಡೀದ್ರೆ, ನಿಮ್ಮ ಅಭಿಪ್ರಾಯನೇ ಸರಿ ಅನ್ನಿಸ್ತಿದೆ. ಕತೆನ ಕಳ್ಸೊದಿಕ್ಕೆ, ನಾಳೇನೇ ಕೊನೆ ದಿನ. ನಾನು ಬರೆದು ಮುಗಿಸ್ತೀನಿ. ನೀವು ಮಲಕ್ಕೊಳಿ."&lt;br /&gt;&lt;br /&gt;ಮಧ್ಯ ರಾತ್ರಿ ಮೀರಿತ್ತು. ಚಳಿ ಕೊರೆಯುತ್ತಿತ್ತು. ಲೇಖಕಿ ಉಮ ಜಯವಂತ್ ಮನೆ ಬೆಡ್ ರೂಮ್ ದೀಪ ರಾತ್ರಿಯೆಲ್ಲ ಉರಿಯುತ್ತಿತ್ತು. ಕತೆಗೊಂದು ಕೊನೆ ಸಿಕ್ಕಿತ್ತು.&lt;br /&gt;&lt;br /&gt;ಗಿರೀಶ್ ಜಮದಗ್ನಿ&lt;br /&gt;girish.jamadagni@gmail.com&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5064341961341191540-8374562286486993062?l=girishjamadagni.blogspot.com' alt='' /&gt;&lt;/div&gt;</content><link rel='replies' type='application/atom+xml' href='http://girishjamadagni.blogspot.com/feeds/8374562286486993062/comments/default' title='Post Comments'/><link rel='replies' type='text/html' href='http://www.blogger.com/comment.g?blogID=5064341961341191540&amp;postID=8374562286486993062' title='3 Comments'/><link rel='edit' type='application/atom+xml' href='http://www.blogger.com/feeds/5064341961341191540/posts/default/8374562286486993062'/><link rel='self' type='application/atom+xml' href='http://www.blogger.com/feeds/5064341961341191540/posts/default/8374562286486993062'/><link rel='alternate' type='text/html' href='http://girishjamadagni.blogspot.com/2009/03/blog-post_20.html' title='ನಿರ್ಧಾರ'/><author><name>Girish Jamadagni</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>3</thr:total></entry><entry><id>tag:blogger.com,1999:blog-5064341961341191540.post-2316788560251269008</id><published>2009-03-12T01:55:00.001+08:00</published><updated>2009-03-12T01:59:55.749+08:00</updated><title type='text'>ಚಂದ್ರನಿಂದ !!!!</title><content type='html'>&lt;a href="http://3.bp.blogspot.com/_NP0RFn7ienw/Sbf77HphBQI/AAAAAAAAB2c/HRvF9XNPZLQ/s1600-h/moonearth_580.jpg"&gt;&lt;img id="BLOGGER_PHOTO_ID_5311991278590821634" style="DISPLAY: block; MARGIN: 0px auto 10px; WIDTH: 320px; CURSOR: hand; HEIGHT: 240px; TEXT-ALIGN: center" alt="" src="http://3.bp.blogspot.com/_NP0RFn7ienw/Sbf77HphBQI/AAAAAAAAB2c/HRvF9XNPZLQ/s320/moonearth_580.jpg" border="0" /&gt;&lt;/a&gt;&lt;br /&gt;&lt;div&gt;&lt;/div&gt;&lt;br /&gt;&lt;p&gt;&lt;span style="font-family:verdana;"&gt;ಚಂದ್ರನಿಂದ ನೋಡ್ದೆ ಕೆಳ್ಗೆ,&lt;br /&gt;ತಿರುಗ್ತಾಯಿತ್ತು ಭೂಮಿ.&lt;br /&gt;ಅಕ್ಕಪಕ್ಕದಲ್ಲಿ ತೇಲಾಡ್ತಿದ್ವು,&lt;br /&gt;ಗುರು,ಶುಕ್ರ,ಶನಿ!&lt;br /&gt;&lt;br /&gt;ಭೂಮಿ ಮೇಲೆ ಬೇಜಾರಾಯ್ತು,&lt;br /&gt;ಮೇಲ್ಬಂದಿದ್ದೆ ಹಾರಿ.&lt;br /&gt;ಏಣಿಯಿಂದ ಏರಿ,&lt;br /&gt;ಮೋಡದೊಳ್ಗೆ ತೂರಿ!&lt;br /&gt;&lt;br /&gt;ಸ್ವಲ್ಪ ದೂರ್‍ದಲ್ಲಿ ಉರಿದೋಗ್ತಿದ್ದ&lt;br /&gt;ಕೆಂಪ್ ಕೆಂಪಾಗಿ ಸೂರ್ಯ.&lt;br /&gt;ಮುತ್ತು ಕೊಟ್ಬಿಟ್ಟ್ ಬರೋಣಾಂದ್ರೆ,&lt;br /&gt;ನಂಗೆಲ್ಲಿದೆ ಧೈರ್‍ಯ?&lt;br /&gt;&lt;br /&gt;ದೇಹಕ್ಕಾಗಿ ಹುಡುಕಾಡ್ಕೊಂಡು&lt;br /&gt;ಅಲೆದಾಡ್ತಿತ್ತೊಂದಾತ್ಮ&lt;br /&gt;ಹತ್ತಿರ ಬಂದು ಕೇಳೇ ಬಿಡ್ತು,&lt;br /&gt;ಬರ್‍ತೀಯೇನ್ಲ ತಮ್ಮಾ?&lt;br /&gt;&lt;br /&gt;ಸ್ವಲ್ಪ ಹೊತ್ನಲ್ಲಿ, ಸಾಕಾಗ್‍ಹೋಯ್ತು&lt;br /&gt;ನಂಗೆ ಚಂದ್ರವಾಸ.&lt;br /&gt;ಜನಗಳಿಲ್ಲ, ದನಗಳಿಲ್ಲ&lt;br /&gt;ಕೈಗೆ ಇಲ್ಲ ಕೆಲ್ಸ!&lt;br /&gt;&lt;br /&gt;ನೀರು ಇಲ್ಲ, airಊ ಇಲ್ಲ&lt;br /&gt;ದೇಹಕ್ಕಿಲ್ಲ ಭಾರ!&lt;br /&gt;ಮಂತ್ರಿ ಇಲ್ಲ , ಚೇಲ ಇಲ್ಲ,&lt;br /&gt;ಕೂಗೋರಿಲ್ಲ ಜೈಜೈಕಾರ!&lt;br /&gt;&lt;br /&gt;ಲಂಚ ಇರ್ಲಿ, ಮೋಸ ಇರ್‍ಲಿ,&lt;br /&gt;ಬರ್‍ಲಿ, ಏಡ್ಸ್ ಅಂತ ರೋಗ&lt;br /&gt;ಎಲ್ಲೇ ಹೋದ್ರುಸಿಕ್ಕೋದಿಲ್ಲ,&lt;br /&gt;ಭೂಮಿಯಂತ ಜಾಗ!&lt;/span&gt; &lt;/p&gt;&lt;br /&gt;&lt;p&gt;&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5064341961341191540-2316788560251269008?l=girishjamadagni.blogspot.com' alt='' /&gt;&lt;/div&gt;</content><link rel='replies' type='application/atom+xml' href='http://girishjamadagni.blogspot.com/feeds/2316788560251269008/comments/default' title='Post Comments'/><link rel='replies' type='text/html' href='http://www.blogger.com/comment.g?blogID=5064341961341191540&amp;postID=2316788560251269008' title='5 Comments'/><link rel='edit' type='application/atom+xml' href='http://www.blogger.com/feeds/5064341961341191540/posts/default/2316788560251269008'/><link rel='self' type='application/atom+xml' href='http://www.blogger.com/feeds/5064341961341191540/posts/default/2316788560251269008'/><link rel='alternate' type='text/html' href='http://girishjamadagni.blogspot.com/2009/03/blog-post_12.html' title='ಚಂದ್ರನಿಂದ !!!!'/><author><name>Girish Jamadagni</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_NP0RFn7ienw/Sbf77HphBQI/AAAAAAAAB2c/HRvF9XNPZLQ/s72-c/moonearth_580.jpg' height='72' width='72'/><thr:total>5</thr:total></entry><entry><id>tag:blogger.com,1999:blog-5064341961341191540.post-6438567446864230477</id><published>2009-03-01T13:26:00.001+08:00</published><updated>2009-03-01T13:34:59.797+08:00</updated><title type='text'>ಒಂದು ಹೂ(ನೋ)ವಿನ ಕಥೆ....</title><content type='html'>&lt;p&gt;ಅಕ್ಟೋಬರ್ ತಿಂಗಳು. ಬೆಳಗಿನ ೫.೪೫ ನಿಮಿಷ. ಸೂರ್ಯನ ಆಗಮನವಾಗದಿದ್ದರೂ, ಆಗಲೇ ಪೂರ್ವದಲ್ಲಿ, ಕೆಂಪು ಮೂಡುತಿತ್ತು. ತಣ್ಣನೆ ಗಾಳಿ ಬೆಂಗಳೂರಿನ ಹೊರವಲಯದಲ್ಲಿರುವ, "ಪ್ರಮೀಳಾ ಗುಲಾಬಿ ತೋಟದ" ಮೇಲೆ ಹಾದು, ಗುಲಾಬಿಗಳನ್ನು ತಟ್ಟಿ ಎಬ್ಬಿಸುವಂತಿತ್ತು. ಗುಲಾಬಿಗಳಿಗೆ ಹೊಸ ದಿನ. ಗುಲಾಬಿ ಮೊಗ್ಗುಗಳು, ಅರಳಲು ಬೆಳೆಗಿನ ಎಳೆ ಬಿಸಿಲಿಗೆ ಕಾಯುತ್ತಿದ್ದವು.&lt;br /&gt;&lt;br /&gt;ಸರಿಯಾಗಿ ಆರು ಗಂಟೆಗೆ, ಪ್ರಮೀಳಾಳ ಮಾರುತಿ ಕಾರು ಗೇಟ್ ಮುಂದೆ ಗಕ್ಕನೆ ಬಂದು ನಿಂತಿತ್ತು. ಇದು ಅವಳು ದಿನಾ ತೋಟಕ್ಕೆ ಬರುವ ಸಮಯ. ಎಂದಿನಂತೆ , ಸೆಕ್ಯೂರಿಟಿ ಸಿದ್ಧ, ಗೇಟ್ ಪಕ್ಕ ಕೂತು ತೂಕಡಿಸುತಿದ್ದ. ಪ್ರಮೀಳಾಗೆ ಇವೆಲ್ಲ ಆಗದ ವಿಷಯ. ಅವಳ ಮೂರನೇ ಹಾರ್ನ್ ಸದ್ದಿಗೆ, ಸಿದ್ಧ ಗಾಬರಿಯಿಂದ ಎದ್ದ. "ರಾತ್ರಿ ಸ್ವಲ್ಪ ತಗೊಂಡಿದ್ದು ಜಾಸ್ತೀನೇ ಆಯ್ತು " ಅಂತ ತನ್ನನ್ನೇ ಮನಸ್ಸಲ್ಲೆ ಶಪಿಸಿಕೊಂಡ. ಅವನಿಗೆ ಗೊತ್ತಿತ್ತು, ಮೇಡಮ್ನಿಂದ ಇನ್ನು ಹದಿನೈದು ನಿಮಿಷ ಸುಪ್ರಭಾತ ಕಾದಿದೆ ಅಂತ. ಅಂದೊಕೊಂಡಂತೆ, ಪ್ರಮೀಳ ಅವನಿಗೆ ದೊಡ್ಡ ಪೂಜೇನೇ ಮಾಡಿದ್ದಳು.&lt;br /&gt;&lt;br /&gt;ಪ್ರಮೀಳ ಆಫೀಸ್ ಪೋರ್ಟಿಕೋದಲ್ಲಿ ಕಾರು ನಿಲ್ಲಿಸಿ ತನ್ನ ರೂಮ್ ಕಡೆ ನಡೆದಳು. ಹೂವಿನ ಬಿಸಿನೆಸ್ಸ್ ಆಗಿದ್ದರಿಂದ ಅವಳ ಆಫೀಸ್ ಕೆಲಸ ಬೆಳಗ್ಗೆ ಬೇಗನೇ ಶುರುವಾಗುತಿತ್ತು. ಮಿಸ್ ಪ್ರಮೀಳಾ ಈ ತೋಟದ ಒಡತಿ. ಒಂಟಿ ಹೆಣ್ಣು. ಏನಾದರೂ ಸಾಧಿಸಬೇಕೆಂಬ ಛಲ. ಕೈಯಲ್ಲಿದ್ದ ದುಡ್ಡನ್ನೆಲ್ಲ ಹಾಕಿ, ಈ ತೋಟ ಕೊಂಡುಕೊಂಡಿದ್ದಳು. ಈಗ ಪ್ರಮೀಳ ಗುಲಾಬಿ ತೋಟಕ್ಕೆ ನಾಲಕ್ಕು ವರುಷ. ಹೆಚ್ಚು ಲಾಭ ಇಲ್ಲದಿದ್ದರೂ ಆದಯಕ್ಕೇನೂ ಕೊರತೆ ಇರಲಿಲ್ಲ. ಪ್ರಮೀಳಾಳ ದೊಡ್ಡ ಗಿರಾಕಿಗಳು ಅಂದ್ರೆ, ರಾಜಕೀಯ ಪಕ್ಷಗಳು. ರಾಜಕೀಯದಲ್ಲಿ, ಮೀಟಿಂಗ್‌ಗಳ ಕೊರತೆಯೇ? ಬೆಂಗಳೂರಲ್ಲಿ ದಿನಕ್ಕೆ ಏನಿಲ್ಲ ಅಂದ್ರು ಏಳರಿಂದ ಎಂಟು ದೊಡ್ಡ ಪ್ರೊಗ್ರಾಮ್ ಇದ್ದೇ ಇರತ್ತೆ. ಈ ಎಲ್ಲ ಪ್ರೊಗ್ರಾಮ್ಸ್‌ಗೆ, ಹೆಚ್ಚು ಕಮ್ಮಿ ಪ್ರಮೀಳಾನೆ ಹೂ ಸಪ್ಲೈ ಮಾಡೋದು. ಹೀಗಾಗಿ, ರಾಜಕೀಯ ವೃತ್ತದಲ್ಲೂ ಪ್ರಮೀಳಾ ಸ್ವಲ್ಪ ಹೆಸರು ಮಾಡಿದ್ದಳು.&lt;br /&gt;&lt;br /&gt;ಆರು ಮೂವತ್ತಕ್ಕೆಲ್ಲ ತೋಟದ ಆಳುಗಳು ಬಂದಿದ್ದರು. ತಮ್ಮ ದೈನಂದಿನ ಕೆಲಸದಲ್ಲಿ ಅನುವಾಗಿದ್ದರು. ಏಳು ಗಂಟೆಗೆ ಪ್ರಮೀಳಾಳ ಮೊಬೈಲ್ ಸದ್ದು ಮಾಡಿತ್ತು. ಹಳೇ ಗಿರಾಕಿ. ಎ.ಸಿ.ಬಿ ಪಕ್ಷದ ನಂಜುಂಡ ಫೋನ್ ಮಾಡಿದ್ದ. "ಮೇಡಮ್, ಇವತ್ತು ೧೧ ಗಂಟೆಗೆ ಪಾರ್ಟಿ ಪಬ್ಲಿಕ್ ಮೀಟಿಂಗ್ ಇದೆ. ಮಾಮೂಲಿ ಹಾಗೆ ಹೂ ಕಳಿಸಿ. ಹಾಗೇ, ಈ ತಿಂಗಳ ಬಿಲ್ಲ್ ಕೂಡ ಕಳಿಸಿ" ಅಂದ. ರಾಜಕೀಯದಲ್ಲಿದ್ದರೂ, ನಂಜುಂಡ ಸ್ವಲ್ಪ ನಿಯತ್ತಿನ ವ್ಯಕ್ತಿ.&lt;br /&gt;&lt;br /&gt;"ದೇವೂ, ಎ.ಬಿ.ಸಿ ಪಾರ್ಟಿ ಆಫ್ಹೀಸ್ಗೆ ಹತ್ತು ಗಂಟೆಗೆ ಹೂ ಕಳಿಸು" ಆರ್ಡರ್ ಮಾಡಿದಳು ಪ್ರಮೀಳಾ. ಅದೇ ಆರ್ಡರ್ ಕೂಲಿಗಳಿಗೆ ರವಾನೆಯಾಗಿತ್ತು. ಪ್ರೂನರ್ ಹಿಡಿದು ಕೆಲಸ ಶುರು ಮಾಡಲು ಅನುವಾದರು ಕೂಲಿಗಳು.&lt;br /&gt;&lt;br /&gt;ಹೊಸ ದಿನದ ಉಲ್ಲಾಸದಲ್ಲಿದ್ದ, ಗುಲಾಬಿಗಳು ಹರಿತವಾದ ಕತ್ತರಿಗಳ ನಾಲಿಗೆಗೆ ಸಿಲುಕಿ ನಲುಗಿದ್ದವು. ಗಿಡದಿಂದ ಬೆರ್ಪಟ್ಟ ನೋವು, ಕತ್ತರಿ ಮಾಡಿದ ಗಾಯದ ನೋವು ಗುಲಾಬಿಗಳಿಗೆ ಆಘಾತ ತಂದಿದ್ದವು. ಸುಂದರ ದಿನಕ್ಕೆ ಎಂತಹ ಆರಂಭ?&lt;br /&gt;&lt;br /&gt;ಎಲ್ಲ ಹೂವುಗಳನ್ನು ತಂದು ನೆಲದ ಮೇಲೆ ಗುಡ್ಡೆ ಹಾಕಿದರು. ಮುಂದಿನ ಅರ್ಧ ಗಂಟೆಯಲ್ಲಿ, ಹೆಣ್ಣಾಳುಗಳ ನುರಿತ ಕೈಗಳು, ಗುಲಾಬಿಗಳನೆಲ್ಲ, ಪ್ಲಾಸ್ಟಿಕ್ ನಲ್ಲಿ ಸುತ್ತಿ ಸುಂದರ ಬೊಕೆ ಮಾಡಿದ್ದವು. ಪ್ಲಾಸ್ಟಿಕ್ ಒಳಗೆ, ಗುಲಾಬಿಗಳಿಗೆ ಉಸಿರು ಕಟ್ಟೇ ಹೋಗಿತ್ತು. ಒಂಭತ್ತು ಗಂಟೆಗೆಲ್ಲ ಇಪ್ಪತ್ತು ಬೊಕೆಗಳು, ಮಾರುತಿ ವ್ಯಾನಿನ ಡಿಕ್ಕಿ ಸೇರಿದ್ದವು. ಬಿಸಿಲು ಹೆಚ್ಚಾಗುತಿತ್ತು. ದೇವು ಡ್ರೈವ್ ಮಾಡುತ್ತಿದ್ದ ಮಾರುತಿ ವ್ಯಾನ್ ಸಿಟಿ ಕಡೆ ಓಡುತಿತ್ತು. ಬೊಕೆ ಒಳಗೆ ಸಿಲುಕಿದ್ದ ಗುಲಾಬಿಗಳು ಆಗಲೆ ಅರ್ಧ ಸತ್ತುಹೋಗಿದ್ದವು. ಅವಕ್ಕೆ ಇನ್ನೂ ಗೊತ್ತಿಲ್ಲ , ಅವುಗಳ ಅಂತಿಮ ಯಾತ್ರೆ ಶುರುವಾಗಿತ್ತು.&lt;br /&gt;------------೦----------------------------&lt;br /&gt;ಒಂಭತ್ತು ನಲವತ್ತಕ್ಕೆ, ದೇವು ಹೂ ಸಮೇತ ಪಾರ್ಟಿ ಆಫೀಸ್ ಮುಂದೆ ಕಾರು ನಿಲ್ಲಿಸಿದ್ದ. ನಂಜುಂಡ ಹೇಳಿದ ಜಾಗದಲ್ಲಿ ಬೊಕೆಗಳನೆಲ್ಲ ಗುಡ್ಡೆ ಮಾಡಿ, ಬಿಲ್ಲ್ ಕೊಟ್ಟು ಹೊರಟ. ನಂಜುಂಡ ಮೀಟಿಂಗ್ ಏರ್ಪಾಟಿನಲ್ಲಿ ಮಗ್ನನಾದ.&lt;br /&gt;&lt;br /&gt;ಪಬ್ಲಿಕ್ ಮೀಟಿಂಗ್ ಇದ್ದದ್ದು ಮಲ್ಲೇಶ್ವರಂ ಮೈದಾನದಲ್ಲಿ. ಪಾರ್ಟಿ ಆಫೀಸ್ನಿಂದ ಹಿಂಡು ಹಿಂಡಾಗಿ ಕಾರುಗಳ ಜಾತ್ರೆ ಮಲ್ಲೇಶ್ವರ್ಂ ಮೈದಾನದೆಡೆಗೆ ಹೊರಟಿತ್ತು. ಗದ್ದಲವೋ ಗದ್ದಲ. ಯಾರಿಗೊ ನಂಜುಂಡ ಕೂಗಿ ಹೇಳಿದ "ಏ, ಆ ಮೂಲೇಲಿರೋ ಬೊಕೆಗಳ್ನ ಮರೀಬೇಡಿ, ಯಾವ್ದಾದ್ರು ಕಾರಿಗೆ ತುಂಬ್ಸಿ." ಯಾರೋ ಗೊಣಗಿದರು "ನಮ್ಗೇ ಜಾಗ ಇಲ್ಲ, ಇನ್ನು ಈ ಹೂ ಬೇರೇ". ಹಾಗು ಹೀಗು, ಗುಲಾಬಿ ಬೊಕೆಗಳು ಯಾವುದೋ ವ್ಯಾನ್ ಸೇರಿದ್ದವು. ರೂಲಿಂಗ್ ಪಾರ್ಟಿ ಮೀಟಿಂಗ್ ಅಂದ್ರೆ ಕೇಳ್ಬೇಕಾ? ಸಿಕ್ಕಾಪಟ್ಟೆ ಜನ. ಜಾಗಕ್ಕಾಗಿ ನುಗ್ಗಾಟ. ಈ ಗಲಾಟೆಯಲ್ಲಿ, ಗುಲಾಬಿಗಳನ್ನು ಕೇಳೋರ್ಯಾರು? ಜಾಗ ಸಿಕ್ಕದ ಕೆಲವರು ಬೊಕೆಗಳ ಮೇಲೇ ಕುಳಿತರು. ಮತ್ತೆ ಕೆಲವು ಗುಲಾಬಿಗಳು ಜನರ ಕಾಲ್ತುಳಿತಕ್ಕೆ ಸಿಕ್ಕಿ ನಲುಗಿ ಹೋಗಿದ್ದವು.&lt;br /&gt;--------೦--------------------&lt;br /&gt;ಎಂದಿನಂತೆ, ಹನ್ನೊಂದು ಗಂಟೆಯ ಭಾರಿ ಬಹಿರಂಗ ಸಭೆ, ತಡವಾಗಿ, ಹನ್ನೊಂದು ನಲವತ್ತೈದಕ್ಕೆ ಶುರುವಾಗಿತ್ತು. ಭಾಷಣದ ಮೇಲೆ ಭಾಷಣ. ಚಪ್ಪಾಳೆ ಮೇಲೆ ಚಪ್ಪಳೆ ಬಿದ್ದಿತ್ತು. ಎಲ್ಲರೂ ನಿರ್ಲಕ್ಷಿಸಿದ್ದ ಗುಲಾಬಿಗಳು, ಪ್ಲಾಸ್ಟಿಕ್ ಬೊಕೆ ಒಳಗಿನ ಶಾಖಕ್ಕೆ ತತ್ತರಿಸಿದ್ದವು.&lt;br /&gt;&lt;br /&gt;ಪಾರ್ಟಿ ಕಾರ್ಯಕರ್ತನೊಬ್ಬನಿಗೆ ನಂಜುಂಡ ಕೂಗಿ ಹೇಳಿದ "ಏ ಬೊಕೆ ಎಲ್ಲೋ, ಬೇಗ ಹೋಗಿ ತಗೊಂಡು ಬಾ". ಇಬ್ಬರು ಕಾರ್ಯಕರ್ತರು ಓಡಿ ಹೋಗಿ, ಸ್ಟೇಜ್ ಹಿಂದಿನಿಂದ ಬೊಕೆಗಳನ್ನು ಎತ್ತಿ ತಂದರು. ಇದ್ದಕ್ಕಿದ್ದಂತೆ ಮಂತ್ರಿಗೆ ಬೊಕೆ ಕೊಡಲು, ಕಾರ್ಯಕರ್ತರ ನೂಕು ನುಗ್ಗಲು. ಈ ಗಲಾಟೆಯಲ್ಲಿ ಒದ್ದಾಡಿದ್ದು ಗುಲಾಬಿಗಳು. ಮಂತ್ರಿ ನಗುತ್ತಲೇ ಬೊಕೆಗಳ ಸ್ವೀಕಾರ ಮಾಡಿ, ಹಿಂದೆ ನಿಂತಿದ್ದ, ಚೇಲಾಗೆ ವರ್ಗಾವಣೆ ಮಾಡುತ್ತಿದ್ದ. ಚೇಲ ಬೊಕೆಗಳನೆಲ್ಲ ತಂದು ಸ್ಟೇಜ್ ಹಿಂದೆ ಎಸೆದ. ಗುಲಾಬಿಗಳು ಹತ್ತು ನಿಮಿಶದ ಹಿಂದೆ ಎಲ್ಲಿದ್ದವೋ ಮತ್ತೆ ಅಲ್ಲೇ ಬಂದು ಸೇರಿದ್ದವು. ವ್ಯತ್ಯಾಸ ಅಂದರೆ, ಈಗ ಹೆಚ್ಚು ಸುಸ್ತಾಗಿದ್ದವು, ಸಾಯುವ ಹಂತ ತಲುಪಿದ್ದವು. ಅವುಗಳದೇನೂ ತಪ್ಪಿಲ್ಲದೆ, ಆಗಲೇ ನರಕ ಯಾತನೆ ಅನುಭವಿಸಿದ್ದವು.&lt;br /&gt;&lt;br /&gt;ಮಂತ್ರಿ ಭಾಷಣ ಮುಗಿದಿತ್ತು. ಜನ ಜಾಗ ಖಾಲಿ ಮಾಡಿದ್ದರು. ಅರ್ಧ ಗಂಟೆ ಹಿಂದೆ, ತುಂಬಿದ್ದ ಮೈದಾನ ಬಿಕೋ ಅನ್ನುತ್ತಿತ್ತು. ನಂಜುಂಡ ಕೂಲಿಗಳಿಗೆ ಆರ್ಡರ್ ಮಾಡುತ್ತಿದ್ದ "ಗುರು, ಎಲ್ಲ ನೀಟ್ ಮಾಡಿ ಹೊಗ್ಬೇಕು, ಗೊತ್ತಾಯ್ತ?" ವ್ಯಾನ್ ಕಡೆ ಹೋಗುತ್ತಿದ್ದಾಗ, ನಂಜುಂಡನ ದೃಷ್ಟಿ ಸ್ಟೇಜ್ ಹಿಂದೆ ಬಿದ್ದಿದ್ದ ಗುಲಾಬಿ ಬೊಕೆಗಳ ಮೇಲೆ ಹೊಯ್ತು. ಗುಲಾಬಿ ಕಡೆ ಕೈ ತೋರಿ, "ಗುರೂ, ಹಾಗೇ, ಈ ಗಲೀಜೆಲ್ಲ ತೊಟ್ಟಿಗೆ ಎಸ್ದುಬಿಡಿ" ಎಂದು, ವ್ಯಾನ್ ಏರಿದ್ದ. ಅರ್ಧ ಗಂಟೆ ಹಿಂದೆ, ಇದೇ ಗಲೀಜನ್ನು, ಮಿನಿಸ್ಟರ್‍ಗೆ ಕೊಡಲು ನೂಕು ನುಗ್ಗಲು. ಈಗ ಯಾರಿಗೂ ಬೇಡದ ಗಲೀಜು. ಎಂತಹ ವಿಪರ್ಯಾಸ!!!&lt;br /&gt;ನಂಜುಂಡ ಹೇಳಿದಂತೆ, ಆಳುಗಳು ಗುಲಾಬಿಗಳನ್ನೆಲ್ಲ ಮೈದಾನದ ಹತ್ತಿರದ ತೊಟ್ಟಿಗೆ ಎಸೆದು ಹೋದರು. ಈಗಾಗಲೇ, ಗುಲಾಬಿಗಳು ತನ್ನ ಕಂಪನ್ನು ಕಳೆದುಕೊಂಡಿದ್ದವು. ತೊಟ್ಟಿಯಲ್ಲಿದ್ದ ಕಸದ ದುರ್ಗಂಧ ಗುಲಾಬಿಗಳನ್ನು ಆಕ್ರಮಿಸಿದ್ದವು. ಗುಲಾಬಿಗಳು ಕಸವಾದವು.&lt;br /&gt;&lt;br /&gt;"ದಿನದ ಆರಂಭ ಸುಂದರವಾಗಿದ್ದರೂ, ಅಂತ್ಯ ಸುಂದರವಾಗಿರಬೇಕೆಂದು ಏನಿಲ್ಲವಲ್ಲ!"&lt;br /&gt;--------------೦-೦----------------------&lt;br /&gt;ಬೆಳಗಾಗಿತ್ತು. ಮತ್ತೊಂದು ದಿನ. ಹೊಸ ಗಾಳಿ. ಅತ್ತ, ಕಾರ್ಪೊರೇಶನ್ ನೌಕರರು, ಮಲ್ಲೇಶ್ವರ್ಂ ಮೈದಾನದ ತೊಟ್ಟಿಯಿಂದ ಕಸ ತೆಗೆದು ಲಾರಿಗೆ ವರ್ಗಾಯಿಸುತ್ತಿದ್ದರು. ಇತ್ತ, ಪ್ರಮೀಳ ಗುಲಾಬಿ ತೋಟದಿ, ಹೊಸ ಗುಲಾಬಿ ಮೊಗ್ಗುಗಳು ಅರಳುತ್ತಿದ್ದವು. ಪಾಪ ಮುಗ್ಧ ಹೂವುಗಳು, ಈ ಜಗತ್ತಿನ ಅಸಲೀ ರೂಪ ಅರಿಯದೆ ಅರಳುತ್ತಿದ್ದವು. ಅವಕ್ಕೇನು ಗೊತ್ತು ಅವುಗಳ ಇಂದಿನ ಪಾಡು. ದೇವರ ಗುಡಿಗೋ, ಹೆಣ್ಣಿನ ಮುಡಿಗೋ, ಇಲ್ಲ ಯವುದೋ ಶವದ ಸಿಂಗಾರಕ್ಕೋ, ಅಥವ ಯಾವುದೋ ಕಚಡ ಮಂತ್ರಿಯ ಕೊರಳಿನ ಹಾರಕ್ಕೊ..ಯಾವುದರ ಪರಿವೆ ಇಲ್ಲದೆ ಅರಳುತ್ತಿದ್ದವು..ಗುಲಾಬಿ ಮೊಗ್ಗುಗಳು.. &lt;/p&gt;&lt;p&gt;ಗಿರೀಶ್ ಜಮದಗ್ನಿ (&lt;a href="mailto:girish.jamadagni@gmail.com"&gt;girish.jamadagni@gmail.com&lt;/a&gt;) &lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5064341961341191540-6438567446864230477?l=girishjamadagni.blogspot.com' alt='' /&gt;&lt;/div&gt;</content><link rel='replies' type='application/atom+xml' href='http://girishjamadagni.blogspot.com/feeds/6438567446864230477/comments/default' title='Post Comments'/><link rel='replies' type='text/html' href='http://www.blogger.com/comment.g?blogID=5064341961341191540&amp;postID=6438567446864230477' title='8 Comments'/><link rel='edit' type='application/atom+xml' href='http://www.blogger.com/feeds/5064341961341191540/posts/default/6438567446864230477'/><link rel='self' type='application/atom+xml' href='http://www.blogger.com/feeds/5064341961341191540/posts/default/6438567446864230477'/><link rel='alternate' type='text/html' href='http://girishjamadagni.blogspot.com/2009/03/blog-post.html' title='ಒಂದು ಹೂ(ನೋ)ವಿನ ಕಥೆ....'/><author><name>Girish Jamadagni</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>8</thr:total></entry><entry><id>tag:blogger.com,1999:blog-5064341961341191540.post-5790584225641319119</id><published>2009-02-18T14:25:00.003+08:00</published><updated>2009-02-18T14:34:36.019+08:00</updated><title type='text'>ಸೂರ್ಯ ಮುಳುಗುವ ಹೊತ್ತು...</title><content type='html'>"ಹಲೋ" ಅಂದ ಹುಡುಗ, ಹುಡುಗಿಯ ಹತ್ತಿರ ಬಂದು ನಿಲ್ಲುತ್ತಾ.&lt;br /&gt; ಅವಳಿಂದ ಯಾವುದೇ ಉತ್ತರವಿಲ್ಲ.&lt;br /&gt; "ಹಾಯ್, ಏನು ಬಸ್ಸಿಗೆ ಕಾಯ್ತಾ ಇದೀರ?" ಅವನೇ ಮತ್ತೆ ಮಾತನಾಡಿಸಿದ.&lt;br /&gt; "ಇಲ್ಲ ಬಸ್‌ಸ್ಟ್ಯಾಂಡ್‌ನಲ್ಲಿ ನಿಂತ್ಕೊಂಡು ವಿಮಾನಕ್ಕೆ ಕಾಯ್ತಾ ಇದೀನಿ" ತಟ್ಟನೆ ಬಂತು ಅವಳಿಂದ ಉತ್ತರ.&lt;br /&gt; "ಸಧ್ಯ ಮಾತು ಬರುತ್ತಲ್ಲ. ಅಲ್ಲ, ಮದುವೆ ಮನೇಲಿ ಸಿಕ್ಕರೆ, ಮದುವೆಗೆ ಬಂದ್ರ ಅಂತ, ಹೋಟೆಲ್‌ನಲ್ಲಿ ಸಿಕ್ಕರೆ, ಹೋಟೆಲ್‌ಗೆ ಬಂದ್ರ ಅಂತ, ಕೇಳೋದು ವಾಡಿಕೆ ನೋಡಿ, ಅದಕ್ಕೆ. ಮಾತು ಶುರು ಮಾಡೋದಕ್ಕೆ ಪೀಠಿಕೆ ಬೇಕಲ್ಲ!"&lt;br /&gt; "ನಿಮ್ಮ ಹತ್ತಿರ ಮಾತಾಡೋಕ್ಕೆ ನನಗೆ ಪುರುಸೊತ್ತಿಲ್ಲ. ಎಲ್ಲದಿಕ್ಕಿಂತ ಹೆಚ್ಚಾಗಿ ಅಪರಿಚಿತರ ಹತ್ತಿರ ನಾನು ಮಾತಾಡೋಲ್ಲ".&lt;br /&gt; "ನಾನು ಮಾತಾಡ್ತಿನಿ. ಅಲ್ಲ ಮಾತಾಡಿದ್ರೆ ತಾನೇ ಪರಿಚಯ ಆಗೋದು? ಬಸ್ಸು ಬರೋದು ಇನ್ನು ಅರ್ಧ ಘಂಟೆ ಇದೆ. ಏನಾದ್ರು ಮಾತನಾಡಬಹುದಲ್ಲ. ಟೈಮ್ ಕಳೆಯುತ್ತೆ"&lt;br /&gt; "ರೀ ಯಾಕ್ರೀ ನನಗೆ ತೊಂದರೆ ಕೊಡ್ತಿದೀರಾ? ನನ್ನ ಪಾಡಿಗೆ ನನ್ನ ಬಿಡಿ".&lt;br /&gt; "ನೋಡೀ, ಈಗ ನಾವು ನೀವು ಇಬ್ಬರೆ. ಸಂಜೆಯಾಗ್ತಾಯಿದೆ. ಮೋಡ ಕವೀತಿದೆ. ಮಳೆ ಬರಬಹುದು. ಮನಸ್ಸು ಬಿಚ್ಚಿ ಮಾತಾಡೊಕ್ಕೆ ಚೆನ್ನಾಗಿದೆ ಅಲ್ವಾ ವಾತಾವರಣ?"&lt;br /&gt; ಮತ್ತೆ ಅವಳಿಂದ ಮಾತಿಲ್ಲ.&lt;br /&gt; "ಇನ್ನೇನು ಸಮಾಚಾರ?" ಹುಡುಗನೇ ಮಾತು ಮುಂದುವರಿಸಿದ.&lt;br /&gt; "ರೀ. ಸಮಾಚಾರ ಬೇಕಿದ್ರೆ, ೨ ರೂಪಾಯಿ ಖರ್ಚು ಮಾಡಿ, ಮೂಲೇಲಿರೊ ಅಂಗಡಿಯಿಂದ ಪೇಪರ್ ತಗೊಂಡು ಓದಿ. ನನ್ನ ತಲೆ ಯಾಕೆ ತಿಂತಿದೀರ?"&lt;br /&gt; "ಪೇಪರ್‌ನಲ್ಲಿ ನಿಮ್ಮ ವಿಷಯ ಬರೋಲ್ವಲ್ಲ?"&lt;br /&gt; "ನೀವು ಇದೇ ರೀತಿ ಕಾಡಿಸ್ತಿದ್ರೆ, ಕಾಲಿಂದು ಕೈಗೆ ತಗೊಂಡು, ನಿಮಗೆ ನಾಲಕ್ಕು ಹಾಕ್ತೀನಿ. ನಾಳೆ ಪೇಪರ್‌ನಲ್ಲಿ ನಿಮ್ಮದಂತೂ ವಿಷಯ ಬರುತ್ತೆ".&lt;br /&gt; "ಯಾಕ್ರೀ ಆ ಲೆವೆಲ್‍ಗೆ ಹೋಗ್ತಿದಿರಾ? ನಾನು ಸಿಕ್ಕಾಪಟ್ಟೆ ಡೀಸೆಂಟ್".&lt;br /&gt; "ಯಾಕೋ ನಿಮ್ಮ ಮುಖ ನೋಡಿದ್ರೆ ಹಾಗನ್ನಿಸಲ್ಲ. ಎಲ್ಲಿಂದನೋ ತಪ್ಪಿಸಿಕೊಂಡು ಬಂದಿರೊ ಹಾಗಿದೆ".&lt;br /&gt; "ಇಲ್ಲ ರೀ, ಅದು mannufacturing defect. ಏನೂ ಮಾಡೊಕಾಗಲ್ಲ. ಪುಸ್ತಕದ ಕವರ್‍ ಪೇಜ್ ನೋಡಿ, ಪುಸ್ತಕ ಚೆನ್ನಾಗಿಲ್ಲ ಅನ್ನಬೇಡಿ. ಒಂದೊಂದೇ ಪುಟ ನಿಧಾನಕ್ಕೆ ಓದಿ ನೋಡಿ. ಅಮೇಲೆ ನೀವೆ ವಾವ್ ಅಂತೀರ".&lt;br /&gt; "ನಿಮ್ಮ ಬಗ್ಗೆ ನೀವೇ ಹೀಗೆ ಹೊಗೊಳ್ಕೋಬಾರದು".&lt;br /&gt; "ಅದಕ್ಕೆ, ನಿಮಗೆ ಚಾನ್ಸ್ ಕೊಡ್ತಿದೀನಿ. ನೀವೇ ನೋಡಿ, ಓದಿ, ಹೊಗಳಿ ಅಲ್ಲ, ಹೇಳಿ".&lt;br /&gt; "ನೀವು ನನ್ನನ್ನ ಬಿಡಲ್ಲ ಅನ್ಸುತ್ತೆ. ತುಂಬಾ ಬೋರ್ ಮಾಡ್ತಾ ಇದೀರ".&lt;br /&gt; "ಬೋರ್ ಹೋಗ್ಸೊದಕ್ಕೆ, ಲೇಟೆಸ್ಟ್ ಕನ್ನಡ ಹಾಡು ಹೇಳಲಾ? ಗಣೇಶ್ ಸಿನಿಮಾದು. ಅನಿಸುತಿದೆ ಯಾಕೋ ಇಂದು....ಹಾಗೆ ಸುಮ್ಮನೆ. ಆ ಹಾಡು".&lt;br /&gt; "ಹೀಗೆ ಆಡ್ತಾ ಇದ್ರೆ, ಹೋಗೋ ಸುಮ್ಮನೆ ಅನ್ನಬೇಕಾಗುತ್ತೆ. ಇಷ್ಟು ತಲೆ ತಿಂತೀರಲ್ಲ, ನೀವೇನು ಸಾಫ್ಟ್ ವೆರಾ ?"&lt;br /&gt; "ಇಲ್ಲ ಹಾರ್ಡ್‌ವೇರು. ನಮ್ಮ ತಂದೇಯವರದ್ದು ಕಬ್ಬಿಣ, ಪೆಯಿಂಟ್ ಇತ್ಯಾದಿ ಶಾಪ್ ಇದೆ. ಅವರ ಜೊತೆ ಕೆಲಸ". "ನೀವು?"&lt;br /&gt; "ನನ್ನ ವಿಷಯ ನಿಮಗೆ ಯಾಕೆ? ಹೇಳಲ್ಲ"&lt;br /&gt; "ನಾನೇ ಹೇಳಲಾ? ಎವರೆಸ್ಟ್ ಬಿಲ್ಡರ್ಸ್ ಕಂಪನಿಯಲ್ಲಿ, ಸಿವಿಲ್ ಇಂಜಿನಿಯರ್ ತಾನೆ?"&lt;br /&gt; "ಅಯ್ಯೊ, ನಿಮ್ಮ! ನಿಮಗೆ ಹೇಗೆ ಗೊತ್ತು? ನನ್ನನ್ನ ಫಾಲೋ ಮಾಡ್ತಾಯಿದೀರ?"&lt;br /&gt; "ಕ್ಷಮಿಸಿ. ನಿಮ್ಮನ್ನ ಈಗ್ಗೆ ಎರಡು ತಿಂಗಳ ಹಿಂದೆ ಇದೇ ಬಸ್ ಸ್ಟಾಂಡ್‌ನಲ್ಲಿ ನೋಡಿದೆ. ಅವತ್ತಿಂದ ಯಾಕೋ ನೀವು ನನಗೆ ಇಷ್ಟ ಆದ್ರಿ. ನೀವು ದಿನಾ ಓಡಾಡೋ ಸಮಯ ಗೊತ್ತು ಮಾಡ್ಕೊಂಡೆ. ಸುಮಾರು ದಿನದಿಂದ ನಿಮ್ಮನ್ನ ಮಾತಾಡ್ಸೋಣ ಅಂತ ಪ್ರಯತ್ನ ಮಾಡಿದೆ. ಕೊನೆಗೆ ಇವತ್ತು ಸಿಕ್ಕಿದ್ರಿ ನೀವು".&lt;br /&gt; "ನೋಡಿ. ಇವತ್ತೆ ಕೊನೆ. ಇನ್ನು ಮತ್ತೆ ನನ್ನನ್ನು ಮಾತಾಡ್ಸೊಕ್ಕೆ ಪ್ರಯತ್ನ ಪಡಬೇಡಿ. ನನ್ನ ಹಿಂದೆ ಬರಬೇಡಿ. ಬಂದರೆ ಅದರಿಂದಾಗೋ ಅನಾಹುತ ನೀವೇ ಎದುರಿಸಬೇಕಾಗುತ್ತೆ".&lt;br /&gt; "ರೀ. ನಿಮ್ಮನ್ನ ತುಂಬ ಮನಸ್ಸಿಗೆ ಹಚ್ಕೊಂಡಿದೀನಿ. ಒಂದೇ ಸಾರಿ ಹಾಗೆ ಇಲ್ಲ ಅನ್ನಬೇಡಿ. ನೋಡಿ. ನನ್ನ ಜೀವನದಲ್ಲಿ ನೀವೇ ಮೊದಲ ಹೆಣ್ಣು".&lt;br /&gt; "ಹಲೋ, ಡೈಲಾಗ್ ದೊರೆಗಳೆ, ಇನ್ನೂ ಎಷ್ಟು ಹುಡುಗಿಯರಿಗೆ ಇದೇ ಡೈಲಾಗ್ ಹೇಳಿದೀರಾ?"&lt;br /&gt; "ಇಲ್ಲ ಪ್ಲೀಸ್ ನನ್ನ ನಂಬಿ. ನೀವೇ ಮೊದಲು. ನೋಡಿ ನಾನು ಸ್ವಲ್ಪ ಭಾವ ಜೀವಿ. ಹೃದಯದಿಂದ ಯೋಚನೆ ಮಾಡೋನು. ನನ್ನ ಪ್ರಕಾರ, ಜೀವನದಲ್ಲಿ ಹೃದಯವಂತಿಕೆ ಮುಖ್ಯ".&lt;br /&gt; "ನೋಡಿ. ಅಲ್ಲೆ ನಮ್ಮಿಬ್ಬರಿಗೂ ಸರಿ ಹೊಂದೋಲ್ಲ. ನೀವು, ಭಾವಜೀವಿಗಳು ಪಾಪ. ನಾನು ಅದಕ್ಕೆ ತದ್ವಿರುದ್ಧ. ತುಂಬಾ ಪ್ರಾಕ್ಟಿಕಲ್. ಈ ಪ್ರೀತಿ, ಪ್ರೇಮ ಇದರಲ್ಲೆಲ್ಲಾ ನನಗೆ ನಂಬಿಕೆ ಇಲ್ಲ. ಮತ್ತೆ, ಅದಕ್ಕೆಲ್ಲಾ ಸಿಕ್ಕಿ ಬೀಳೋಳು ಅಲ್ಲ. ಜೀವನ ಪೂರ್ತಿ ನಿಮ್ಮ ಹೃದಯದ ಭಾಷೆ ನನಗೆ ಕೇಳೋಕ್ಕೆ ಆಗಲ್ಲ. ನಿಮಗೆ ಒಳ್ಳೇದಾಗಲಿ. ಬೇರೆ ಹುಡುಗಿ ಹುಡುಕಿ".&lt;br /&gt; "ಇದೇ ವಿಷಯಾ ಕಾಫಿ ಕುಡೀತಾ ಮಾತಾಡ‌ಬಹುದಲ್ವಾ? ಆಗ ನೀವು ನನ್ನನ್ನ ಇನ್ನೂ ಚೆನ್ನಾಗಿ ಅರ್ಥ ಮಾಡ್ಕೋಬಹುದು. ಏನಂತೀರಾ?".&lt;br /&gt; "ಹಲೋ ರೋಮಿಯೊ. ಸ್ವಲ್ಪ ವಾಸ್ತವಕ್ಕೆ ಬನ್ನಿ. ನೋಡಿ ಈ ಪ್ರೀತಿ ಪ್ರೇಮ ಎಲ್ಲ ಬಿಟ್ಟು ನಿಮ್ಮ ತಂದೆ ತಾಯಿ ಹುಡುಕೋ ಹೆಣ್ಣು ಮದುವೆಯಾಗಿ ಸುಖವಾಗಿರಿ. ನೋಡಿ, ನನಗೆ ಆಗ್ಲೆ ಎಂಗೇಜ್‌ಮೆಂಟ್ ಆಗಿದೆ. ಸಧ್ಯದಲ್ಲೆ ಮದುವೇನೂ ಆಗುತ್ತೆ. ನನ್ನ ಜೀವನ ಹಾಳು ಮಾಡ್ಬೇಡಿ. ಪ್ಲೀಸ್ !".&lt;br /&gt; ಅವಳ ಮಾತು ಮುಗಿಯುವಷ್ಟರಲ್ಲಿ, ಬಸ್ಸು ಬಂದೇ ಬಿಟ್ಟಿತ್ತು. ಅವನನ್ನ ತಿರುಗಿ ಸಹ ನೋಡದೆ. ಬಸ್ ಹತ್ತಿ ಹೊರಟೇ ಹೋದಳು ಹುಡುಗಿ. ಹುಡುಗ ಇನ್ನೂ ಅಲ್ಲೇ ನಿಂತೇ ಇದ್ದ. ಅವನತ್ತ ಒಮ್ಮೆಯಾದರೂ ತಿರುಗಿ ನೋಡುತ್ತಾಳೇನೋ ಅನ್ನುವ ಆಸೆಯಲ್ಲಿ.&lt;br /&gt; ಹೀಗೆ ಅವರ ಭೇಟಿ ಆ ವಾರವೆಲ್ಲ ಆಯ್ತು. ಹುಡುಗ ಮಾತನಾಡಿಸುವುದು, ಅವಳು ಸಿಟ್ಟಾಗುವುದು ನಡೆದೇ ಇತ್ತು. ಆದರೂ ಹುಡುಗನದು ತ್ರಿವಿಕ್ರಮನ ವಂಶ. ಪ್ರಯತ್ನ ಮಾಡುತ್ತಲೇ ಇದ್ದ.&lt;br /&gt; ಮತ್ತೆ ಸಿಕ್ಕಳು ಹುಡುಗಿ ಹದಿನೈದು ದಿನದಲ್ಲಿ. ಅವಳ ಬ್ಯಾಗಿನಿಂದ ಮದುವೆ ಅಮಂತ್ರಣ ಇವನ ಕೈಗಿತ್ತು "ನನ್ನ ಮದುವೆ ಕಾರ್ಡ್. ಮದುವೆ ೪ ತಿಂಗಳಲ್ಲಿ. ಆದರೆ ಬನ್ನಿ " ಎಂದು ಹೇಳಿ ಮಾಯವಾಗಿದ್ದಳು.&lt;br /&gt; ಪಾಪ , ಹುಡುಗನ ಪ್ರಯತ್ನ ಹೊಳೆಗೆ ಅಭಿಷೇಕ ಮಾಡಿದಹಾಗಾಗಿತ್ತು. ಪೆಚ್ಚು ಮೋರೆ ಹಾಕಿ ಮನೆಗೆ ಹಿಂದುರಿಗಿದ.&lt;br /&gt; ಇಷ್ಟರ ಮಧ್ಯೆ ಅವರಿದ್ದ ನಗರದಲ್ಲಿ ಕೋಮು ಗಲಭೆ. ಕಂಡಲ್ಲಿ ಗುಂಡು, ಉದ್ವಿಗ್ನ ಪರಿಸ್ಥಿತಿ. ಎಲ್ಲಾ ಕಡೆ ಗಲಾಟೆ, ಹಿಂಸೆ, ಸಾವು. ನಗರ ಭುಗಿಲೆದ್ದು ಉರಿಯುತ್ತಿತ್ತು. ಜನರ ದಿನಚರಿ ಅಸ್ತವ್ಯಸ್ತ. ಮತ್ತೆ ನಗರ ಮಾಮೂಲಿ ಸ್ಥಿತಿಗೆ ಬರಲು ತಿಂಗಳೇ ಹಿಡಿದಿತ್ತು. ಹುಡುಗ ಆಗಾಗ ಬಸ್ ಸ್ಟಾಂಡಿಗೆ ಬಂದು ಹೋಗುತ್ತಿದ್ದ. ಅವಳೇನಾದರು ಮತ್ತೆ ಸಿಗಬಹುದೇನೋ ಅನ್ನುವ ಹಂಬಲದಲ್ಲಿ. ಇಲ್ಲ! ಹುಡುಗಿ ಸಿಗಲೇ ಇಲ್ಲ. ಅವಳಿಗೇನಾಯಿತೋ ಗೊತ್ತಿಲ್ಲ. ನಿಧಾನವಾಗಿ ವಾಸ್ತವದ ಅರಿವಾಗುತ್ತಿತ್ತು. ಮರೆಯಲೆತ್ನಿಸುತ್ತಿದ್ದ. ಇನ್ನೊಬ್ಬರಿಗೆ ಹೃದಯ ಕೊಟ್ಟವರ ಪಾಡು ಅವರಿಗೇ ಗೊತ್ತು! ಮುಂದೆ ಅಲ್ಲಿಗೆ ಬರುವುದೇ ಬಿಟ್ಟು ಬಿಟ್ಟ ಹುಡುಗ.&lt;br /&gt; -----------------೦-----------------------&lt;br /&gt; ಜೀವನದಲ್ಲಿ ತಿರುವುಗಳು ಆಕಸ್ಮಿಕ ! ಮತ್ತೆ ಅವರ ಭೇಟಿಯಾಗಿದ್ದು ಅದೇ ಬಸ್ ಸ್ಟಾಂಡ್‌ನಲ್ಲಿ. ಎಂಟು ತಿಂಗಳ ನಂತರ. ಹುಡುಗ ಎತ್ತಲೋ ನೋಡುತ್ತ ನಿಂತಿದ್ದ.&lt;br /&gt; "ಹಲೋ". ಹುಡುಗಿಯೇ ಮಾತನಾಡಿಸಿದಳು.&lt;br /&gt; ಅವನಿಂದ ಉತ್ತರವಿಲ್ಲ!&lt;br /&gt; "ಏನು ಬಸ್ಸಿಗೆ ಕಾಯ್ತಾ ಇದೀರ?" ಹುಡುಗನನ್ನು ಕಂಡ ಸಂತೋಷ ಅವಳ ಮುಖದಲ್ಲಿತ್ತು. ಕಣ್ಣು ಹೊಳೆದಿತ್ತು. ಪುಳಕಿತಳಾದಂತೆ ಕಂಡಳು.&lt;br /&gt; ಹುಡುಗ ನೋಡಿದ. ಗುರುತು ಹಿಡಿದ. ಮುಗುಳ್ನಕ್ಕ.&lt;br /&gt; "ಏನು ಸಮಾಚಾರ?" ಮಾತು ಮುಂದುವರಿಸಿದಳು. ಅವಳ ಪ್ರಶ್ನೆಗೆ ಅವಳಿಗೇ ನಗು ಬಂತು. " ಹಾ..ಪೇಪರ್ ಓದಿ ಅಂತ ಹೇಳ್ಬೇಡಿ. ಇವತ್ತಲ್ಲ, ಈಗಂತೂ ತುಂಬಾ ದಿನದಿಂದಾ ಪೇಪರ್ ನೋಡ್ತಾನೇ ಇದೀನಿ. ನಿಮ್ಮ ವಿಷಯ ಬಂದೇ ಇಲ್ಲ".&lt;br /&gt; ಹುಡುಗ ಮತ್ತೆ ಮುಗುಳ್ನಕ್ಕ.&lt;br /&gt; "ನೋಡಿ ನಾನು ಎಷ್ಟು ಖುಷಿಯಾಗಿದೀನಿ ಇವತ್ತು. ಯಾಕೆ ಗೊತ್ತಾ?"&lt;br /&gt; ಇಲ್ಲ ಅನ್ನುವಂತೆ ತಲೆಯಾಡಿಸಿದ ಹುಡುಗ.&lt;br /&gt; "ಅಯ್ಯೊ, ಅಷ್ಟು ಗೊತಾಗ್ಲಿಲ್ವ? ದಡ್ಡರು ನೀವು. ಯಾಕೆ ಅಂದ್ರೆ, ಇಷ್ಟು ದಿನದ ಮೇಲೆ ನೀವು ಸಿಕ್ಕಿದೀರಾ. ಮತ್ತೆ ಜೀವನದಲ್ಲಿ ನಿಮ್ಮನ್ನ ನೋಡ್ತೀನೋ ಇಲ್ವೋ ಅನ್ನಿಸಿಬಿಟ್ಟಿತ್ತು".&lt;br /&gt; ಹುಡುಗನಿಂದ ಉತ್ತರವಿಲ್ಲ!&lt;br /&gt; "ಯಾಕೇ ತುಂಬಾ ಬೋರ್ ಆಗ್ತಿದೀಯಾ? ಲೇಟೆಸ್ಟ್ ಕನ್ನಡ ಸಿನೆಮಾ ಹಾಡು ಹೇಳಲಾ? ಸೂಪರ್ ಹಾಡು...ನಿನ್ನೀಂದಲೆ....ನಿನ್ನಿಂದಲೆ ಕನಸೊಂದು ಶುರುವಾಗಿದೆ.." ನಗುತ್ತ ಹಾಡೇ ಬಿಟ್ಟಳು ಹುಡುಗಿ, ಅವರಿರುವುದು ಬಸ್ ಸ್ಟ್ಯಾಂಡ್ ಅನ್ನುವುದನ್ನೂ ಮರೆತು!&lt;br /&gt; ಹುಡುಗಿಯಲ್ಲಿದ್ದ ಉತ್ಸಾಹ ಹುಡುಗನಲ್ಲಿರಲಿಲ್ಲ!&lt;br /&gt; "ನಿಮಗೇನು ಅನ್ನಿಸ್ತಾ ಇದೆ. ಇಷ್ಟು ದಿನದ ಮೇಲೆ ನಾನು ಸಿಕ್ಕಿದ್ದು? ನನಗೆ ಗೊತ್ತು. ನಿಮಗೂ ತುಂಬ ಖುಷಿಯಾಗಿದೆ ನನ್ನನ್ನು ನೋಡಿ. ಆದ್ರೆ ಹೇಳ್ಕೊಳ್ಳೋಕ್ಕೆ ಗೊತ್ತಾಗ್ತಾ ಇಲ್ಲ. ಅಲ್ವಾ? ಏ, ನೀವು ಆಮೇಲೆ ಸಿಗಲೇ ಇಲ್ಲ? ನಾನು ನಿಮಗೊಸ್ಕರ ತುಂಬ ದಿನ ಇಲ್ಲಿ ಕಾಯ್ತಾ ಇದ್ದೆ. ಊರಲ್ಲಿ ಇರಲಿಲ್ವಾ? ನಾನೆಷ್ಟು ದಡ್ಡಿ ನೋಡಿ, ನಿಮ್ಮ ಫೋನ್ ನಂಬರ್ ಕೂಡ ತಗೊಂಡಿರಲಿಲ್ಲ. ತುಂಬಾ ವ್ಯಥೆ ಪಟ್ಟೆ, ಗೊತ್ತಾ".&lt;br /&gt; "ಸುಳ್ಳು ಹೇಳ್ಬೇಡಿ. ನಾನು ಅಂದ್ರೆ ನಿಮಗೆ ಇಷ್ಟನೇ ಇರಲಿಲ್ಲ. ನನಗಾಗಿ ನೀವು ಕಾಯ್ತಾಯಿದ್ರಿ ಅಂದರೆ ನಾನು ನಂಬಲ್ಲ". ಮೊದಲ ಬಾರಿ ಹುಡುಗ ಮಾತನಾಡಿದ್ದ.&lt;br /&gt; "ಇಲ್ಲ ರೀ. ನಾನು ಏನು ಅನುಭವಿಸಿದೆ ಅಂತ ನನಗೇ ಗೊತ್ತು. ಹೌದು. ಮೊದಲು ನೀವು ಆಡ್ತಾ ಇದ್ದ ರೀತಿ ನನಗೆ ಹಿಡಿಸ್ತಾ ಇರ್‍ಅಲಿಲ್ಲ. ನೀವೂ ಬೇರೆಯವರ ತರ ರೋಡ್ ರೋಮಿಯೊ ಅಂದ್ಕೊಂಡು ನಿಮ್ಮನ್ನ ದೂರ ಮಾಡ್ದೆ. ನಿಮಗೆ ಗೊತ್ತಲ್ಲ ನನ್ನ ಎಂಗೇಜ್‌ಮೆಂಟ್ ಆಗಿತ್ತು ಆಗ್ಲೆ. ಆದ್ರೆ, ಆ ಹುಡುಗನ ಜೊತೆ ಓಡಾಡಿದ ಮೇಲೆ ಗೊತ್ತಾಯ್ತು ಆ ಹುಡುಗ ತುಂಬಾನೇ ಬೋರ್ ಅಂತ. ಸ್ವಲ್ಪಾನೂ ಹಾಸ್ಯದ ಗಂಧವೇ ಇಲ್ಲ. ತುಂಬಾನೇ ಸೀರಿಯಸ್ಸು. ನಾನೇ ಪ್ರಾಕ್ಟಿಕಲ್ ಅಂದ್ರೆ, ನನಗಿಂತ ಎರಡರಷ್ಟು. ಮೂರು ಹೊತ್ತೂ, ಕೆಲಸ, ಕೆಲಸ, ಕೆಲಸ. ಅಲ್ಲಿ ಇಷ್ಟು ದುಡ್ಡು ಬಂತು, ಇಲ್ಲಿ ಇಷ್ಟು ದುಡ್ಡು ಹೊಯ್ತು, ಬರೀ ಅದೇ. ಅವನ ಜೊತೆ ಪೂರ್ತಿ ಬಾಳು ನನ್ನಿಂದ ಕಳೆಯೋಕ್ಕೆ ಆಗ್ತಾ ಇರಲಿಲ್ಲ. ಯಾಕೋ ಅವನ ಜೊತೆ ಇದ್ದಾಗಲೆಲ್ಲ ನಿಮ್ಮ ನೆನಪು ಕಾಡ್ತಾ ಇತ್ತು. ನಿಮ್ಮ ಚೇಷ್ಟೆ, ಹಾಸ್ಯ, ನಗು, ಮಾತಿನ ಮೋಡಿ ಎಲ್ಲಾ. ನೀವು ನಿಧಾನಕ್ಕೆ ನನ್ನನ್ನ ಆವರಿಸಿಬಿಟ್ಟಿದ್ರಿ, ನನಗೆ ಗೊತ್ತಿಲ್ಲದ ಹಾಗೇ. ನನಗೆ ಆಗ್ಲೆ ಗೊತ್ತಾಗಿದ್ದು, ಪ್ರೀತಿ ಅಂದ್ರೆ ಏನು, ಪ್ರೀತಿಸಿದವರ ಪಾಡು ಏನು ಅಂತ. ಮನೆಯವರನ್ನ ಬೇಡಿ, ಕಾಡಿ ಆ ಮದುವೆ ನಿಲ್ಲಿಸೊಕ್ಕೆ ಒಪ್ಪಿಸ್ದೆ. ಅಪ್ಪ, ಅಮ್ಮ ಯಾರು ನೀ ಮೆಚ್ಚಿರೋ ಹುಡುಗ ಅಂದರೆ, ನನ್ನ ಹತ್ತಿರ ನಿಮ್ಮ ಹೆಸರಿಲ್ಲ , ಅಡ್ರೆಸ್ಸ್ ಇಲ್ಲ. ಹೄದಯ ತುಂಬಾ ನಿಮ್ಮ ಮುಖ, ಮನಸ್ಸಿನ ತುಂಬಾ ನೀವು, ಅಷ್ಟೆ".&lt;br /&gt; ಹುಡುಗ ಕೇಳಿಸಿಕೊಳ್ಳುತ್ತಿದ್ದ, ಆದರೆ ಪ್ರತಿಕ್ರಯಿಸಲಿಲ್ಲ.&lt;br /&gt; "ಏನು ಚೆನ್ನಾಗಿ ಕತೆ ಬಿಡ್ತಿದಾಳೆ ಅಂದ್ಕೊತಿದೀರಾ? ಇಲ್ಲ ರೀ, ನಿಜವಾಗ್ಲೂ. ನೀವು ನನಗೆ ಒಮ್ಮೆ ಹೇಳಿದ್ರಿ. ಜೀವನದಲ್ಲಿ ಪ್ರೀತಿ , ಪ್ರೇಮ ಇದ್ದರೆ, ಮಿಕ್ಕಿದ್ದೆಲ್ಲ ಅದಾಗೆ ಬರುತ್ತೆ ಅಂತ. ಎಷ್ಟು ಸರಿ ಅನ್ನಿಸ್ತಿತ್ತು. ನಾನು ತುಂಬ ಪ್ರಾಕ್ಟಿಕಲ್ ಆಗಿದ್ದೆ. ಆದರೆ ನೀವು ನನ್ನನ್ನ ಭಾವನ ಪ್ರಪಂಚಕ್ಕೆ ಪರಿಚಯಿಸಿದ್ರಿ. ವಾವ್ ! ಆ ಲೋಕದ ಅನುಭವಾನೇ ಬೇರೆ. ಆ ಪ್ರಪಂಚಕ್ಕೂ, ವಾಸ್ತವಕ್ಕೂ ಎಷ್ಟು ವ್ಯತ್ಯಾಸ ಅಲ್ವ? ಸಧ್ಯ, ನೀವು ಈಗ ಸಿಕ್ಕಿದ್ರಲ್ಲ. ಬನ್ನಿ ಕಾಫಿ ಕುಡೀತಾ ಮಾತಾಡೋಣಾ".&lt;br /&gt; "ಇಲ್ಲ. ಕ್ಷಮಿಸಿ. ಈಗ ನನ್ನ ಹತ್ತಿರ ಸಮಯ ಇಲ್ಲ".&lt;br /&gt; "ಯಾಕೆ? ನಾ ಸಿಕ್ಕ ಖುಷಿ ನಿಮ್ಮಲ್ಲಿ ಕಾಣ್ತಾ ಇಲ್ಲ? ಬೇಜಾರಾ? ಇಷ್ಟು ದಿನಾ ಆಟಾಡ್ಸಿ ಈಗ ಬಂದು ಹೀಗೆ ಮಾತಾಡ್ತಾ ಇದೀನಿ ಅಂತಾ? ಅರ್ಥವಾಗುತ್ತೆ ನನಗೆ. ನನ್ನ ಕ್ಷಮಿಸಿ, ನಿಮಗೆ ತುಂಬಾ ನೋಯಿಸ್ಬಿಟ್ಟೆ. ನಿಮ್ಮ ಪ್ರೀತೀನ ಆಗ ಅರ್ಥ ಮಾಡ್ಕೊಳ್ಲಿಲ್ಲ ನಾನು. ಆದ್ರೆ, ಈಗ ಸಿಕ್ಕಿದೀರಲ್ಲ. ಇನ್ನು ಆ ತಪ್ಪು ಮತ್ತೆ ನಡೆಯೋದಿಲ್ಲ. ಪ್ರಾಮಿಸ್".&lt;br /&gt; ಅಷ್ಟರಲ್ಲಿ ಬಸ್ ಬಂದಿತ್ತು.&lt;br /&gt; "ಒಂದು ನಿಮಿಷ ಬಂದೆ" ಎನ್ನುತ್ತ ಹುಡುಗ ಬಸ್ ಕಡೆ ನಡೆದ. ಹುಡುಗಿ ಅವನು ಹೋದ ಕಡೆಯೇ ನೋಡಿದಳು. ಹುಡುಗ, ಬಸ್ ಕಿಟಕಿಯ ಹತ್ತಿರ ನಿಂತು ಒಳಗೆ ಯಾರಿಗಾಗೋ ಹುಡುಕಿದ. ಅವರು ಸಿಕ್ಕಾಗ ಕೈ ಆಡಿಸಿದ. ಮತ್ತೆ ಪ್ರಯಾಣಿಕರು ಇಳಿಯುವ ಬಾಗಿಲ ಕಡೆ ನಡೆದ. ಬಸ್ಸಿನಿಂದ ಇಳಿದವಳು ಸುಂದರ ತರುಣಿ. ಅವಳ ಕೈ ಹಿಡಿದು ಕರೆತಂದ ಹುಡುಗಿಯ ಹತ್ತಿರ.&lt;br /&gt; "ಮೀಟ್ ಮಾಡಿ. ಇವಳು ಕಾದಂಬರಿ. ನನ್ನ ಹೆಂಡತಿ".&lt;br /&gt; ಹುಡುಗಿಗೆ ಶಾಕ್ ಆಗಿತ್ತು. ನಗು ತುಟಿಯಿಂದ ಒಮ್ಮೆಲೇ ಮಾಯವಾಗಿತ್ತು. ಕಣ್ಣಲ್ಲಿ ಅದುವರೆಗೂ ಮಿಂಚುತ್ತಿದ್ದ ನಕ್ಷತ್ರಗಳು ಹಾರಿ ಹೋದವು. ಪೆಚ್ಚಾದಳು ಹುಡುಗಿ.&lt;br /&gt; ಹುಡುಗನೇ ಮುಂದುವರಿಸಿದ. "ಕಾದಂಬರಿ. ಇವರು, ನಾನು ಹೇಳಿದ್ನಲ್ಲ. ನಮ್ಮ ಮದುವೆಗೆ ಮೊದಲು, ನನ್ನ ಒನ್-ವೇ ಪ್ರೇಮ ಕತೆಯ ಹೀರೋಯಿನ್. ಕ್ಷಮಿಸಿ, ಈ ರೀತಿ ಪರಿಚಯ ಮಾಡಿ ಕೊಡ್ತಿರೋದಕ್ಕೆ. ಹಾಗೆ ನೋಡಿದರೆ, ನಿಮ್ಮ ಹೆಸರೂ ಕೂಡ ಗೊತ್ತಿಲ್ಲ ನನಗೆ".&lt;br /&gt; "ಕವಿತಾ..." ಬಲವಂತವಾಗಿ ನಗೆ ತರಿಸಿಕೊಂಡು ಹೇಳಿದಳು ಹುಡುಗಿ.&lt;br /&gt; "ಕವಿತಾ ಅವರೆ, ನಿಮ್ಮ ಬಗ್ಗೆ ನನಗೆಲ್ಲಾ ಹೇಳಿದಾರೆ ಇವರು. ಯಾಕ್ರೀ ಅಷ್ಟು ಆಟ ಆಡ್ಸಿದಿರಾ ಇವರನ್ನಾ? ಪಾಪ ರೀ ಇವರು. ನಿಮ್ಮನ್ನ ಮರೆಯಕ್ಕೇ ಆಗ್ದೇ ಎಷ್ಟು ಒದ್ದಾಡಿದ್ದಾರೆ ಗೊತ್ತಾ. ದೇವ್‌ದಾಸ್ ಆಗ್ಲಿಲ್ಲ ಅಷ್ಟೆ. ಮದುವೆ ಆದಮೇಲೂ ಒಂದು ತಿಂಗಳು ಅದೇ ಗುಂಗಿನಲ್ಲಿದ್ರು. ನಾನು ಬಿಡ್ತೀನಾ? ಮತ್ತೆ ದಾರಿಗೆ ತಂದೆ. ಈಗ ನೋಡಿ ನಾರ್ಮಲ್ ಆಗಿದಾರೆ" ನಗು ನಗುತ್ತ ಹೇಳಿದಳು ಕಾದಂಬರಿ.&lt;br /&gt; ಕವಿತಾಗೆ ಹೇಳುವುದೇನೂ ಇರಲಿಲ್ಲ. ಎಲ್ಲೋ ಕಳೆದು ಹೋಗಿದ್ದಳು. ನಿಂತಲ್ಲೇ ನಿಲ್ಲದಾದಳು. ಮನಸ್ಸು ಛಿದ್ರವಾಗಿತ್ತು.&lt;br /&gt; "ನಾವಿನ್ನು ಬರ್ತೀವಿ. ಬನ್ನಿ ಮನೇಗೆ..." ನಗುತ್ತಾ ಕೈ-ಕೈ ನಡೆದೇ ಬಿಟ್ಟರು ಅವರು.&lt;br /&gt; ಅವರು ಹೋದತ್ತಲೇ ನೋಡುತ್ತಾ ನಿಂತಳು ಕವಿತಾ. "ಸಂಗಾತಿಯ ಜೋಡಿ, ಸ್ವರ್ಗದಲ್ಲೇ ಆಗಿರುತ್ತೆ, ಭೂಮಿ ಮೇಲಲ್ಲ" ಅಂತ ಎಲ್ಲೋ ಓದಿದ್ದು ಅವಳಿಗೆ ನೆನಪಾಯ್ತು. ಕತ್ತಲಾಗುತ್ತಿತ್ತು. ಸೂರ್ಯ ಮುಳುಗುವ ಹೊತ್ತಾಗಿತ್ತು!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5064341961341191540-5790584225641319119?l=girishjamadagni.blogspot.com' alt='' /&gt;&lt;/div&gt;</content><link rel='replies' type='application/atom+xml' href='http://girishjamadagni.blogspot.com/feeds/5790584225641319119/comments/default' title='Post Comments'/><link rel='replies' type='text/html' href='http://www.blogger.com/comment.g?blogID=5064341961341191540&amp;postID=5790584225641319119' title='16 Comments'/><link rel='edit' type='application/atom+xml' href='http://www.blogger.com/feeds/5064341961341191540/posts/default/5790584225641319119'/><link rel='self' type='application/atom+xml' href='http://www.blogger.com/feeds/5064341961341191540/posts/default/5790584225641319119'/><link rel='alternate' type='text/html' href='http://girishjamadagni.blogspot.com/2009/02/blog-post_18.html' title='ಸೂರ್ಯ ಮುಳುಗುವ ಹೊತ್ತು...'/><author><name>Girish Jamadagni</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>16</thr:total></entry><entry><id>tag:blogger.com,1999:blog-5064341961341191540.post-7015626651390246154</id><published>2009-02-06T22:24:00.003+08:00</published><updated>2009-02-06T22:37:19.109+08:00</updated><title type='text'>ನಾಮಾಯಣ !</title><content type='html'>&lt;span style="font-family:verdana;"&gt;ಪುರಂದರ ದಾಸರ "ನೀನ್ಯಾಕೊ ನಿನ್ನ ಹಂಗ್ಯಾಕೊ, ನಿನ್ನ ನಾಮದ ಬಲವೊಂದಿದ್ದರೆ ಸಾಕೋ" ಕೇಳುವಾಗ, ಇದು ಯಾವ ನಾಮದ ಬಲ ಎಂಬ ಅನುಮಾನವಾದರೂ, ಹಾಡಿನ ಅನುಪಲ್ಲವಿ ಮತ್ತು ಚರಣ ಕೇಳಿದಾಗ, ಇದು "ಹೆಸರಿನ" ನಾಮ, "ಹಣೆಯ" ನಾಮವಲ್ಲ ಎಂದು ಖಚಿತವಾಗುತ್ತದೆ. ಆದರೆ, ನಾನು ಬರೆಯ ಹೊರಟಿರುವುದು ಹಣೆಯ ನಾಮದ ಬಗ್ಗೆ!&lt;/span&gt;&lt;br /&gt;&lt;span style="font-family:verdana;"&gt;&lt;span style="font-size:78%;"&gt;&lt;/span&gt;&lt;br /&gt;ದೇವನೊಬ್ಬ, ಆದರೆ, ನಾಮ ಹಲವು! ನೀವು ನೋಡಿರುವಂತೆ ನಾಮಗಳಲ್ಲಿ, ಹಲವು ಆಕಾರ, ಅಳತೆ, ಡಿಸೈನ್. ಕೆಲವು ಎಡದಿಂದ ಬಲ, ಕೆಲವು ಕೆಳಗಿಂದ ಮೇಲೆ. ಇನ್ನು ಕೆಲವು ದುಂಡಗೆ ಹಣೆಯ ಅಂಚಿನಲ್ಲಿ! ಹಣೆಯ ಅಗಲ ಹೆಚ್ಚಿದ್ದಷ್ಟೂ ನಾಮದ ಅಂದ ಹೆಚ್ಚು! ಹಿಂದೆ ನಾಮವಿಲ್ಲದೆ ಮನೆಯಿಂದ ಹೊರಗಡೆ ಕಾಲಿಡುತ್ತಿರಲಿಲ್ಲ, ಗಂಡಸರು. ಈಗ ಎಲ್ಲ ಬದಲಾಗಿದೆ. ಮನೆಯಿಂದ ಹೊರಗೆ ಹೋಗುವ ಮೊದಲು, ಹಣೆಯ ಮೇಲಿನ ನಾಮ ಸರಿಯಾಗಿ ಅಳಿಸಿಯಾಗಿದೆ ಎಂದು ಖಾತ್ರಿ ಮಾಡಿಕೊಂಡೇ ಮನೆ ಬಿಡುತ್ತಾರೆ. ಇಲ್ಲದಿದ್ದರೆ, ಕುಹಕಿಗಳ ಅವಹೇಳನಕ್ಕೆ, ಲೇವಡಿಗೆ, ಗುರಿಯಾಗಬೇಕಾಗುತ್ತದೆ!&lt;br /&gt;&lt;br /&gt;ನಾಮದ ಬಳಕೆ ಸಾವಿರಾರು ವರುಷ ಹಳೆಯದು. ಹಿಂದು ಧರ್ಮದಲ್ಲಿ ಗಮನಿಸಬೇಕಾದ ಒಂದು ಅಂಶವಿದೆ. ಅದೇನೆಂದರೆ, ನಮ್ಮ ಆಚಾರ ವಿಚಾರಗಳಲ್ಲಿ ಸಾಂಕೇತಿಕ ಅರ್ಥಗಳಿಗೆ ಬಹಳ ಪ್ರಾಮುಖ್ಯತೆ. ಈ ಸಾಂಕೇತಿಕ ಅರ್ಥಗಳನ್ನು ತಿಳಿಯುವ ಗೋಜಿಗೇ ಹೋಗದೆ, ಅದನ್ನು ತಿರಸ್ಕರಿಸುವ ಅಙ್ನಾನಿಗಳಿದ್ದಾರೆ. ಎಲ್ಲದಕ್ಕೂ ಅರ್ಥವಿರುವಂತೆ, ನಾಮಕ್ಕೂ ಅರ್ಥವಿದೆ.&lt;br /&gt;ನಾಮದ ಬಳಕೆ ಯಾಕೆ? ಇದಕ್ಕೆ ಉತ್ತರ ಮೂರು ಕೋನದಿಂದ ಹುಡುಕಬಹುದು.&lt;br /&gt;&lt;br /&gt;ಅಲಂಕಾರದ ದೃಷ್ಟಿಕೋನದಿಂದ ನೋಡಿದರೆ, ಹಣೆಯ ಜಾಗ ಮುಖದಲ್ಲೇ ಬಹಳ ಪ್ರಮುಖ! ಬಿಳಿ, ಕೆಂಪು , ಹಳದಿ ಇತ್ಯಾದಿ ಬಣ್ಣದಿಂದ ಇಡುವ ನಾಮ, ಮುಖದ ಲಕ್ಷಣವನ್ನು ಹೆಚ್ಚಿಸುತ್ತದೆ (ಯಾವುದೆ ಬಣ್ಣದ ಚರ್ಮವಿದ್ದರೂ!). ನಾಮ ಮುಖಬೆಲೆಯನ್ನು ವೃಧ್ಧಿಸುತ್ತದೆ ಕೂಡ. ಹಣೆಗೆ ಇಡುವ ನಾಮ, ನಮ್ಮ ಧಾರ್ಮಿಕ ನಂಬಿಕೆ (ದ್ವೈತ, ಅದ್ವೈತ, ವಿಶಿಷ್ಟಾದ್ವೈತ, ಇತ್ಯಾದಿ)ಗಳನ್ನು ಹೆಚ್ಚು ಪ್ರಯಾಸವಿಲ್ಲದೆ ಪ್ರಕಟಿಸಲು ಉಪಕಾರಿ ಸಹ! ಪ್ರತಿಯೊಂದು ಕಂಪನಿಗೂ ತನ್ನದೇ ಆದ ವಿಶಿಷ್ಟ ಚಿನ್ಹೆ (Logo) ಇರುವಂತೆ! ಹಿಂದುಗಳಲ್ಲದೇ, ಇನ್ನೂ ಕೆಲವು ಜಾತಿ-ಪಂಗಡಗಳಲ್ಲಿ ಮತ್ತು ಬುಡಕಟ್ಟು ಜನಾಂಗಗಳಲ್ಲೂ ನಾಮದ ಸಂಪ್ರದಾಯ ಇನ್ನೂ ಕಾಣಸಿಗುತ್ತದೆ.&lt;br /&gt;&lt;br /&gt;ಸಾಂಕೇತಿಕವಾಗಿ ನೋಡಿದರೆ, ಎಡದಿಂದ ಬಲಕ್ಕೆ ಸ್ಮಾರ್ಥರು ಇಡುವ ಮೂರು ವಿಭೂತಿ ಪಟ್ಟೆ, ಅಹಂ, ಅಙ್ನಾನ, ಮತ್ತು ಕರ್ಮದ ಪ್ರತೀಕ. ಅದನ್ನು ವಿಭೂತಿ(ಬೂದಿ)ಯಂತೆ ಸುಟ್ಟು ನಾಶಮಾಡಿ, ಈ ಹುಟ್ಟು-ಸಾವಿನ ಚಕ್ರದಿಂದ ಮುಕ್ತಿಪಡೆಯುವುದೇ ಜೀವನದ ಧ್ಯೇಯ. ಶ್ರೀ ವೈಶ್ಣವರು ಇಡುವ, U ಅಥವ V ನಾಮ ಬ್ರಹ್ಮ, ವಿಷ್ಣು ಮತ್ತು ಲಕ್ಷ್ಮಿಯ ಸಂಕೇತ. ಸದಾ ಅವರ ರಕ್ಷಣೆ ನಮಗಿರಲಿ ಎಂದು, ದೇಹದ ಪ್ರಮುಖ ಭಾಗವಾದ ಹಣೆಯ ಮೇಲೆ ಉದ್ದ ನಾಮ ಧರಿಸುವ ಪ್ರತೀತಿ. ಮಾಧ್ವರು ಇಡುವ ಶಂಖ ಮತ್ತು ಚಕ್ರದ ಮುದ್ರೆ, ಭಗವಂತನ ಆಯುಧದಿಂದ ನಮಗೆ ರಕ್ಷಣೆ (ಚಕ್ರ) ಮತ್ತು ಸದಾ ವಿಜಯ (ಶಂಖ)ದೊರಕಲೆಂಬ ಸಂಕೇತ.&lt;br /&gt;&lt;br /&gt;ಎಲ್ಲಕಿಂತ ಮಹತ್ವವಾದದ್ದು ವೈದ್ಯಕೀಯ ದೃಷ್ಟಿಕೋನ! ವಿಭೂತಿ, ಗಂಧ, ಕುಂಕುಮ, ಚಂದನ ಮತ್ತು ಅರಿಶಿನ ಮುಂತದ ಜೈವಿಕ ಪದಾರ್ಥ ಬಳಸುವ ನಾಮ, ಶಿರ ಮತ್ತು ಕಣ್ಣುಗಳಿಗೆ ತಂಪೊದಗಿಸುತ್ತದೆ ಎನ್ನುವ ವಿಷಯ ಬಹಳ ಹಳೆಯದು. ಹಾಗೆ, ಎರಡು ಹುಬ್ಬು ಕೂಡುವ ಬಿಂದು, ಕುಂಡಲಿನಿ ವಿದ್ಯೆಯಲ್ಲಿ ಬಹಳ ಪ್ರಮುಖ ಚಕ್ರದ ಸ್ಥಾನ. ಈ ಚಕ್ರವನ್ನು ಜಾಗೃತಗೊಳಿಸುವ ಸಾಧನೆ ಮಾಡಿದವರು ತಮ್ಮ ದೇಹದ ಪ್ರತಿಕಾರ್ಯವನ್ನು ಹತೋಟಿಯಲ್ಲಿಡಬಲ್ಲರು. ಅದಕ್ಕೇ, ಎರಡು ಹುಬ್ಬುಗಳ ನಡುವಿನ ಜಾಗ ಮತ್ತು ಅದನ್ನು ಸುತ್ತುವರಿದ ಹಣೆಯನ್ನು ರಕ್ಷಿಸುವುದು ನಮ್ಮ ಪೂರ್ವಜರ ವಿಚಾರ. ಕುಂಕುಮವನ್ನು ಹಣೆಯ ಮಧ್ಯೆ ಇಡುವುದೂ ಇದೇ ಕಾರಣಕ್ಕೆ.&lt;br /&gt;&lt;br /&gt;ಇಷ್ಟೊಂದು ಹಿನ್ನಲೆ ಮತ್ತು ಉಪಯೋಗವಿರುವ ನಾಮ, ಈಗಿನ ಜೀನ್ಸ್ ಮತ್ತು ಬರ್ಮುಡಾ ಫ್ಯಾಷನ್ ಜೊತೆ ಯಾಕೋ ಸರಿಹೊಂದುವುದಿಲ್ಲ! ಆದರೆ ಹಿಂದಿನವರಿಗಿಂತ, ನಾಮದ ವೈದ್ಯಕೀಯ ಉಪಯೋಗಗಳ ಲಾಭ ಪಡೆಯುವುದು ನಮಗೆ ಮುಖ್ಯ ಅನಿಸುತ್ತದೆ. ಏಕೆಂದರೆ, ದಿನಕ್ಕೆ ಸರಾಸರಿ ಎಂಟು ಗಂಟೆ ಕಂಪ್ಯೂಟರಿನ ಮಾನೀಟರನ್ನೇ ದಿಟ್ಟಿಸಿ ನೋಡುವ ನಮ್ಮ ಕಣ್ಣುಗಳಿಗೆ ಮತ್ತು ತಲೆಗೆ, ನಾಮದ ಬಳಕೆ ಹೆಚ್ಚು ಫಲಕಾರಿಯಾಗಬಹುದು!&lt;br /&gt;&lt;span class=""&gt;&lt;/span&gt;&lt;br /&gt;ನಾಮ ಹಾಕುವ (ಬೇರೆಯವರಿಗಲ್ಲ, ನಮ್ಮ ಹಣೆ ಮೇಲೆ!) ಅಭ್ಯಾಸ ದಿನೇ ದಿನೇ ನಶಿಸಿಹೋಗುತ್ತಿದ್ದರೂ, ಅದರ ಮಹತ್ವವನ್ನರಿತು, ಪಾಶ್ಚತ್ಯರು ಅದನ್ನು ನಕಲು ಮಾಡಿ (ಯೋಗ, ಧ್ಯಾನ, ಆಯುರ್ವೇದದಂತೆ!) ಮುಂದೆ ಎಂದೋ ಮತ್ತೆ ನಮ್ಮ ಯುವಕರು ಅದನ್ನು ಹೊಸ ವಿಷಯವೆಂಬಂತೆ ಅವರಿಂದ ಕಲಿಯಬಹುದು!&lt;br /&gt;&lt;br /&gt;&lt;span class=""&gt;&lt;/span&gt;"ನಾಮ"ಸ್ಕಾರ!&lt;br /&gt;-ಗಿರೀಶ್&lt;/span&gt; ಜಮದಗ್ನಿ&lt;br /&gt;&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5064341961341191540-7015626651390246154?l=girishjamadagni.blogspot.com' alt='' /&gt;&lt;/div&gt;</content><link rel='replies' type='application/atom+xml' href='http://girishjamadagni.blogspot.com/feeds/7015626651390246154/comments/default' title='Post Comments'/><link rel='replies' type='text/html' href='http://www.blogger.com/comment.g?blogID=5064341961341191540&amp;postID=7015626651390246154' title='0 Comments'/><link rel='edit' type='application/atom+xml' href='http://www.blogger.com/feeds/5064341961341191540/posts/default/7015626651390246154'/><link rel='self' type='application/atom+xml' href='http://www.blogger.com/feeds/5064341961341191540/posts/default/7015626651390246154'/><link rel='alternate' type='text/html' href='http://girishjamadagni.blogspot.com/2009/02/blog-post.html' title='ನಾಮಾಯಣ !'/><author><name>Girish Jamadagni</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-5064341961341191540.post-1999415038893947060</id><published>2009-01-20T21:20:00.002+08:00</published><updated>2009-01-21T21:27:42.359+08:00</updated><title type='text'>ನೆನಪಿನ ತರಂಗಾಂತರಗಳು!</title><content type='html'>&lt;span style="font-family:verdana;"&gt;&lt;span class=""&gt;(ದಯವಿಟ್ಟು ಗಮನಿಸಿ - ನನ್ನ ಈ ಲೇಖನ ದಟ್ಸ್‌ಕನ್ನಡ.ಕಾಮ್‌ನಲ್ಲೂ ಪ್ರಕಟವಾಗಿದೆ. ಲೇಖನದ ಕೊಂಡಿ - &lt;a href="http://thatskannada.oneindia.in/nri/article/2009/0121-a-walk-down-radio-memory-lane.html"&gt;http://thatskannada.oneindia.in/nri/article/2009/0121-a-walk-down-radio-memory-lane.html&lt;/a&gt;)&lt;/span&gt;&lt;/span&gt;&lt;br /&gt;&lt;span style="font-family:verdana;"&gt;&lt;span class=""&gt;&lt;/span&gt;&lt;/span&gt;&lt;br /&gt;&lt;span style="font-family:verdana;"&gt;ಜನವರೀ ೧೮, ೧೯೦೩, ರೇಡಿಯೋ ತರಂಗಾಂತರಗಳನ್ನು, ಅಟ್ಲಾಂಟಿಕ್‌ನಿಂದಾಚೆಗೆ ಪ್ರಸಾರ ಮಾಡಿ, ಮಾರ್ಕೋನಿ, ವಿಙ್ನಾನದ ಹೊಸ ಅಲೆಯನ್ನೇ ಸೃಷ್ಠಿಸಿದ. ರೇಡಿಯೋ ಯಾರು ಕಂಡು ಹಿಡಿದದ್ದು ಎನ್ನುವುದರ ಬಗ್ಗೆ ಸಾಕಷ್ಟು ವಾದ, ವಿವಾದ, ವ್ಯಾಜ್ಯಗಳಿದ್ದರೂ, ರೇಡಿಯೋ ಅವಿಷ್ಕಾರಕ್ಕೆ ಮೂಲ ಕಾರಣ, ಭಾರತದ ಜಗದೀಶ್ ಚಂದ್ರ ಬೊಸ್ ೧೮೯೪ರಲ್ಲಿ ಮಾಡಿದ ಒಂದು ಪ್ರಯೋಗ ಎನ್ನುವುದನ್ನು ಜಗತ್ತೇ ಒಪ್ಪಿದೆ.&lt;br /&gt;&lt;br /&gt;ಅದೇನೆ ಇರಲಿ. ಇಪ್ಪತ್ತನೇ ಶತಮಾನದ ಮೊದಲರ್ಧದಲ್ಲಿ, ರೇಡಿಯೋದ ಬಳಕೆ ಬೆಳೆದು, ರೇಡಿಯೋ ಒಂದು ಬೃಹತ್ ಸಮೂಹ ಮಧ್ಯಮವಾಯಿತು. ನನ್ನ ಬಾಲ್ಯ ನೆನದಾಗಲೆಲ್ಲ, ರೇಡಿಯೋ ಜೊತೆಗೆ ನಾ ಕಳೆದ, ಅದರೊಂದಿಗೆ ಬೆಳೆದ ದಿನಗಳು ಮನಸ್ಸಿಗೆ ಮುದ ನೀಡಿ ನನ್ನನ್ನು ಭಾವುಕನನ್ನಾಗಿಸುತ್ತದೆ. ಹಿಂದೆ, ರೇಡಿಯೋ ಶ್ರೀಮಂತ ವರ್ಗದ ಜನರಿಗೆ ಮಾತ್ರ ಹೇಗೆ ಸೀಮಿತವಾಗಿತ್ತು ಎಂದು ನಮ್ಮ ತಂದೆ ಅವರ ಕಾಲವನ್ನು ನೆನಪಿಸಿಕೊಳ್ಳುತ್ತ ನನಗೆ ಹೇಳಿದ್ದು ನೆನಪಿದೆ. ರೇಡಿಯೋವನ್ನು ಬಡವರ, ಮಧ್ಯಮ ವರ್ಗದ ಜನರ ಮನೆಯಲ್ಲಿ ಕಾಣಲು ಬಹಳ ವರ್ಷಗಳೇ ಆಯಿತು. ೧೯೪೮-೪೯ರಲ್ಲಿ ರೇಡಿಯೋದ ವಿರಳತೆಯನ್ನು ಙ್ನಾಪಿಸಿಕೊಳ್ಳುತ್ತ, ಆಗಿನ ಕಾಲದ ಪ್ರಸಿಧ್ಧ ಗಾಯಕಿ ಜಿ.ವಿ.ರಂಗನಾಯಕಮ್ಮ ಅವರ ಹತ್ತು ನಿಮಿಷದ ಸಂಗೀತವನ್ನು ರೇಡಿಯೋದಲ್ಲಿ ಕೇಳಲು ನಾಲಕ್ಕು ಮೈಲಿ ದೂರದ ಶೆಟ್ಟರ ಮನೆಗೆ ನಡೆದು ಹೋಗಿದ್ದನ್ನು ನಮ್ಮ ತಂದೆ ಭಾವುಕರಾಗಿ ಈಗಲೂ ಸ್ಮರಿಸುತ್ತಾರೆ. ನನ್ನ ಪುಣ್ಯ. ನಾ ಹುಟ್ಟುವ ಮೊದಲೇ ನಮ್ಮ ಮನೆಯಲ್ಲಿ ರೇಡಿಯೋ ಪರಾಂಬರಿಸಿತ್ತು!&lt;br /&gt;&lt;br /&gt;ನಾವೆಲ್ಲ ರೇಡಿಯೋ ಕೇಳುತ್ತಲೇ ಬೆಳೆದವರು. ನಮಗೆ ಬೇರೆ ಇನ್ಯಾವ ತರಹದ ಮನೋರಂಜನೆಯೇ ತಿಳಿದಿರಲಿಲ್ಲ. ನಮ್ಮ ತಂದೆ, ಆಗಿನ ಕಾಲಕ್ಕೆ ೩೦೦ ರೂ ಕೊಟ್ಟು ತಂದ "ನ್ಯಾಷನಲ್ ಎಖೊ" ವಾಲ್ವ್ ರೇಡಿಯೋ ನಮ್ಮ ಮನೆಯ ಹಾಲ್‌ನ ಪ್ರಮುಖ ಜಾಗದಲ್ಲಿ ವಿರಾಜಮಾನವಾಗಿತ್ತು. ನಮ್ಮ ದೊಡ್ಡ ಅವಿಭಾಜ್ಯ ಕುಟುಂಬದಲ್ಲಿ ನಮ್ಮಲ್ಲಿ ಒಬ್ಬನಂತಾಗಿತ್ತು. ಆಗೆಲ್ಲ ರೇಡಿಯೋ ಗಾತ್ರ ದೊಡ್ಡದಿದ್ದಷ್ಟೂ ಘನತೆ ಹೆಚ್ಚು! ನಮ್ಮ ಮನೆಯದೂ ಅಷ್ಟೆ, ದೈತ್ಯಾಕಾರವಾಗಿತ್ತು. ಅದರ ಘನತೆ ಕುಂದದಂತೆ, ಅಪ್ಪ ಅದಕ್ಕೆ ಒಳ್ಳೆ ಬೀಟೆ ಮರದ ಪೀಠ ಕೂಡ ಮಾಡಿಸಿದ್ದರು. ಅಮ್ಮ ಆಗಾಗ ಅದಕ್ಕೊಂದು ಹೊದಿಕೆ ಹೊಲೆದು ತರಾವರಿ ಕಸೂತಿ ಮಾಡಿ ಅಲಂಕರಿಸುತ್ತಿದ್ದರು. ಹಾಗೆ ನೋಡಿದರೆ, ರೇಡಿಯೋ ಇಟ್ಟ ಸ್ಥಳ ನಮ್ಮ ಮನೆಯ ಹಾಲ್‌ನ ಪ್ರಮುಖ ಆಕರ್ಷಣೆಯ ಸ್ಥಳವೂ ಆಗಿತ್ತು! ನಮ್ಮ ನೆಂಟರು ಹಳ್ಳಿಯಿಂದ ಬಂದಾಗ, ನಾವೆಲ್ಲ ಅವರಿಗೆ ರೇಡಿಯೋ ಬಗ್ಗೆ (ನಮಗೆ ಗೊತ್ತಿದ್ದಷ್ಟು!) ಹೇಳಿ ಹೇಳಿ ಬೀಗುತ್ತಿದ್ದುದು ನನಗಿನ್ನು ನೆನಪಿದೆ!&lt;br /&gt;&lt;br /&gt;ಆಗಿನ ಕಾಲದ ರೇಡಿಯೋಗಳು ಈಗಿನಂತೆ, ಹಾಕಿದ ತಕ್ಷಣ ಹಾಡಲು ಶುರುಮಾಡುತ್ತಿರಲಿಲ್ಲ. ಗುಂಡಿ ಒತ್ತಿದ ಮೇಲೆ, ದೀಪ ಹತ್ತಿ, ಒಳಗಿನ ನಿಯಂತ್ರಕಗಳ ತಂತಿಗಳು ಬೆಳಗಿ, ಕೆಂಪಾಗಿ ಕಾದು, ರೇಡಿಯೋಗೆ ಜೀವ ಬರಲು ಬಹಳ ಸಮಯವೇ ಹಿಡಿಯುತ್ತಿತ್ತು. ಅದರ ಮುಂದಿದ್ದ ಎರಡು ಬಿಳಿ ಬುಗುಟು(ನಾಬ್)ಗಳು, ದೊಡ್ಡ ಕಣ್ಣುಗಳಂತಿದ್ದು, ಅದರ ಸ್ಪೀಕರ್ ಇದ್ದ ಮೇಲ್ಭಾಗ ವಿಶಾಲ ಹಣೆಯಂತೆ ಕಂಗೊಳಿಸಿ, ದೂರದಿಂದ ನೋಡಿದರೆ ಯಾವುದೊ ರಾಕ್ಷಸನ ಮುಖದಂತೆ ಭಯಾನಕವಾಗಿ ಕಾಣುತಿತ್ತು!&lt;br /&gt;&lt;br /&gt;ನಮ್ಮನೆಯಲ್ಲಂತೂ, ಬೆಳಗ್ಗೆ ಎದ್ದು ರೇಡಿಯೋ ಹಾಕಿದರೆ, "ಆಕಾಶವಾಣಿ, ಬೆಂಗಳೂರು. ಇಂದು, ಅಂದರೆ..." ಎಂದು ಶುರುವಾಗುತ್ತಿದ್ದ ಆರಂಭಿಕ ಘೊಷಣೆಯಿಂದ ಹಿಡಿದು, ಬೆಳಗಿನ ೯.೪೫ಕ್ಕೆ ಕೊನೆಗೊಳ್ಳುತ್ತಿದ್ದ "ಇಲ್ಲಿಗೆ ನಿಲಯದ ಮೊದಲನೆ ಪ್ರಸಾರ ಮುಕ್ತಾಯವಾಯಿತು. ನಮ್ಮ ಮುಂದಿನ ಪ್ರಸಾರ..." ಅನ್ನುವ ತನಕ ರೇಡಿಯೋಗೆ ಬಿಡುವಿರುತ್ತಿರಲಿಲ್ಲ. ಬಿತ್ತರವಾಗುತ್ತಿದ್ದ ಎಲ್ಲ ಕಾರ್ಯಕ್ರಮಗಳನ್ನು ("ರೈತರಿಗೆ ಸಲಹೆ"ಯೂ ಸೇರಿದಂತೆ!) ಮೈಯೆಲ್ಲ ಕಿವಿಯಾಗಿ ಕೇಳುತ್ತಿದ್ದೆವು. ಪ್ರದೇಶ ಸಮಾಚಾರ, ವಾರ್ತೆಗಳು ಓದುತ್ತಿದ್ದವರ ಧ್ವನಿ ದಿನವೂ ಕೇಳಿ, ಪರಿಚಯದವರಿಗಿಂತ ಅವರೇ ನಮಗೆ ಹತ್ತಿರವಾಗಿದ್ದರು!&lt;br /&gt;&lt;br /&gt;ಇನ್ನು ರೇಡಿಯೋದಲ್ಲಿ, ನಾವು ಕೇಳದ ಕಾರ್ಯಕ್ರಮವಿರಲಿಲ್ಲ! ಮನೆಯಲ್ಲಿದ್ದ ಒಬ್ಬೊಬ್ಬರಿಗೂ ಅವರವರದೇ ಇಷ್ಟದ ಕಾರ್ಯಕ್ರಮಗಳಿದ್ದರೂ, ಹೇಗೊ, ಜಗಳವಾಡಿ, ಕಿತ್ತಾಡಿ, ರಂಪಾಟಮಾಡಿ, ಕೊನೆಗೂ ಒಂದು ಸಂಧಾನಕ್ಕೆ ಬಂದು, ನಮಗಿಷ್ಟವಾದ ಕಾರ್ಯಕ್ರಮ ಕೇಳುತ್ತಿದ್ದೆವು! ಚಿಂತನ, ಪ್ರದೇಶ ಸಮಾಚಾರ, ಎಂಟು ಘಂಟೆಯ ಹಿಂದಿ, ಇಂಗ್ಲಿಷ್ ವಾರ್ತೆಗಳು, ನಂತರ ಬರುವ ಶಾಸ್ತ್ರೀಯ ಸಂಗೀತ, ಮಧ್ಯಾನ್ಹ ಒಂದು ಘಂಟೆಯ ಸುಮಧುರ ಭಾವಗೀತೆಗಳು, ವಾರಕ್ಕೊಮ್ಮೆ ಬರುತ್ತಿದ್ದ ಪತ್ರೋತ್ತರ ಕಾರ್ಯಕ್ರಮ, ವಿವಿಧ ಕಾರ್ಖಾನೆಯ ಲಲಿತಕಲಾ ಸಂಘದವರು ನಡೆಸಿಕೊಡುತ್ತಿದ್ದ ಸಂಜೆಯ "ಕಾರ್ಮಿಕರಿಗಾಗಿ", ರಾತ್ರಿಯ ರೇಡಿಯೋ ನಾಟಕಗಳು, ಎಲ್ಲಕ್ಕಿಂತ ಹೆಚ್ಚಾಗಿ, ಭಾನುವಾರ ಪ್ರಸಾರವಾಗುತ್ತಿದ್ದ "ಬಾಲ ಜಗತ್" ಕಾರ್ಯಕ್ರಮ ಮತ್ತು ನಂತರ ಬರುತ್ತಿದ್ದ "ನಿಮ್ಮ ಮೆಚ್ಚಿನ ಚಿತ್ರಗೀತೆಗಳು", ಹೀಗೆ ಎಲ್ಲರಿಗೂ ಒಂದಿಲ್ಲೊಂದು ಕೇಳಲು ಸಿಗುತ್ತಿತ್ತು.&lt;br /&gt;&lt;br /&gt;ಯಾವಾಗಲೂ ಯಾವುದಾದರು ಹೊಸ ರೇಡಿಯೋ ಕೆಂದ್ರಗಳನ್ನು ಹುಡುಕುವುದರಲ್ಲೇ ಸಂತಸ ಕಾಣುತ್ತಿದ್ದ ನನ್ನ ಅಣ್ಣ, ಕ್ರಿಕೆಟ್ ಕಾಮೆಂಟರಿ ಇತ್ತೆಂದರೆ ತನ್ನ ಅಚ್ಚುಮೆಚ್ಚಿನ "ವನಿತೆಯರಿಗಾಗಿ" ಕಾರ್ಯಕ್ರಮ ಕೇಳಲಾಗುತ್ತಿಲ್ಲವೆಂದು ಚಡಪಡಿಸುತ್ತಿದ್ದ ನನ್ನಮ್ಮ, ಗಮಕವೆಂದರೆ ಬಿಡುವಿಲ್ಲದಿದ್ದರೂ ಸಿಕ್ಕ ಸಮಯದಲ್ಲೇ ಕೇಳುತ್ತಿದ್ದ ಅಪ್ಪ, ಆಗೊಮ್ಮೆ ಈಗೊಮ್ಮೆ ಬರುತ್ತಿದ್ದ ಸಂಪ್ರದಾಯದ ಹಾಡುಗಳನ್ನು ಕೇಳಲು ರೇಡಿಯೋ ಹತ್ತಿರವೇ ಕುಳಿತು ಕಿವಿಕೊಟ್ಟು ಕೇಳುತ್ತಿದ್ದ ನನ್ನ ಕಿವುಡಜ್ಜಿ, ವಿರೋಧಿ ದಾಂಡಿಗ ಔಟಾದ ಸುದ್ಧಿ ಕಾಮೆಂಟರಿಯಲ್ಲಿ ಕೇಳಿ ಹುಚ್ಚರಂತೆ ಕುಣಿಯುತ್ತಿದ್ದ ನಮ್ಮನ್ನು ಬೆರಗಾಗಿ ನೋಡುತ್ತಿದ್ದ ಕೆಲಸದಾಕೆ ಕಾಳವ್ವ, ಕೆಲಸ ಮಾಡಲು ನಿಲ್ಲಿಸಿದ್ದ ರೇಡಿಯೋವನ್ನು ತನಗೇ ಎಲ್ಲ ತಿಳಿದಿದೆ ಎಂದು ರಿಪೇರಿ ಮಾಡಲು ಹೋಗಿ ಶಾಕ್ ಹೊಡಿಸಿಕೊಂಡಿದ್ದ ಎದುರು ಮನೆ ಮೀಸೆಮಾವ, ಮೆಚ್ಚಿನ ಚಿತ್ರಗೀತೆ ಕೇಳಲು ಕೋರಿದವರ ಹೆಸರಿನಲ್ಲಿ, ನಮ್ಮ ಹೆಸರೂ ಬರುತ್ತದೆಂದು ಆಸೆಯಿಂದ ರೇಡಿಯೋ ಮುಂದೆ ಕ್ಷಣ(ದಿನ)ಗಳ ಕಳೆಯುತ್ತಿದ್ದ ನಾನು, ಕನ್ನಡವನ್ನು ರಾಗ ರಾಗವಾಗಿ ಉಲಿದು ನಮ್ಮನ್ನು ರಂಜಿಸುತ್ತಿದ್ದ ರೇಡಿಯೋ ಸಿಲೋನ್‌ನ ನಿರೂಪಕಿ.... ಹೇಳುತ್ತ ಹೋದರೆ ಈ ನೆನಪುಗಳ ದಿಬ್ಬಣಕ್ಕೆ ಕೊನೆಯಿಲ್ಲ!&lt;br /&gt;&lt;br /&gt;ಕಾಲ ಬದಲಾಗಬೇಕಲ್ಲವೇ? ಹೊಸ ನೀರು ಬಂದು ಹಳೇ ನೀರು ಕೊಚ್ಚಿ ಹೋಗುವಂತೆ, ನಂತರ ಬಂದ ಮಾನೋ, "೨-ಇನ್-೧"ಗಳಿಗೆ ಜಾಗ ಮಾಡಿಕೊಟ್ಟ ರೇಡಿಯೋವನ್ನು ನಾನೇ ಅಟ್ಟ ಸೇರಿಸಿದ್ದು ನೆನಪಿದೆ. ಧೂಳು ಹಿಡಿದು, ಗುರುತೂ ಹತ್ತದೆ, ಯಾವುದೋ ಕಾಲದ ಪಳೆಯುಳಿಕೆಯಂತೆ ಮೂಲೆಯಲ್ಲಿದ್ದ ನಮ್ಮ ನೆಚ್ಚಿನ ರೇಡಿಯೋವನ್ನು ಇತ್ತೀಚೆಗೆ ಅಟ್ಟದಲ್ಲಿ ಕಂಡಾಗ ಕರುಳು ಚುರ್ ಎಂದಿತು! "ನೋಡಿದೆಯ ನನ್ನ ಸ್ಥಿತಿ?" ಎಂದು ಹೇಳುವಂತಿದ್ದ ಅದರ ಬಿಳಿಕಣ್ಣುಗಳ ದಿಟ್ಟ ನೋಟ ಎದುರಿಸಲಾಗದೆ, ಅಟ್ಟ ಇಳಿದು ಬಂದಿದ್ದೆ!&lt;br /&gt;&lt;br /&gt;ಗಿರೀಶ್ ಜಮದಗ್ನಿ&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5064341961341191540-1999415038893947060?l=girishjamadagni.blogspot.com' alt='' /&gt;&lt;/div&gt;</content><link rel='replies' type='application/atom+xml' href='http://girishjamadagni.blogspot.com/feeds/1999415038893947060/comments/default' title='Post Comments'/><link rel='replies' type='text/html' href='http://www.blogger.com/comment.g?blogID=5064341961341191540&amp;postID=1999415038893947060' title='1 Comments'/><link rel='edit' type='application/atom+xml' href='http://www.blogger.com/feeds/5064341961341191540/posts/default/1999415038893947060'/><link rel='self' type='application/atom+xml' href='http://www.blogger.com/feeds/5064341961341191540/posts/default/1999415038893947060'/><link rel='alternate' type='text/html' href='http://girishjamadagni.blogspot.com/2009/01/blog-post_20.html' title='ನೆನಪಿನ ತರಂಗಾಂತರಗಳು!'/><author><name>Girish Jamadagni</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>1</thr:total></entry><entry><id>tag:blogger.com,1999:blog-5064341961341191540.post-7385673147107312974</id><published>2009-01-06T23:09:00.000+08:00</published><updated>2009-01-08T21:06:24.638+08:00</updated><title type='text'>ಸುಖವೆಂಬ ಮರೀಚಿಕೆ....</title><content type='html'>&lt;p&gt;&lt;span style="font-family:verdana;"&gt;ಕಳೆದ ಒಂದು ವಾರದಿಂದ ಎದುರಿಗೆ ಸಿಕ್ಕಿದವರೆಲ್ಲರಿಗೂ "ಹ್ಯಾಪಿ ನ್ಯೂ ಯಿಅರ್" ಹೇಳುತ್ತಲೇ ಇದ್ದೇನೆ. ಅಂಚೆ, ದೂರವಾಣಿ, ಎಸ್ಸೆಮ್ಮೆಸ್ಸ್, ಇ-ಪತ್ರ, ಹೀಗೆ ಎಲ್ಲಾ ಮಾಧ್ಯಮದಿಂದಲೂ ಹೇಳಿದ್ದೂ ಆಗಿದೆ (ಇದು ಸ್ವಲ್ಪ ಅತಿಯಾಗಿದೆ ಕೂಡ)! ಈಗಂತೂ ಇದು ಒಂದು ಯಾಂತ್ರಿಕ ಕ್ರಿಯೆಯಾಗಿ ರೋಸಿಹೋಗಿದೆ! ಶುಭಾಷಯ ಹೇಳುವ ಸದುದ್ದೇಶ ಹಾಗು ಮೂಲ ಅರ್ಥವೂ ಕಳೆದು ಹೋಗಿವೆಯೇನೋ ಅನಿಸುತ್ತದೆ. ಎಷ್ಟು ಜನ ಶುಭಾಷಯ ಹೇಳುವಾಗ ನಿಜವಾಗಲೂ ಇನ್ನೊಬ್ಬರು ಸುಖವಾಗಿರಲಿ, ಅವರಿಗೆ ಸಂತೋಷಸಿಗಲಿ ಎಂದು, ಮನಃಪೂರ್ತಿಯಾಗಿ ಹಾರೈಸುತ್ತಾರೋ ಗೊತ್ತಿಲ್ಲ. ಇದ್ದರೂ, ಅವರ ಸಂಖ್ಯೆ ಹೆಚ್ಚೇನೂ ಇರಲಾರದು! ಆದರೆ, ಎಲ್ಲರೂ ಸುಖ, ನೆಮ್ಮದಿ, ಆರೋಗ್ಯದಿಂದಿರಲಿ ಎಂದು (ಮನಃಪೂರ್ವಕವಾಗಿ) ಆಶಿಸುವುದರಲ್ಲಿ ತಪ್ಪೇನಿಲ್ಲ ಅಲ್ಲವೆ? ಅದು ನಮ್ಮ ಸಂಸ್ಕೃತಿಯೂ ಕೂಡ!&lt;/span&gt;&lt;/p&gt;&lt;p&gt;&lt;span style="font-family:verdana;"&gt;ಈ "ಹ್ಯಾಪಿನೆಸ್ಸ್", ಅಂದರೆ, ಸುಖದ ಬಗ್ಗೇನೆ ಯೋಚಿಸುತ್ತಿದ್ದೆ. "ಸುಖ" ಅಂದರೆ ಏನು? ಮನುಷ್ಯ ಯಾವಾಗ, ಯಾಕೆ ಸುಖವಾಗಿರುತ್ತಾನೆ? ಸುಖವಾಗಿರಲು ಏನಾದರೂ ಸೂತ್ರಗಳಿವೆಯೆ, ಅಡ್ಡದಾರಿಗಳಿವೆಯೆ? ನಿಘಂಟಿನ ಪ್ರಕಾರ, ಇಂಗ್ಲಿಷ್‌ನ "ಹ್ಯಾಪಿ" ಅಥವ "ಹ್ಯಾಪಿನೆಸ್ಸ್‌"ಗೆ ಹಲವು ಅರ್ಥಗಳು - ಸುಖ, ಸಂತೋಷ, ನಲಿವು, ಸೌಖ್ಯ, ಸಂತ್ರುಪ್ತಿ....ಹೀಗೆ. ಒಬ್ಬ ತತ್ವಙ್ನಾನಿಯ ಪ್ರಕಾರ, ಸುಖ ಎಂಬುದು, ಮನಸ್ಸಿನ ಸ್ಥಿತಿ ಅಷ್ಟೆ. ಯೋಚನೆ ಮಾಡಿದಾಗ ಸರಿ ಎನಿಸುತ್ತದೆ! ಎಲ್ಲರಿಗೂ ಒಂದೇ ವಸ್ತುವಿನಿಂದ ಅಥವಾ ವಿಷಯದಿಂದ ಸುಖ ಸಿಗುವ ಸಾಧ್ಯತೆ ಇಲ್ಲ ಅಲ್ಲವೆ? ಒಬ್ಬರಿಗೆ ಮಳೆಯಲ್ಲಿ ನೆನೆದರೆ ಸುಖ ಸಿಗುವುದಾದರೆ, ಕೆಲವರಿಗೆ ಬೀಳುವ ಆ ಹನಿಗಳನ್ನು ಕಿಟಕಿಯ ಹಿಂದಿನಿಂದಲೇ ನೋಡಿ ಸುಖ ಅಥವ ಸಂತೋಷ ಸಿಗಬಹುದು. ಹಾಗೇ, ಒಂದೇ ವಸ್ತು ಅಥವ ವಿಷಯ ಎಲ್ಲ ಕಾಲದಲ್ಲೂ ಅದೇ ವ್ಯಕ್ತಿಗೆ ಸುಖ ಕೊಡುತ್ತದೆಂಬ ಖಾತ್ರಿಯೂ ಇಲ್ಲ! ಬೇಸಿಗೆಯ ಬಿಸಿಲಿನಲ್ಲಿ, ಮುದ ಹಾಗು ಹಿತ ನೀಡುವ ತಣ್ಣನೆ ಗಾಳಿ, ಡಿಸೆಂಬರ್‌ನ ಚಳಿಗಾಲದಲ್ಲಿ ಕಠೋರ! ಮುಂಜಾನೆ ಎದ್ದಾಗ ಸುಬ್ಬುಲಕ್ಶ್ಮಿ ಹಾಡಿದ ವೆಂಕಟೇಶ ಸುಪ್ರಭಾತ ಮನಸ್ಸಿಗೆ ಉಲ್ಲಾಸ ತಂದು, ಕಚೇರಿಗೆ ಹೋಗುತ್ತ ಮಾರ್ಗದಲ್ಲಿ ಮಡೋನಾ‌ಳ ಸಂಗೀತ ಸುಖ ನೀಡಿ, ಸಂಜೆಯ ಚಹ ಜೊತೆ, ಭೀಮಸೇನ್ ಜೋಷಿಯವರ ಶುಧ್ಧಕಲ್ಯಾಣ್ ರಾಗದ ಚೀಜ್ ಆನಂದ ನೀಡಬಹುದು! ಅಂದರೆ, ಸುಖದ ಮೂಲ ಮಳೆ, ತಣ್ಣನೆ ಗಾಳಿ ಅಥವ ಸಂಗೀತವಲ್ಲ, ಅದನ್ನು ಸ್ವೀಕರಿಸುವ ಸ್ಥಿತಿಯಲ್ಲಿದ್ದ ಮನಸ್ಸು ಮಾತ್ರವಲ್ಲವೇ? &lt;/span&gt;&lt;/p&gt;&lt;p&gt;&lt;span style="font-family:verdana;"&gt;ಸುಖವಾಗಿರಲು ಮೂಲ ಕಾರಣ ಮನಸ್ಸೇ ಅಂತಾದರೆ, ಮನಸ್ಸನ್ನು ಕಷ್ಟವೋ ನಷ್ಟವೋ, ಎಲ್ಲಾ ಹೇಗೆ ಬರುತ್ತದೋ ಹಾಗೆ, ಬಂದದ್ದೆಲ್ಲ ಬರಲಿ ಎಂದು ಆಹ್ವಾನ ನೀಡುವ ಧೋರಣೆಗೆ ಪಳಗಿಸಿ, ಸಿದ್ಧಪಡಿಸಿದರೆ ಆಯಿತು, ಸುಖವನ್ನು ಹೊಂದುವ ದಾರಿ ಸುಗಮ! ಹೀಗೆ ವೇದಾಂತ ಬರೆಯುವುದು ಸುಲಭ, ಆದರೆ, ಮನಸ್ಸನ್ನು ನಾವು ಹೇಳಿದ ಹಾಗೆ ಕೇಳುವಂತೆ ಮಾಡುವುದು ಸಾಧಾರಣ ವಿಷಯವಲ್ಲ. ಏಕೆಂದರೆ, ಈ ಮನಸ್ಸೆಂಬ ಮರ್ಕಟದ ಬಿಗಿಮುಷ್ಠಿಗೆ ಸಿಲುಕಿ, ಅದು ಹೇಳಿದಂತೆ ಸದಾಕಾಲ ನಾವು ಕುಣಿಯುತ್ತೇವೆ! ಭಗವದ್ಗೀತೆಯಲ್ಲಿನ ನುಡಿಯಂತೆ, The mind acts like an enemy for those who do not control it! ಮನಸ್ಸನ್ನು ಹತೋಟಿಯಲ್ಲಿಟ್ಟವರಿಗೆ, ಸುಖವೂ ಸುಖ ನೀಡುತ್ತದೆ, ಕಷ್ಟವೂ ಸುಖ ನೀಡುತ್ತದೆ! ಎಲ್ಲಿಯತನಕ ನಾವು ನಮ್ಮ ಮನಸ್ಸಿನ ಅಧೀನದಲ್ಲಿರುತ್ತೇವೋ, ಅಲ್ಲಿಯವರೆಗೂ ಮುಂಗಾರಿನ ಮಳೆಯೂ ಅಸಹ್ಯವೆನಿಸುತ್ತದೆ, ತಣ್ಣನೆಯ ಗಾಳಿಯೂ ಕಠೋರವೆನಿಸುತ್ತದೆ, ಇಂಪಾದ ಸಂಗೀತವೂ ಕರ್ಕಶವೆನಿಸುತ್ತದೆ, ಸುಖವೆಂಬುದು ಮರೀಚಿಕೆಯಾಗಿಯೇ ಉಳಿಯುತ್ತದೆ!&lt;br /&gt;&lt;/span&gt;&lt;span style="font-family:verdana;"&gt;&lt;span class=""&gt;&lt;/span&gt;&lt;/span&gt;&lt;/p&gt;&lt;p&gt;&lt;span style="font-family:verdana;"&gt;ನೀವೇನಂತೀರ?&lt;br /&gt;ಗಿರೀಶ್ ಜಮದಗ್ನಿ&lt;/span&gt;&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5064341961341191540-7385673147107312974?l=girishjamadagni.blogspot.com' alt='' /&gt;&lt;/div&gt;</content><link rel='replies' type='application/atom+xml' href='http://girishjamadagni.blogspot.com/feeds/7385673147107312974/comments/default' title='Post Comments'/><link rel='replies' type='text/html' href='http://www.blogger.com/comment.g?blogID=5064341961341191540&amp;postID=7385673147107312974' title='2 Comments'/><link rel='edit' type='application/atom+xml' href='http://www.blogger.com/feeds/5064341961341191540/posts/default/7385673147107312974'/><link rel='self' type='application/atom+xml' href='http://www.blogger.com/feeds/5064341961341191540/posts/default/7385673147107312974'/><link rel='alternate' type='text/html' href='http://girishjamadagni.blogspot.com/2009/01/blog-post.html' title='ಸುಖವೆಂಬ ಮರೀಚಿಕೆ....'/><author><name>Girish Jamadagni</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>2</thr:total></entry><entry><id>tag:blogger.com,1999:blog-5064341961341191540.post-7421631364295933296</id><published>2008-12-29T21:39:00.000+08:00</published><updated>2008-12-29T21:45:01.328+08:00</updated><title type='text'>ಮುಖ ಬೆಲೆ !</title><content type='html'>ಇತ್ತೀಚೆಗೆ ಚೀನದಲ್ಲಿ ನಡೆದ ಒಲಂಪಿಕ್ಸ್ ಕೂಟ ಒಂದು ಅದ್ಭುತ ಯಶಸ್ಸು ಎಂದು ಜಗತ್ತೇ ಕೊಂಡಾಡಿತು. ಮೊದಲ ಬಾರಿಗೆ ಒಲಂಪಿಕ್ಸ್ ಕ್ರೀಡಾಕೂಟದ ಆತಿಥ್ಯ ವಹಿಸಿದ್ದ ಚೀನ ದೇಶ, ಪ್ರಪಂಚವನ್ನು ತನ್ನತ್ತ ಸೆಳೆಯುವಲ್ಲಿ, ಹಾಗು, ಅದರ ಯಶಸ್ಸಿಗೆ ಎಲ್ಲ ಎಚ್ಚರಿಕೆ ವಹಿಸಿ, ಸಣ್ಣ ಸಣ್ಣ ವಿಷಯಕ್ಕೂ ಬಹಳ ಗಮನ ನೀಡಿತ್ತು. ಮೊದಲ ದಿನದ ಕಾರ್ಯಕ್ರಮದಲ್ಲಿ, ಚೀನಿ ರಾಷ್ಟ್ರಗೀತೆ ಹಾಡಿದ ಪುಟ್ಟ ಸುಂದರ ಹುಡುಗಿ ಲಿನ್ ಮಾವೊಯೀಕೆ, ಕ್ಷಣದಲ್ಲಿ ಜಗತ್‌ಪ್ರಸಿದ್ಧಿಯಾದಳು. ಅವಳ ಕಂಠಕ್ಕೆ, ಆ ಸುಂದರ ಮುಖಕ್ಕೆ ಜಗತ್ತೇ ಬೆರಗಾಗಿತ್ತು. ಆದರೆ, ನಂತರ  ತಿಳಿದದ್ದು, ಆ ಹಾಡು ಮೊದಲೇ ಧ್ವನಿಮುದ್ರಿತವಾಗಿದ್ದು, ಲಿನ್ ಅದಕ್ಕೆ ಬರಿ ತುಟಿ ಚಾಲನೆ ಮಾಡಿದ್ದು ಅಂತ. ಮೂಲತಹ ಆ ಹಾಡನ್ನು ಹಾಡಿದ್ದು ಏಳು ವರುಷದ ಹುಡುಗಿ, ಯಾಂಗ್ ಪೀಯೀ. ಅವಳ ಹಲ್ಲು ವಕ್ರವಾಗಿದ್ದು, ಮುಖ ಲಿನ್ ಅಷ್ಟು ಸುಂದರವಾಗಿಲ್ಲದ ಕಾರಣ, ಯಾಂಗ್‌ಗೆ ಕಾರ್ಯಕ್ರಮದಲ್ಲಿ ಹಾಡಲು ಅವಕಾಶನೀಡಲಿಲ್ಲ! ಸುಶ್ರಾವ್ಯ ಕಂಠವಿದ್ದರೂ, ಮುಖಬೆಲೆ ಇರದಿದ್ದೇ ಇದಕ್ಕೆ ಕಾರಣ! ಎಂತಹ ವಿಪರ್ಯಾಸ!&lt;br /&gt;&lt;br /&gt;ನಮ್ಮ ದೈನಂದಿನ ಆಗುಹೋಗುಗಳಲ್ಲೂ ಅಷ್ಟೆ. ಮುಖ ನೋಡಿ ಮಣೆ ಹಾಕುವ ಕೆಟ್ಟ ಚಾಳಿ. ಮುಖಕ್ಕೆ ಮೊದಲ ಪ್ರಾಧಾನ್ಯತೆ. ಒಬ್ಬ ವ್ಯಕ್ತಿಯನ್ನು ಪೂರ್ಣವಾಗಿ ತಿಳಿಯದೇ, ಅವರ ಗುಣವನ್ನು ಲೆಕ್ಕಿಸದೇ, ಬರಿ ಅವರ ಚಹರೆ ನೋಡಿ, ಅವರ ಬಗ್ಗೆ ತೀರ್ಮಾನ ಮಾಡಿಬಿಡುತ್ತೇವೆ. ಮುಖ ಚೆನ್ನಗಿದ್ದಾಕ್ಷಣ, ಅವರ ಗುಣ, ನಡತೆ, ಎಲ್ಲ ಚೆನ್ನಾಗಿರಬೇಕೆಂದೇನು ಇಲ್ಲವಲ್ಲ! ಹಾಗೇ, ಕಪ್ಪಗಿದ್ದವರು, ಬಾಹ್ಯದಿಂದ ಕುರೂಪಿಯಾಗಿದ್ದವರೂ, ಆಂತರ್ಯದಲ್ಲಿ, ಒಳ್ಳೆಯವರಲ್ಲ ಎನ್ನುವುದು ತಪ್ಪು. ಪುಸ್ತಕವನ್ನು ಓದದೇ ಬರಿ ಅದರ ಮುಖಪುಟ ಅಥವ ವಿನ್ಯಾಸ ನೋಡಿ, ಪುಸ್ತಕ ಚೆನ್ನಾಗಿದೆ / ಚೆನ್ನಾಗಿಲ್ಲ ಎಂದು ತೀರ್ಮಾನ ತಳೆಯುವುದು ಮುಟ್ಠಾಳತನ ಅಲ್ಲದೆ ಬೇರೇನು ಅಲ್ಲ.&lt;br /&gt;&lt;br /&gt;ಆದರೆ, ಈ ತಪ್ಪು ಶಿಕ್ಷಣ ನಮ್ಮ ವ್ಯವಸ್ಥೆಯಲ್ಲೇ ನಡೆಯುತ್ತದೆ. ಉದಾಹರಣೆಗೆ, ನಮ್ಮ ಚಲನಚಿತ್ರದಲ್ಲೇ ನೋಡಿ.  ವಿಲನ್‌ನನ್ನು, ಅತ್ಯಂತ ಕುರೂಪಿಯಾಗಿ ತೋರಿಸುತ್ತಾರೆ! ಸ್ಪುರದ್ರೂಪಿ ವಿಲನ್‌ನನ್ನು ನಾನು ನಮ್ಮ ಸಿನೇಮಗಳಲ್ಲಿ ನೋಡಿರುವುದು ಬಹಳ ವಿರಳ. ಇದರಿಂದ, ಕುರೂಪಿಯಾದವರೆಲ್ಲ, ಕೆಟ್ಟವರು, ವಿಕೃತಕಾಮನೆಗಳನ್ನು ಹೊಂದಿರುವವರು ಎಂಬ ತಪ್ಪು ಅಭಿಪ್ರಾಯ ಮೂಡುವ ಸಾಧ್ಯತೆಗಳಿವೆ. ಬಾಹ್ಯ ಸೌಂದರ್ಯಕ್ಕೆ ನಾವು ಬಹಳ ಪ್ರಾಮುಖ್ಯತೆ ನೀಡುತ್ತೇವೆ. ೯೦ ಪ್ರತಿಶತ ಜಾಹಿರಾತುಗಳು ನಮ್ಮ ಮುಖಾಲಂಕಾರಕ್ಕೆ ಸಂಬಂಧಿಸಿದ್ದವು. ಕಪ್ಪಗಿರುವರನ್ನು ಕೇವಲ ಹದಿನೈದು ದಿನದಲ್ಲಿ ಬೆಳ್ಳಗೆ ಮಾಡಿಬಿಡುವ ಹೊಸ ಹೊಸ ಸೌಂದರ್ಯವರ್ಧಕಗಳು ಮಾರುಕಟ್ಟೆಯಲ್ಲಿ ಪ್ರತಿದಿನವೂ ಅವತಾರ ತಳೆಯುತ್ತವೆ. ಇದರಿಂದ, ಸಮಾಜದಲ್ಲಿ ಕಪ್ಪಗಿರುವುದೇ ತಪ್ಪು ಎಂಬ ತಪ್ಪು ಕಲ್ಪನೆಯೂ ಮೂಡುತ್ತದೆ. ಇಂತಹ ಜಾಹಿರಾತುಗಳು, ಎಷ್ಟೊ ಕೃಷ್ಣವರ್ಣದ ಹೆಂಗಳೆಯರ ಆತ್ಮವಿಶ್ವಾಸವನ್ನೂ ಕುಂದಿಸುತ್ತದೆ.&lt;br /&gt;&lt;br /&gt;ಡಿ.ವಿ.ಜಿ ಅವರು, ಮಂಕುತಿಮ್ಮನ ಕಗ್ಗದಲ್ಲಿ, ಬಾಹ್ಯ ಸೌಂದರ್ಯಕ್ಕೆ ನಾವು ಕೊಡುವ ಮಹತ್ವವನ್ನು ಹೀಗೆ ಲೇವಡಿ ಮಾಡಿದ್ದಾರೆ.&lt;br /&gt;ಸೊಗಸು ಬೇಡದ ನರಪ್ರಾಣಿಯೆಲ್ಲಿಹುದಯ್ಯ?&lt;br /&gt;ಮಗುವೆ ಮುದುಕನೆ ಪುರಾಣಿಕ ಪುರೋಹಿತರೆ?&lt;br /&gt;ಜಗದ ಕಣ್ಣಿಣಿಕದೆಡೆ ಮುಕುರದೆದುರೊಳು ನಿಂತು&lt;br /&gt;ಮೊಗವ ತಿದ್ದುವರೆಲ್ಲ - ಮಂಕುತಿಮ್ಮ&lt;br /&gt;(ಮುಕುರ = ಕನ್ನಡಿ, ಜಗದ ಕಣ್ಣಿಣಿಕದೆಡೆ = ಜಗವು ನೋಡದಿರುವಾಗ)&lt;br /&gt;&lt;br /&gt;ಈ ಧೋರಣೆ ಬದಲಾಗಬೇಕು. ವ್ಯಕ್ತಿಯ ವ್ಯಕ್ತಿತ್ವವನ್ನು ತಿಳಿಯುವ ಪ್ರಯತ್ನ ಹೆಚ್ಚಾಗಬೇಕು. ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಪರಿಪಕ್ವತೆಯನ್ನು ಪಡೆಯಬೇಕು. ಇದು ಹೇಳುವುದು/ ಬರೆಯುವುದು ಸುಲಭ ಆದರೆ ಆಚಾರ ಕಠಿಣ. ಆದರೆ, ಸ್ವಲ್ಪ ಪ್ರಯತ್ನದಿಂದ ಖಂಡಿತ ಸಾಧ್ಯ. ಏಕೆಂದರೆ, ಎಲ್ಲರನ್ನೂ ಹೊರಗಿನಿಂದಲ್ಲದಿದ್ದರೂ ಒಳಗಿನಿಂದ ಸುಂದರವಾಗೇ ಸೃಷ್ಟಿಮಾಡಿದ್ದಾನೇ ಆ ಭಗವಂತ! ನಮ್ಮ ಮತ್ತು ಬೇರೊಬ್ಬರ ಅಂತರಂಗದ ಸುಂದರತೆಯನ್ನು ಕಾಣುವುದು ಸಾಧ್ಯವಾದರೆ, ನಮ್ಮ ಜೀವನ ಖಂಡಿತ ಸಾರ್ಥಕ!&lt;br /&gt;&lt;br /&gt;-ಗಿರೀಶ್ ಜಮದಗ್ನಿ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5064341961341191540-7421631364295933296?l=girishjamadagni.blogspot.com' alt='' /&gt;&lt;/div&gt;</content><link rel='replies' type='application/atom+xml' href='http://girishjamadagni.blogspot.com/feeds/7421631364295933296/comments/default' title='Post Comments'/><link rel='replies' type='text/html' href='http://www.blogger.com/comment.g?blogID=5064341961341191540&amp;postID=7421631364295933296' title='0 Comments'/><link rel='edit' type='application/atom+xml' href='http://www.blogger.com/feeds/5064341961341191540/posts/default/7421631364295933296'/><link rel='self' type='application/atom+xml' href='http://www.blogger.com/feeds/5064341961341191540/posts/default/7421631364295933296'/><link rel='alternate' type='text/html' href='http://girishjamadagni.blogspot.com/2008/12/blog-post_29.html' title='ಮುಖ ಬೆಲೆ !'/><author><name>Girish Jamadagni</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-5064341961341191540.post-5113438938548238950</id><published>2008-12-11T20:46:00.000+08:00</published><updated>2008-12-11T20:49:03.713+08:00</updated><title type='text'>ಮೂರು ಮತ್ತೊಂದು !</title><content type='html'>ನನ್ನವಳು ಯಾವಾಗಲೂ ಹೇಳ್ತಾ ಇರ್‍ತಾಳೆ. "ನಿಮಗೆ ಎಲ್ಲ ವಿಷಯವನ್ನೂ ಮೂರು ಮೂರು ಸಾರಿ ಹೇಳಿದ್ರೇನೆ ತಲೆಗೆ ಹೋಗೋದು. ಒಂದು ಸಾರಿ ಹೇಳಿದ್ರೆ ಯಾಕೆ ಙ್ನಾಪಕ ಇರಲ್ಲಾ?" ಅಂತ. ನನಗೆ ಗೊತ್ತು ಇದು ಜಗತ್ತಿನ ಎಲ್ಲ ಗಂಡಂದಿರಿಗೂ ಅನ್ವಯಿಸಿದರೂ ಕೂಡ, ಮೂರು ಅನ್ನೋ ಸಂಖ್ಯೆ, ನನ್ನ ಜೀವನದಲ್ಲಿ ಎಲ್ಲ ಕಡೆ ಬಂದು ಕಾಡತಾ, ಖುಷಿ ಕೊಡತಾ ಇರುತ್ತೆ. ನನ್ನ ಜನ್ಮದಿನ (೨೧, ೨+೧=೩)ಇಂದ ಹಿಡಿದು, ನಮ್ಮ ಮನೆ ಸಂಖ್ಯೆ, ದೂರವಾಣಿ ಸಂಖ್ಯೆ, ನಾ ಕೊಂಡ ಮೊದಲ ಮೋಟಾರ್ ಗಾಡಿ, ಕೊನೆಗೆ ನನ್ನ ಕಚೇರಿ ಸಿಬ್ಬಂದಿ ಸಂಖ್ಯೆಯವರೆಗೂ ನನ್ನ ಜೊತೆಯೇ ಬಂದುಬಿಡುತ್ತದೆ. ಯಾಕೋ ಏನೊ, ನನ್ನ ಮತ್ತು ಮೂರರ ನಂಟು, ಜನ್ಮಾಂತರಗಳದ್ದು ಅನ್ನಿಸುತ್ತದೆ. ನನ್ನ ಸ್ನೇಹಿತನೊಬ್ಬ ಹೇಳಿದಾನೆ ಕೂಡ. "ಏನೇ ಕೆಲಸ ಮಾಡಿದರೂ ತಿಂಗಳ ೩,೬,೯,೧೨,೧೫,೧೮,೨೧,೨೪,೨೭,೩೦ ತಾರೀಖಿನಲ್ಲೇ ಮಾಡು. ಇಲ್ಲದಿದ್ದರೆ ನಿನ್ನ ಕೆಲಸ ಕೆಡುತ್ತೆ" ಅಂತ. ಅದನ್ನು ಪರೀಕ್ಷಿಸಲು ಹೋಗಿ, ಕೈ ಸುಟ್ಟುಕೊಂಡಿದ್ದೂ ಇದೆ!&lt;br /&gt;&lt;br /&gt;ನನ್ನ ವಿಷಯ ಬಿಡಿ. ಸಂಖ್ಯೆ ಮೂರಕ್ಕೆ ಕೆಲವು ಪ್ರಾಮುಖ್ಯತೆಗಳಿವೆ ಕೂಡ. ವೇದಘೋಷಗಳಲ್ಲಿ, ಶಾಂತಿಮಂತ್ರಗಳಲ್ಲಿ, ಶಾಂತಿಃ, ಶಾಂತಿಃ, ಶಾಂತಿಃ ಎಂದು ಮೂರು ಬಾರಿ ಹೇಳಲಾಗುತ್ತೆ. ಯಾಕೆ ಮೂರು ಸಾರಿ? ಯಾಕೆಂದರೆ, ಶಾಂತಿಯನ್ನು ಕದಡಲು, ಮೂರು ಮೂಲಗಳಿವೆಯಂತೆ. ನಮ್ಮ ದೇಹ, ಮನಸ್ಸಿನಿಂದ ಆಗುವ ತೊಂದರೆಗಳನ್ನು ಶಾಂತವಾಗಿಸಲು ಮೊದಲನೇ ಶಾಂತಿ (ಆಧ್ಯಾತ್ಮಿಕ), ನಮ್ಮಿಂದ ಹೊರಗಿರುವ ಭೌತಿಕ ವಸ್ತುಗಳಿಂದ, ಭೂಮಿಯಿಂದ ,ಪ್ರಕೃತಿಯಿಂದ, ವಾತಾವರಣದಿಂದ ಉಂಟಾಗವು ತೊಂದರೆಗಳನ್ನು ಶಾಂತಗೊಳಿಸಲು ಎರಡನೇ ಶಾಂತಿ (ಆಧಿಬೌತಿಕ) ಮತ್ತು ಇದೆಲ್ಲವನ್ನು ಮೀರಿದ ಶಕ್ತಿಗಳಿಂದ, ನಮ್ಮ ಪೂರ್ವ ಕರ್ಮಗಳಿಂದ ಒದಗಬಹುದಾದ ತೊಂದರೆಗಳನ್ನು ಶಾಂತಗೊಳಿಸಲು, ಮೂರನೆಯ ಹಾಗು ಕೊನೆಯ ಶಾಂತಿ (ಆಧಿದೈವಿಕ).&lt;br /&gt;ಚೀನಿಯರಲ್ಲೂ ಕೂಡ ಸಂಖ್ಯೆ ಮೂರು ಬಹಳ ಗಣನೀಯ, ಏಕೆಂದರೆ, ಚೀನಿ ಭಾಷೆಯಲ್ಲಿ ಸಂಖ್ಯೆ ಮೂರು, "ಜೀವಂತ" ಅಥವ "ಸಜೀವ" ಚೀನಿ ಪದ ಕೇಳಿದಂತೆ ಕೇಳುತ್ತದೆ! ನಮ್ಮ ಕೋರ್ಟ್‌ಗಳಲ್ಲಿ, ಸಾಕ್ಷಿಗಳನ್ನು ಮೂರು ಬಾರಿ ಕರೆಯುವುದು ಪದ್ಧತಿ. ಹಾಗೆ, ಹರಾಜು ಹಾಕುವಾಗ ಕೊನೆಯ ನಿರ್ಧಾರಿತ ಬೆಲೆಯನ್ನು, ಮೂರುಬಾರಿ ಕೂಗಿ ಖಚಿತಪಡಿಸಿಕೊಳ್ಳುವುದು ಸರ್ವೇಸಾಮಾನ್ಯ. ನಮ್ಮ ಪುರಾಣದ ಉದಾಹರಣೆ ಕೂಡ ಇಲ್ಲವೆ? ಆತ್ಮಲಿಂಗ ಹಿಡಿದ ವಟುವಿನ ವೇಷದ ಗಣೇಶ, ಮೂರು ಬಾರಿ "ರಾವಣ"ನನ್ನು ಕರೆದು, ಆತ್ಮಲಿಂಗವನ್ನು ನೆಲದಲ್ಲಿಡಲಿಲ್ಲವೆ?&lt;br /&gt;&lt;br /&gt;ಎರಡು ಪ್ರಯತ್ನದಲ್ಲಿ ಆಗದ ಕೆಲಸ ಮೂರನೇ ಪ್ರಯತ್ನದಲ್ಲಿ ಆಗೇ ಆಗುತ್ತೇ ಎನ್ನುವ ಮಾತು ಕೇಳುತ್ತಲೇ ಇರುತ್ತೇವೆ. ಹಿಂದು ಪುರಾಣದ ಪ್ರಕಾರ, ಲೋಕಗಳು ಮೂರು. ಸ್ವರ್ಗ, ನರಕ, ಪಾತಾಳ (ಆದರೆ ಲೋಕಗಳು ಒಟ್ಟು ೧೪ ಎಂಬ ವಿಷ್ಲೇಷಣೆಯೂ ಇದೆ).&lt;br /&gt;ಗಣಪ್ಪನ ಅಪ್ಪ ನೀಲಕಂಠನಿಗೆ ಕಣ್ಣು ಮೂರಲ್ಲವೇ? ಸಂಸಾರದ ತಾಪಗಳು "ತ್ರಯ"ವಲ್ಲವೇ? ಹೀಗೆ ಬರೆಯುತ್ತಾ ಹೋದರೆ, ಮೂರರ ಮಹಾತ್ಮೆಗೆ ಕೊನೆಯಿಲ್ಲ!&lt;br /&gt;&lt;br /&gt;ಹೋಗ್ತಾ ಹೋಗ್ತಾ, ಒಂದು ಜನಪದ ಒಗಟು. &lt;strong&gt;"ನಾರು ಸೀರೆಯನುಟ್ಟು ನಲಿದಾಡುತಿಹಳು, ನೀರಕೊಡಗಳ ಹೊತ್ತು ತಾ ಮೆರೆಯುತಿಹಳು, ನೋಡಿದವರಿಗೆ, ಮೂರು ಕಣ್ಣ ತೋರುವಳು, ಕೇಳಿದವರಿಗೆ ಅಮೃತ ಸವಿದೋರುತಿಹಳು, ಯಾರಿವಳು?"&lt;/strong&gt;&lt;br /&gt;&lt;span class=""&gt;&lt;/span&gt;&lt;br /&gt;ಸಿಗೋಣ....ಗಿರೀಶ್ ಜಮದಗ್ನಿ&lt;br /&gt;(ಒಗಟಿನ ಉತ್ತರ - ತೆಂಗು)&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5064341961341191540-5113438938548238950?l=girishjamadagni.blogspot.com' alt='' /&gt;&lt;/div&gt;</content><link rel='replies' type='application/atom+xml' href='http://girishjamadagni.blogspot.com/feeds/5113438938548238950/comments/default' title='Post Comments'/><link rel='replies' type='text/html' href='http://www.blogger.com/comment.g?blogID=5064341961341191540&amp;postID=5113438938548238950' title='0 Comments'/><link rel='edit' type='application/atom+xml' href='http://www.blogger.com/feeds/5064341961341191540/posts/default/5113438938548238950'/><link rel='self' type='application/atom+xml' href='http://www.blogger.com/feeds/5064341961341191540/posts/default/5113438938548238950'/><link rel='alternate' type='text/html' href='http://girishjamadagni.blogspot.com/2008/12/blog-post.html' title='ಮೂರು ಮತ್ತೊಂದು !'/><author><name>Girish Jamadagni</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-5064341961341191540.post-3227532213173673432</id><published>2008-11-24T21:39:00.000+08:00</published><updated>2008-11-24T21:54:34.448+08:00</updated><title type='text'>ಕನ್ನಡಕ್ಕೆ ಕನ್ನಡಿ !</title><content type='html'>&lt;p&gt;&lt;span style="font-family:verdana;"&gt;ಕನ್ನಡಕ್ಕೆ ಇತ್ತೀಚೆಗೆ ದೊರೆತ ಶಾಸ್ತ್ರೀಯ ಸ್ಥಾನ ನಿಜಕ್ಕೂ ಹೆಮ್ಮೆಯ ವಿಷಯ. ವಿಧ್ಯುಕ್ತವಾಗಿ ಶಾಸ್ತ್ರೀಯ ಭಾಷೆಯ ಹಣೇಪಟ್ಟಿ ಇರದಿದ್ದರೂ ಕೂಡ, ಹಿಂದಿನಿಂದಲೂ ಕನ್ನಡ ಭಾಷೆ ಶಾಸ್ತ್ರೀಯ ಭಾಷೆಯಾಗಿಯೇ ಇತ್ತು! ಈ ಔಪಚಾರಿಕ ಸ್ಥಾನ-ಮಾನದಿಂದ ಕನ್ನಡಕ್ಕೆ ಎಷ್ಟು ಉಪಯೋಗವಾಗುತ್ತೋ ಗೊತ್ತಿಲ್ಲ. ಆದರೆ, ಕನ್ನಡದ ಅಭಿವೃದ್ಧಿಗೆ, ಕನ್ನಡಕ್ಕೆ ಸಂಬಂಧಿಸಿದ ಸಂಶೋಧನೆಗೆ ಸರ್ಕಾರ ಮೀಸಲಿಡುವ ೧೦೦ ಕೋಟಿಯಿಂದ, ಸುಮಾರು ಜನರ ಅಭಿವೃದ್ಧಿಯಂತೂ ಆಗಲಿದೆ!&lt;/span&gt;&lt;/p&gt;&lt;p&gt;&lt;span style="font-family:verdana;"&gt;ಇಷ್ಟಾಗಿಯೂ, ಭಾಷೆಯ ಅಭಿವೃಧ್ಧಿ ಎಂದರೆ ಏನು? ಹೆಚ್ಚು ಹೆಚ್ಚು ಜನರು ಆ ಭಾಷೆಯನ್ನು ಬಳಸುವುದೇ? ಕರ್ನಾಟಕದಲ್ಲೇ ಕನ್ನಡ ಮಾತನಾಡುವವರ ಸಂಖ್ಯೆ ಕ್ಷೀಣಿಸುತ್ತಿದೆ. ಯುವ ಪೀಳಿಗೆಗೆ, ಕನ್ನಡದಲ್ಲಿ ಮಾತನಾಡುವುದೇ ಘನತೆಗೆ ಕಮ್ಮಿ ಎನ್ನುವ ಮನಸ್ಥಿತಿಯಿದೆ! ಮೂಲತಹ ಕನ್ನಡಿಗರ ಮನೆಯಲ್ಲೂ ಅನ್ಯ ಭಾಷೆಯ ಬಳಕೆಯಿದೆ. ಅಪ್ಪ ಅಮ್ಮನ ಸ್ಥಾನದಲ್ಲಿ ಮಾಮ್-ಡ್ಯಾಡ್‌ಗಳ ಹಾವಳಿಯಿದೆ. ಕನ್ನಡ ಪತ್ರಿಕೆ, ಪುಸ್ತಕ ಓದುವ ಹವ್ಯಾಸ ಪಲಾಯನಮಾಡಿದೆ. ನವೆಂಬರ್‌ನಲ್ಲಿ ಮಾತ್ರ ಕನ್ನಡದ ಬಳಕೆ ಎಂಬ ತಪ್ಪು ಕಲ್ಪನೆಯೂ ಮನೆಮಾಡಿದೆ.&lt;/span&gt;&lt;/p&gt;&lt;p&gt;&lt;span style="font-family:verdana;"&gt;ಇನ್ನು ಭಾಷೆಯ ಭಂಡಾರಕ್ಕೆ ಹೊಸ ಹೊಸ ಪದಗಳ ಸೇರಿಸುವುದೇ ಅಭಿವೃಧ್ಧಿಯಾದರೆ, ಅದಂತೂ ಹೇರಳವಾಗಿ ನಡೆಯುತ್ತಿದೆ! ಕನ್ನಡದ ಬಳಕೆಯಲ್ಲಿ ಈಗಂತೂ ಪರಭಾಷೆಯ ಪದಗಳೇ ಹೆಚ್ಚು. ಬಹುಶಃ, ಹಿಂದಿನ ಸಾವಿರ ವರ್ಷಗಳಲ್ಲಿ ಸೇರದಷ್ಟು ಪದ, ಕಳೆದ ನೂರು ವರ್ಷಗಳಲ್ಲಿ ಕನ್ನಡಕ್ಕೆ ಸೇರ್ಪಡೆಯಾಗಿದೆ. ಲೈಟು, ಗೇಟು, ಸ್ವಿಚ್ಚು, ಪೆನ್ನು, ಬುಕ್ಕು, ಕುರ್ಚಿ, ರೋಡು, ಮಾರ್ಕೆಟ್ಟು ಇತ್ಯಾದಿಯಂತೆ ಬೆಳಗಿನಿಂದ, ರಾತ್ರಿಯವರೆಗಿನ ನಮ್ಮ ಮಾತಿನಲ್ಲಿ, ಬಹಳಷ್ಟು ಪದಗಳು ಬೇರೆ ಭಾಷೆಯವು. ನಮ್ಮ ಮಾತುಗಳಲ್ಲಿ ನುಸುಳಿ, ನಮ್ಮ ಭಾಷೆಯ ಜೊತೆ ಸೇರಿ, "ಉ"ಕಾರದಿಂದ ಅಂತ್ಯಗೊಂಡು, ಹಲವು ಬಾರಿ, ಅದರ ಕನ್ನಡದ ಮೂಲ ಪದಗಳೆ ಙ್ನಾಪಕ ಬರುವುದಿಲ್ಲ. ಇನ್ನು ಕೆಲವು ಬಾರಿ, ಇವೆಲ್ಲ ಕನ್ನಡ ಪದಗಳೇ ಇರಬಹುದೆಂಬ (ಕೆಟ್ಟ) ಸಂದೇಹ ಕೂಡ ಬರುವುದಿದೆ. &lt;/span&gt;&lt;/p&gt;&lt;p&gt;&lt;span style="font-family:verdana;"&gt;ನಾವು ಯಾಕೆ, ಕನ್ನಡ ಮಾತನಾಡಲು ಹಿಂದೇಟು ಹಾಕುತ್ತೇವೆ? ಕನ್ನಡದಲ್ಲಿ ಮಾತನಾಡುವುದು ಕೀಳು ಎಂಬ ಧೋರಣೆಯಾಕೆ? ಬೇರೆ ಭಾಷೆಯಲ್ಲಿರುವ ಯಾವ ಗುಣ, ಛಂದ(ಸ್ಸು) ನಮ್ಮ ಕನ್ನಡದಲ್ಲಿಲ್ಲ? ಕನ್ನಡ ಕಲಿಯಲು ಕಷ್ಟವೇ? ಮಾತನಾಡಲು ಕಷ್ಟವೇ? ಕನ್ನಡ ನಿಘಂಟಿನಲ್ಲಿ ಸಂದರ್ಭಕ್ಕೆ ಬೇಕಾದ ಪದಗಳೇ ಇಲ್ಲವೇ? ಇಷ್ಟು ಸಾವಿರ ವರ್ಷ ಉಳಿದು, ಬೆಳೆದು ಬಂದಿರುವ ಈ ಅದ್ಭುತ ಭಾಷೆಯಲ್ಲಿರುವ ಅಂತಹ ನ್ಯೂನತೆಗಳಾದರೂ ಏನು?&lt;/span&gt;&lt;/p&gt;&lt;p&gt;&lt;span style="font-family:verdana;"&gt;ತೊಂದರೆಯಿರುವುದು ಭಾಷೆಯಲ್ಲಲ್ಲ! ರೋಗವಿರುವುದು ನಮ್ಮಲ್ಲೇ. ನಮ್ಮ ಭಾಷೆ ಬಗ್ಗೆ ನಮಗೇ ಅಭಿಮಾನ ಕಮ್ಮಿ ಅಥವ ಇಲ್ಲವೇ ಇಲ್ಲ ಅಂದರೂ ಸರಿಯೆ. ಇದು ನಮ್ಮ ಮನೆ, ಇವರು ನನ್ನ ತಂದೆ, ಇವರು ನನ್ನ ತಾಯಿ ಎಂದು ಹೇಳುವಷ್ಟೇ ಅಭಿಮಾನದಿಂದ, ಕನ್ನಡ ನನ್ನ ಭಾಷೆ ಎಂದು ಹೇಳುವವರು ಬಹಳ ಕಮ್ಮಿ. ಕನ್ನಡಕ್ಕೆ, ಸಧ್ಯದ ಪರಿಸ್ಥಿತಿಯಲ್ಲಿ, ಅಭಿವೃಧ್ಧಿಯ ಜೊತೆಗೆ, ಅದರ ರಕ್ಷಣೆಯ, ಪೋಷಣೆಯ ಅಗತ್ಯವಿದೆ. ಮಕ್ಕಳಿಗೆ ಇತರೆ ಭಾಷೆಯ ಜೊತೆಗೆ, ಕನ್ನಡವನ್ನು ಕಲಿಸಲೇ ಬೇಕು. ಈಗಲೂ ಕರ್ನಾಟಕದಲ್ಲಿ, ಕನ್ನಡ ಹೆಚ್ಚು ಬಳಕೆಯಲ್ಲಿರುವುದು, ಇಂಗ್ಲಿಷ್ ಅಥವ ಅನ್ಯ ಭಾಷೆಯ ಶಾಖ ತಟ್ಟದ ಹಳ್ಳಿಗಳಲ್ಲಿ, ಗ್ರಾಮಗಳಲ್ಲಿ, ತಾಲ್ಲೂಕ್‌ಗಳಲ್ಲೇ ಹೊರತು ನಗರ ಪ್ರದೇಶಗಳಲ್ಲಲ್ಲಾ! ಆದ್ದರಿಂದ ಕನ್ನಡ ಬೆಳೆಸುವ ಕಾರ್ಯ ಪ್ರಮುಖವಾಗಿ ನಗರಪ್ರದೇಶಗಳಲ್ಲಾಗಬೇಕು. ಹಾಗೆ, ಗ್ರಾಮಾಂತರ ಪ್ರದೇಶಗಳಲ್ಲಿ ಕನ್ನಡ ಉಳಿಸಲು, ಬಳಸಲು ಪ್ರೊತ್ಸಾಹ ನೀಡಬೇಕು. ದೈನಂದಿನ ಮಾತುಕತೆಗಳಲ್ಲಿ ಕನ್ನಡದ ಬಳಕೆ ಹೆಚ್ಚಬೇಕು. ಕನ್ನಡ ನಿಘಂಟು ತೆಗೆದು ನೋಡಿ. ನಾವು ಬಳಸದೇ ಇರುವ ಸಾವಿರಾರು ಕನ್ನಡ ಪದಗಳಿವೆ. ಉಪಯೋಗಿಸದೇ ಅವೆಲ್ಲ ಹಾಗೇ ಮರೆಯಾಗುತ್ತಿವೆ. ಅವುಗಳ ಜಾಗದಲ್ಲಿ ಪರಕೀಯ ಭಾಷೆಗಳ ಪದಗಳು ರಾರಾಜಿಸುತ್ತಿವೆ.&lt;/span&gt;&lt;/p&gt;&lt;p&gt;&lt;span style="font-family:verdana;"&gt;ಕನ್ನಡ ಮಾಧ್ಯಮದಲ್ಲೇ ಹೆಚ್ಚು ಓದಿದ ನನಗೆ, ಈಗಲೂ, ವಿಚಾರ, ಗುಣಾಕಾರ, ಮಗ್ಗಿ ಎಲ್ಲ ತಲೆಯಲ್ಲಿ ಮೊದಲು ಬರುವುದು ಕನ್ನಡದಲ್ಲೇ! ಕನ್ನಡದಲ್ಲಿ ಹೆಚ್ಚೇನು ಪಾಂಡಿತ್ಯವಿಲ್ಲದಿದ್ದರೂ, ಬೇರೆ ಭಾಷೆಗಿಂತ ಕನ್ನಡದ ಬಳಕೆ ನನಗೆ ಸರಾಗ! ಇದಕ್ಕೆ ನಾನು ಬೆಳೆದ ಗ್ರಾಮಾಂತರ ಪರಿಸರವೇ ಕಾರಣ.&lt;/span&gt;&lt;/p&gt;&lt;p&gt;&lt;span style="font-family:verdana;"&gt;ಕೊನೆಯದಾಗಿ, ಒಬ್ಬ ಮನುಷ್ಯ ತನ್ನನ್ನು ಗುರುತಿಸಿಕೊಳ್ಳುವುದು ಅವನ ಸಂಸ್ಕೃತಿಯಿಂದ, ತಾಯ್ನಾಡಿನಿಂದ, ಮಾತೃಭಾಷೆಯಿಂದ. ಹಾಗಾಗಿ, ಮಾತೃಭಾಷೆಗೆ ಹೆತ್ತತಾಯಿಯಷ್ಟೇ ಮಹತ್ವ, ಗೌರವ. ಬೇರೆ ಭಾಷೆಯನ್ನು ಕಲಿಯುವುದು ಅಗತ್ಯ. ಆದರೆ, ಮಾತೃಭಾಷೆಯನ್ನು ಕಡೆಗಾಣಿಸುವುದು ಘೋರ ಅಪರಾಧ.&lt;/span&gt;&lt;/p&gt;&lt;p&gt;&lt;span style="font-family:verdana;"&gt;ಈ ಲೇಖನ ಬರೆಯಬೇಕಾದರೆ, ಸಾಲಿ ರಾಮಚಂದ್ರರಾವ್ (೧೮೮೮-೧೯೭೮) ಅವರ ಸುಂದರ ಪದ್ಯವೊಂದು ನೆನಪಿಗೆ ಬಂತು.&lt;/span&gt;&lt;/p&gt;&lt;p&gt;&lt;span style="font-family:verdana;"&gt;&lt;em&gt;ಕನ್ನಡದ ನೆಲದ ಪುಲ್ಲೆನಗೆ ಪಾವನ ತುಲಸಿ,&lt;/em&gt;&lt;/span&gt;&lt;/p&gt;&lt;p&gt;&lt;span style="font-family:verdana;"&gt;&lt;em&gt;ಕನ್ನಡ ನೆಲದ ಕಲ್ಲೆನಗೆ ಸಾಲಗ್ರಾಮ ಶಿಲೆ ಕನ್ನಡವೆ ದೈವಮೈ,&lt;/em&gt;&lt;/span&gt;&lt;/p&gt;&lt;p&gt;&lt;span style="font-family:verdana;"&gt;&lt;em&gt;ಕನ್ನಡ ಶಬ್ದಮೆನಗೋಂಕಾರಮೀಯೆನ್ನ,ಕನ್ನಡ ನುಡಿಯೆ ಗಾಯತ್ರಿಯದ್ಭುತ ಮಂತ್ರ,&lt;/em&gt;&lt;/span&gt;&lt;/p&gt;&lt;p&gt;&lt;span style="font-family:verdana;"&gt;&lt;em&gt;ಮಿನ್ನಾವುದೈಪೆರತು ಕನ್ನಡದ ಸೇವೆಯಿಂದಧಿಕಮೀಜಗದೊಳೆನಗೆ? &lt;/em&gt;&lt;/span&gt;&lt;/p&gt;&lt;p&gt;&lt;span style="font-family:verdana;"&gt;-ಗಿರೀಶ್ ಜಮದಗ್ನಿ&lt;/span&gt;&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5064341961341191540-3227532213173673432?l=girishjamadagni.blogspot.com' alt='' /&gt;&lt;/div&gt;</content><link rel='replies' type='application/atom+xml' href='http://girishjamadagni.blogspot.com/feeds/3227532213173673432/comments/default' title='Post Comments'/><link rel='replies' type='text/html' href='http://www.blogger.com/comment.g?blogID=5064341961341191540&amp;postID=3227532213173673432' title='1 Comments'/><link rel='edit' type='application/atom+xml' href='http://www.blogger.com/feeds/5064341961341191540/posts/default/3227532213173673432'/><link rel='self' type='application/atom+xml' href='http://www.blogger.com/feeds/5064341961341191540/posts/default/3227532213173673432'/><link rel='alternate' type='text/html' href='http://girishjamadagni.blogspot.com/2008/11/blog-post_24.html' title='ಕನ್ನಡಕ್ಕೆ ಕನ್ನಡಿ !'/><author><name>Girish Jamadagni</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>1</thr:total></entry><entry><id>tag:blogger.com,1999:blog-5064341961341191540.post-1061709518774563459</id><published>2008-11-18T20:45:00.000+08:00</published><updated>2008-11-18T20:51:01.731+08:00</updated><title type='text'>ಕಾಶಿ ಪುರಾಣ !</title><content type='html'>ಕಾಶಿ ಯಾತ್ರೆ ಮಾಡೋದು, ನಮ್ಮ, ಅಂದರೆ ಹಿಂದುಗಳ ಜೀವನದಲ್ಲಿ ಒಂದು ಅತ್ಯಂತ ಮಹತ್ವದ ತೀರ್ಥಯಾತ್ರೆ. ಅರೆ, ಏನಿದು, ಈಗ್ಲೇ ಕಾಶಿಯಾತ್ರೆ ಬಗ್ಗೆ ಅಂತ ಗಾಬರಿ (ಅಥವ ಖುಷಿ?) ಆಯ್ತಾ? ಈ ಲೇಖನ, ತೀರ್ಥಯಾತ್ರೆ ಬಗ್ಗೆ ಕಮ್ಮಿ, ಆದರೆ, ಕಾಶಿಯಾತ್ರೆಯಲ್ಲಿ ಏನಾದರೂ "ಬಿಟ್ಟು" ಬರುವುದಕ್ಕೆ ಹೆಚ್ಚು ಸಂಬಂಧಪಟ್ಟಿದ್ದು!&lt;br /&gt;&lt;br /&gt;ಕಾಶಿಯಾತ್ರೆ ಮಾಡಿಬಂದೊರನ್ನ, ಕಾಶೀದಾರ ಕಟ್ಟಿಸ್ಕೊತಾನೊ, ಅಥವಾ, ವಿಶ್ವೇಶ್ವರ ದೇವಸ್ಥಾನದ ಕಲ್ಲುಸಕ್ಕರೆ ಪ್ರಸಾದ ತಿಂತಾನೋ, ಕೇಳೋ ಸಾಮಾನ್ಯ ಪ್ರಶ್ನೆ ! "ಅಂದಹಾಗೆ, ಕಾಶೀಲಿ ಏನು ಬಿಟ್ಟು ಬಂದ್ರಿ?" ಅಂತ. ಕಾಶೀಗೆ ಹೋದವರು ಏನಾದರು ಇಷ್ಟವಾದದನ್ನು ಬಿಟ್ಟು ಬರುವುದು ವಾಡಿಕೆ! ನಾ ಹೆಚ್ಚು ಕಮ್ಮಿ ಕೇಳಿದವರೆಲ್ಲಾ ಅವರು ಬಿಟ್ಟು ಬಂದಿದ್ದು ಅವರಿಗಿಷ್ಟವಾದ ತಿಂಡಿಯನ್ನು! ಅದರಲ್ಲೂ ಸಿಹಿ ತಿಂಡಿಯನ್ನು! ಯೋಚನೆ ಮಾಡಿದಾಗ ಈ ಥರ ಇಷ್ಟವಾದ ಸಿಹಿ ತಿಂಡಿ ಬಿಟ್ಟು ಬರೋದು ಎಷ್ಟು ಕಷ್ಟ ಆಗಿರ್‍ಬೇಕಲ್ವ ಅನ್ನಿಸ್ತು. ಜಾಮೂನು, ಜಿಲೇಬಿ, ಮೈಸೂರ್ ಪಾಕ್, ಜಹಂಗೀರ್.... ! ಅಬ್ಬ! ಒಂದೊಂದು ಅದಕ್ಕೇ ಸರಿಸಾಟಿ! ಹಾಗಿದ್ದಾಗ ಹೇಗ್ರೀ ಇನ್ನು ಮುಂದೆ ಇದನ್ನ ತಿನ್ನಲ್ಲ ಅಂತ ಬಿಟ್ಟು ಬರೋದು? ಪಾಪ ಅನ್ಸುತ್ತೆ!&lt;br /&gt;&lt;br /&gt;ಇನ್ನೊಂದು ಮೋಜಿನ ಸಂಗತಿಯೆಂದರೆ, ಈ ಕಾಶಿಯಾತ್ರೆ ಮಾಡಿ, ಸಿಹಿ ತಿನ್ನೋದು ಬಿಟ್ಟು ಬಂದವರೆಲ್ಲ, ಅರವತ್ತು ದಾಟಿದವರು. ಅಂದರೆ ಅರಳೊ-ಮರುಳೋ ಅವಸ್ಥೆಯವರು. ಅದು ತಿಳಿದೋ, ತಿಳಿಯದೇನೋ ಅವರ ಸಹಾಯಕ್ಕೆ ಬರುತ್ತೆ. ಹೇಗೆ ಅಂತೀರ? ಒಬ್ಬರು ಕಾಶೀಗೆ ಹೋದಾಗ, ಅವರಿಗಿಷ್ಟವಾದ ಜಿಲೇಬಿ ತಿನ್ನೋದು ಬಿಟ್ಟು ಬಂದಿದ್ರು. ಆದರೆ, ಯಾರ ಮನೇಗಾದ್ರು ಹೋದಾಗ ಅವರಿಗೆ ಜಿಲೇಬಿ ಕೊಟ್ರೆ, "ಸಧ್ಯ, ಜಿಲೇಬಿ ಕೊಟ್ರಲ್ಲ. ನೀವೇನಾದ್ರು ಜಾಮೂನು ಕೊಟ್ಟಿದ್ರೆ, ನಾನು ತಿನ್ನೋಕೆ ಆಗ್ತಿರ್ಲಿಲ್ಲ. ಕಾಶೀಲಿ ಬಿಟ್ಟು ಬಂದನಲ್ಲ ಜಾಮೂನು ತಿನ್ನೋದು?" ಅನ್ನೋರು. ಅದೇ ಪಾರ್ಟಿ, ಇನ್ನೊಬ್ಬರ ಮನೇಲಿ ಜಾಮೂನು ಕೊಟ್ಟಾಗ, ಡಯಲಾಗ್, ಪೂರ್ತಿ ಉಲ್ಟ! ಒಟ್ಟಿನಲ್ಲಿ ಅವರ ಮರೆವು ಅವರ ಸಹಾಯಕ್ಕೆ ಬರ್‍ತಿತ್ತು. ಹಾಗೆ, ಎಲ್ಲ ಸಿಹಿ ತಿಂಡೀನು, ಚೆನ್ನಾಗಿ ತಿಂದು ಮುಗಿಸ್ತಿದ್ರು! ಮನೇಲಿದ್ದಾಗ ಮಾತ್ರ ಪಾಪ, ಆ ಅನುಕೂಲ ಇರಲಿಲ್ಲ. ಯಾಕೆ ಅಂದ್ರೆ, ಏನು ಬಿಟ್ಟು ಬಂದೆ ಅನ್ನೋದು ಇವರು ಮರೀತಿದ್ರೂ, ಅವರ ಹೆಂಡತೀಗೆ ಚೆನ್ನಾಗಿ ಙ್ನಾಪಕ ಇತ್ತಲ್ಲಾ!&lt;br /&gt;&lt;br /&gt;ಯಾರೋ ಪುಣ್ಯಾತ್ಮ, ಇಷ್ಟ ಅಂತ ಕಾಶೀಲಿ ಹೆಂಡತೀನೇ ಬಿಟ್ಟು ಬಂದನಂತೆ (ಜೋಕೇ ಇರಬೇಕು)! ಇನ್ನೊಬ್ಬ ಎಷ್ಟು ಯೋಚಿಸಿದ್ರು, ಏನು ಬಿಡೋದು ಅಂತ ಗೊತ್ತಾಗದೆ, ಹೋಗ್ಲಿ ಅಂತ, ಗಡ್ಡಾನೇ ಬಿಟ್ಟನಂತೆ (ಇದು ನಿಜ ಇರಬಹುದು!). ಈ ಬಿಟ್ಟು ಬರುವುದರ ಮೂಲ ಏನಿರಬಹುದು ಅಂತ ಹಾಗೇ ಯೋಚಿಸ್ತಿದ್ದೆ. ಜೀವಮಾನದಲ್ಲಿ ಒಂದು ಸಾರಿ ಹೋಗೋದು ಕಾಶಿಯಾತ್ರೆಗೆ. ಹಾಗೆ ಹೋದ ಙ್ನಾಪಕಾರ್ಥವಾಗಿ ಏನಾದ್ರು ಬಿಟ್ಟು ಬರಲಿ ಅಂತನಾ? ಪ್ರತಿಸಾರಿ ನಮಗಿಷ್ಟವಾದದ್ದು ಕಣ್ಣೆದುರಿಗೆ ಬಂದಾಗ ಕಾಶಿಯಾತ್ರೆಯ (ವಿಶ್ವನಾಥನ) ನೆನಪು ಬರಲಿ ಅಂತಾನಾ? ಅಥವಾ, ಮೂಲತಹ, ನಮ್ಮ ಕೆಟ್ಟಗುಣಗಳನ್ನು (ಸಿಟ್ಟು, ಸುಳ್ಳು ಹೇಳೋದು, ಮೋಸ ಮಾಡೋದು...) ಬಿಟ್ಟು ಬರುವ ಕ್ರಮ ಇದ್ದು ಅದು ಬಿಡೋಕೆ ಆಗದಲೆ, ಇಷ್ಟವಾದದ್ದನ್ನು ಬಿಟ್ಟು ಬರೋ ಪದ್ಧತಿ ಶುರು ಆಯ್ತಾ? ಏನಾದರೂ ಇರಲಿ, ನಮ್ಮ ಪೂರ್ವಜರ ಉದ್ದೇಶ ಒಳ್ಳೆಯದೇ ಇರಬೇಕು. ಅವರೇನು ದಡ್ಡರೆ, ಸುಮ್‌ಸುಮ್ನೆ ಏನಾದ್ರು ಬಿಟ್ಟು ಬರೋದಿಕ್ಕೆ?&lt;br /&gt;&lt;br /&gt;ಹಿಂದಿನ ಕಾಲದಲ್ಲಿ, ಕಾಶಿಯಾತ್ರೆಗೆ ಹೋದವರು, ಹೋದ್ರು ಅಂತಲೇ ಲೆಖ್ಖವಿತ್ತಂತೆ! ಅಂದ್ರೆ, ಕಾಶಿಯಿಂದ ವಾಪಸ್ಸು ಮನೆಗೆ ಬರ್‍ತಾ ಇದ್ದವರು ಬಹಳಾ ಕಮ್ಮಿ. ಯಾಕೇ ಅಂದ್ರೆ, ಈಗಿನ ಕಾಲದ ತರಹ, ಬಸ್ಸು, ಕಾರು, ರೈಲು, ವಿಮಾನ ಇರಲಿಲ್ಲವಲ್ಲಾ! ಅವರೆಲ್ಲ, ನಡೆದುಕೊಂಡೋ, ಎತ್ತಿನ ಗಾಡೀಲೋ, ಈಜ್ತಾನೋ, ತೆವಳ್ತಾನೋ, ಹೇಗೋ, ಆರೆಂಟು ತಿಂಗಳಲ್ಲಿ ಕಾಶಿ ಸೇರ್‍ತಿದ್ರಂತೆ (ಹಾಗಂತ ಕೇಳಿದ್ದು!!). ಇನ್ನು ಅಷ್ಟು ಕಷ್ಟ ಪಟ್ಟು ಕಾಡಲ್ಲೋ , ನಾಡಲ್ಲೋ ಹೋಗ್ತಾನೇ, ಏನೇನೋ ಖಾಯಿಲೆಯಾಗಿ ಕಾಶಿ ತಲುಪ್ತಾ ಇದ್ದದ್ದೇ ಕಮ್ಮಿ ಜನ ಅಂತ ನಮ್ಮಜ್ಜಿ ಹೇಳ್ತಾ ಇದ್ರು. ಕಾಶಿ ತಲುಪಿದ ಮೇಲೆ, ಕೆಲವರು, ವಾಪಸ್ಸು ಬರೋ ಶಕ್ತಿ ಇಲ್ಲದೇ, ಅಲ್ಲೇ ಎಲ್ಲೋ ಅಲೆಮಾರಿಗಳ ತರಹ ಇದ್ದುಬಿಡುತ್ತಿದ್ದರಂತೆ! (ಮದುವೆ ಕಲಾಪದಲ್ಲೂ, ವರ, ಕಾಶೀಗೆ ಹೋಗ್ತೀನಿ ಅಂತ ಭಾವೀ ಮಾವನಿಗೆ ಹೆದರಿಸೋದು ಇದಕ್ಕೆ ಇರಬೇಕು ಅಲ್ವ?) ಹಿಂದೆ, ಅಕಸ್ಮಾತ್ ಏನಾದ್ರೂ ಕಾಶಿಗೆ ಹೋದವರು, ಅಪ್ಪಿ ತಪ್ಪಿ, ವಾಪಸ್ಸು ಬಂದ್ರು ಅಂದ್ರೆ, ಊರೆಲ್ಲಾ ಸೇರಿ, ಸಂಭ್ರಮದಿಂದ ಹಬ್ಬ ಮಾಡ್ತಿದ್ದರಂತೆ! ಕಾಶಿಗೆ ಹೋಗೋಕ್ಕೆ ಆಗದೇ ಇದ್ದವರು, ಹೋಗಿ ಬಂದವರನ್ನು ನೋಡಿದ್ರೆ ಸಾಕು, ಹೋಗಿ ಬಂದಷ್ಟೆ ಪುಣ್ಯ ಸಿಗ್ತಾಯಿತ್ತಂತೆ!&lt;br /&gt;&lt;br /&gt;ಈಗ ಬಿಡಿ, ಕಾಶಿಗೆ ಹೋಗಿ ಬರೋದು, ತುಂಬಾ ಸುಲಭ. ಪ್ಯಾಕೇಜ್ ಟೂರ್ ಬೂಕ್ ಮಾಡಿದ್ರೆ ಆಯ್ತು. ಬರೀ ಕಾಶಿ ಅಲ್ಲ, ಮುಂಬೈ‌ಯಿಂದ ಹಿಡಿದು, ಜೈಪುರ್, ದೆಹಲಿ, ಕಾಶಿ, ಬದರಿ, ಕೇದರ ಎಲ್ಲ ಸುತ್ತಿಸಿ, ಕೊನೆಗೆ, ಮುಮ್ತಾಜ಼್ ಮಹಲ್ (ಅದೇ ರೀ, ತಾಜ್ ಮಹಲ್) ಒಳಗೂ ಕರ್ಕೊಂಡು ಹೋಗಿ, ಮುಮ್ತಾಜ಼್‌ನ ಗೋರಿ ಕೂಡ ತೋರಿಸಿ ಕರ್‍ಕೊಂಡು ಬರ್‍ತಾರೆ! ನೋಡಿ ಎಂತಹ ಪುಣ್ಯ! ಕಾಶೀ ಹೆಸರಲ್ಲಿ, ಪೂರ್ತಿ ಉತ್ತರ ಭಾರತ ನೋಡ್ಕೊಂಡು ಬರಬಹುದು.&lt;br /&gt;&lt;br /&gt;ಅರೆ! ಏನಿದು? ಹೊರಟೇ ಬಿಟ್ರಾ ಕಾಶಿಗೆ? ಹೊರಡಕ್ಕೆ ಮೊದಲು, ಕಾಶಿ ಬಗ್ಗೆ, ನಮ್ಮ ಕೈಲಾಸಂ ಬರೆದಿರೊ, ಒಂದು ತಮಾಷೆ ಹಾಡು ಕೇಳ್ಬಿಡಿ...&lt;br /&gt;&lt;a href="http://www.youtube.com/watch?v=Jzlf4c27Lss"&gt;http://www.youtube.com/watch?v=Jzlf4c27Lss&lt;/a&gt;&lt;br /&gt;-ಗಿರೀಶ್ ಜಮದಗ್ನಿ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5064341961341191540-1061709518774563459?l=girishjamadagni.blogspot.com' alt='' /&gt;&lt;/div&gt;</content><link rel='replies' type='application/atom+xml' href='http://girishjamadagni.blogspot.com/feeds/1061709518774563459/comments/default' title='Post Comments'/><link rel='replies' type='text/html' href='http://www.blogger.com/comment.g?blogID=5064341961341191540&amp;postID=1061709518774563459' title='0 Comments'/><link rel='edit' type='application/atom+xml' href='http://www.blogger.com/feeds/5064341961341191540/posts/default/1061709518774563459'/><link rel='self' type='application/atom+xml' href='http://www.blogger.com/feeds/5064341961341191540/posts/default/1061709518774563459'/><link rel='alternate' type='text/html' href='http://girishjamadagni.blogspot.com/2008/11/blog-post_18.html' title='ಕಾಶಿ ಪುರಾಣ !'/><author><name>Girish Jamadagni</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-5064341961341191540.post-1462545472482797692</id><published>2008-11-11T22:09:00.000+08:00</published><updated>2008-11-11T22:12:15.404+08:00</updated><title type='text'>ದಾನವ ಮಾಡದವನೇ ದಾನವ!</title><content type='html'>&lt;div&gt;&lt;br /&gt;&lt;/div&gt;&lt;div&gt;ದಾನ ಮಾಡುವುದು ಒಂದು ಶ್ರೇಷ್ಠ ಕಾರ್ಯ. ಒಬ್ಬ ಮಾನವನಾಗಿ, ಇನ್ನೊಬ್ಬ ಮಾನವನಿಗೆ, ನಾವು ಮಾಡಬಲ್ಲಂತಹ ಕನಿಷ್ಠ ಔದಾರ್ಯತೆಯಲ್ಲಿ, ದಾನ ಪ್ರಮುಖ. ದಾನಗಳಲ್ಲಿ ಹಲವು ವಿಧ. ಧನದಾನ, ಧಾನ್ಯದಾನ, ವಿದ್ಯಾದಾನ, ಗೋಧಾನ, ಭೂದಾನ, ಕನ್ಯಾದಾನ, ರಕ್ತದಾನ, ಹೀಗೆ ಹತ್ತು ಹಲವು. ನಮ್ಮಲ್ಲಿರುವ ವಸ್ತು ಬೇರೆಯವರಿಗೆ ಉಪಯೋಗವಾಗುವಂತಿದ್ದರೆ, ಅದನ್ನು ದಾನ ಮಾಡುವ ಯೋಗ್ಯತೆ ಇದ್ದರೆ, ಅರ್ಹರಿಗೆ, ದಾನ ಮಾಡುವುದು ಉತ್ತಮ. ದಾನವೆಂಬ ಕಾರ್ಯದ ಮಹತ್ವ ಮತ್ತು, ಸಮಾಜಕ್ಕೆ ಅದು ಮಾಡುವ ಒಳಿತನ್ನು ಬಹಳ ಹಿಂದೆಯೇ ಮನಗಂಡ ನಮ್ಮ ಪೂರ್ವಜರು, ದಾನವನ್ನು ನಮ್ಮ ಪೂಜೆ, ಹಬ್ಬಗಳ ರೀತಿಗಳಲ್ಲಿ ಅಳವಡಿಸಿದ್ದಾರೆ. ಶ್ರಾಧ್ಧ ಕಾರ್ಯದಲ್ಲೂ ಕೂಡ, ದಾನವನ್ನು ಮಾಡುವ ಪರಿಪಾಠವಿದೆ. &lt;/div&gt;&lt;div&gt;&lt;br /&gt;&lt;/div&gt;&lt;div&gt;ದಾನ ಮಾಡುವುದರಿಂದ, ನಮಗೆ ಸಂಸಾರದ ಜಡವಸ್ತುಗಳ ಮೇಲಿನ ವ್ಯಾಮೋಹ ಕಡಿಮೆಯಾಗುವುದೆನ್ನುವುದು ನಮ್ಮ ಪೂರ್ವಿಕರ ವಿಚಾರ. ಶ್ರ್‍ಇಮಂತ ಹಾಗು ಬಡವನೆಂಬ ಸಮಾಜದ ರೋಗವನ್ನು, ವಾಸಿಗೊಳಿಸುವ ದಾನ, ಸಮಾಜವಾದ (SOCIALISM)ದ ಒಂದು ಪ್ರಾಕ್ಟಿಕಲ್ ಸಾಧನ ಕೂಡ! ಇಂದಿನ ಯುಗಕ್ಕೂ ದಾನವೆಂಬ ಪ್ರಕ್ರಿಯೆ ಬಹಳ ಪ್ರಸ್ತುತ.  &lt;/div&gt;&lt;div&gt;&lt;br /&gt;&lt;/div&gt;&lt;div&gt;ದಾನ ಮಾಡುವುದು ಮುಖ್ಯ. ಆದರೆ, ದಾನ ಮಾಡುವುದಕ್ಕೂ ಒಂದು ನೀತಿ, ನಿಯಮವಿದೆ. "ಸೊಡಲೆಣ್ಣೆ ತೀರಿದರೆ, ಕೊಡನೆತ್ತಿ ಸುರಿವರೇ? (ಇರುವುದೆಲ್ಲಾ) ಕೊಡಬೇಡ, ಕೊಡದೆ ಇರಬೇಡ, ಧರ್ಮವನು ಬಿಡಬೇಡ" ಎಂದು ಸರ್ವಙ್ನ ಬಹಳ ಸೂಕ್ಷ್ಮವಾಗಿ ವಚನದಲ್ಲಿ ಹೇಳಿದ್ದಾನೆ. ಇದಕ್ಕೆ ಸಂಬಂಧಪಟ್ಟ ತೆನಾಲಿರಾಮನ ಒಂದು ಕಥೆ ಓದಿ (http://kathavarta.org/2008/08/02/mothers-last-wish/).&lt;/div&gt;&lt;div&gt;&lt;br /&gt;&lt;/div&gt;&lt;div&gt;ಹಾಗೆ, ದಾನ ತೆಗೆದುಕೊಳ್ಳಲೂ ಯೋಗ್ಯತೆಬೇಕು! ಎಲ್ಲಾ ಇದ್ದವರಿಗೇ ದಾನ ಮಾಡುವುದರಲ್ಲಿ ಅರ್ಥವಿಲ್ಲ. ಧರ್ಮಗ್ರಂಥಗಳಲ್ಲಿ ದಾನದ ಬಗ್ಗೆಯೇ ನಿರ್ಧಿಷ್ಠ ವ್ಯಾಖ್ಯಾನವಿದೆ. ಬೇಸರದಿಂದ, ಭಯದಿಂದ, ಪ್ರತಿಯಾಸೆಯಿಂದ, ಹೀಯಾಳಿಸುವ ಉದ್ದೇಶದಿಂದ ಅಥವಾ ಖ್ಯಾತಿಗಳಿಸುವ ಉದ್ದೇಶದಿಂದ ದಾನ ಮಾಡಿದರೆ, ಅದು ದಾನವಲ್ಲ! ಹಾಗೇ ಬೇರೆಯವರದನ್ನು ದಾನ ಮಾಡುವ ಹಕ್ಕು ನಮಗಿಲ್ಲ!&lt;/div&gt;&lt;div&gt;&lt;br /&gt;&lt;/div&gt;&lt;div&gt;ಜೀವಂತವಿರುವಾಗ, ಅತಿ ಸುಲಭವಾಗಿ ಮಾಡಬಹುದಾದ ದಾನ-ರಕ್ತದಾನ (http://en.wikipedia.org/wiki/Blood_donation). ದಯವಿಟ್ಟು ಮಾಡಿ. ಈಗಾಗಲೇ ಮಾಡುತ್ತಿದ್ದರೆ, ಮುಂದುವರೆಸಿ. ಉಸಿರುನಿಂತಮೇಲೂ ನಮ್ಮ ಕೆಲವು ಅಂಗಾಂಗಳು ಬೇರೆಯವರಿಗೆ ಉಪಯೋಗವಾಗಬಹುದು. ಆ ದಾನಕ್ಕೆ ಈಗಲೇ ನೊಂದಾಯಿಸಿ.&lt;/div&gt;&lt;div&gt;&lt;br /&gt;&lt;/div&gt;&lt;div&gt;ಯಾವುದೋ, ಒಟ್ಟಿನಲ್ಲಿ ದಾನ ಮಾಡಿ. ವಾಗ್ದಾನ ಮಾಡುವುದನ್ನು ಮಾತ್ರ ಮಂತ್ರಿಮಹೋದಯರಿಗೆ, ರಾಜಕಾರಣಿಗಳಿಗೆ ಬಿಟ್ಟುಬಿಡಿ!&lt;/div&gt;&lt;div&gt;&lt;br /&gt;&lt;/div&gt;&lt;div&gt;-ಗಿರೀಶ್ ಜಮದಗ್ನಿ&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5064341961341191540-1462545472482797692?l=girishjamadagni.blogspot.com' alt='' /&gt;&lt;/div&gt;</content><link rel='replies' type='application/atom+xml' href='http://girishjamadagni.blogspot.com/feeds/1462545472482797692/comments/default' title='Post Comments'/><link rel='replies' type='text/html' href='http://www.blogger.com/comment.g?blogID=5064341961341191540&amp;postID=1462545472482797692' title='2 Comments'/><link rel='edit' type='application/atom+xml' href='http://www.blogger.com/feeds/5064341961341191540/posts/default/1462545472482797692'/><link rel='self' type='application/atom+xml' href='http://www.blogger.com/feeds/5064341961341191540/posts/default/1462545472482797692'/><link rel='alternate' type='text/html' href='http://girishjamadagni.blogspot.com/2008/11/blog-post_11.html' title='ದಾನವ ಮಾಡದವನೇ ದಾನವ!'/><author><name>Girish Jamadagni</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>2</thr:total></entry><entry><id>tag:blogger.com,1999:blog-5064341961341191540.post-4862507006546561197</id><published>2008-11-05T21:37:00.000+08:00</published><updated>2008-11-05T21:50:10.584+08:00</updated><title type='text'>ಆ ದೇವರು ವರವನು ಕೊಟ್ರೇ....</title><content type='html'>&lt;div align="justify"&gt;ಒಬ್ಬ ಭಕ್ತ ದೇವರಿಂದ ವರವನ್ನು ಪಡೆಯಲು ವರುಷಗಳಿಂದ ತಪಸ್ಸು ಮಾಡುತ್ತಿದ್ದ. ಇಷ್ಟು ತಪಸ್ಸು ಮಾಡಿದ ಮೇಲೆ ದೇವರು ಪ್ರತ್ಯಕ್ಷವಾಗದೇ ಇರಲು ಸಾಧ್ಯವೇ? ಸರಿ, ದೇವರು ಬಂದು ಎದುರು ನಿಂತೇ ಬಿಟ್ಟ. ಭಕ್ತ ಇನ್ನೂ ತಪಸ್ಸಿನಲ್ಲೇ ಮಗ್ನ! ದೇವರು ನುಡಿದ " ಎಲೈ ಭಕ್ತನೇ, ನಿನ್ನ ತಪಸ್ಸಿಗೆ ಮೆಚ್ಚಿದ್ದೇನೆ. ಏಳು. ನಿನ್ನ ಬೇಡಿಕೆ ಏನು ಕೇಳು. ಆದರೆ, ಒಂದು ಷರತ್ತು. ನೀನು ಒಂದೇ ಒಂದು ಪ್ರಶ್ನೆಯನ್ನಷ್ಟೆ ಕೇಳಬಹುದು. ನೆನಪಿರಲಿ, ಒಂದೇ ಒಂದು ಪ್ರಶ್ನೆ!". ಭಕ್ತ ಕಣ್ಣು ಬಿಟ್ಟ. ಎದುರಿಗೆ ದೇವರು! ಸಂತೋಷ ತಡೆಯಲಾಗಲಿಲ್ಲ. ಕೇಳೇ ಬಿಟ್ಟ "ತಂದೆ...ನೀನು ಬಂದದ್ದು ನನಗೆ ತಿಳಿಯಲೇ ಇಲ್ಲ. ನೀ ಬಂದು ಎಷ್ಟು ಹೊತ್ತಾಯಿತು?" ದೇವರು, "ಮೂರು ಕ್ಷಣಗಳಾದವು ಅಷ್ಟೆ" ಎಂದು ಹೇಳಿ ಮಾಯವಾದ! ಭಕ್ತನ ಒಂದು ಪ್ರಶ್ನೆ ಮುಗಿದುಹೋಗಿತ್ತು!&lt;/div&gt;&lt;div align="justify"&gt;&lt;br /&gt;ದೇವರು ಎದುರುಬಂದಾಗ ಭಕ್ತ ಕಕ್ಕಾಬಿಕ್ಕಿಯಗುವುದು ಊಹಿಸಬಹುದು ತಾನೆ? ದೇವರ ಹತ್ತಿರ ಅದೂ, ಇದೂ, ಏನೇನೊ ಕೇಳಬೇಕೆಂದು ಕೊಂಡಿದ್ದರೂ ಧಿಡೀರ್ ಅಂತ ಹಾಗೇನಾದರೂ ಅವನು ಎದುರು ಬಂದು ನಿಂತರೆ ನಾವು ಕೇಳಬೇಕೆಂದುಕೊಂಡದ್ದೆಲ್ಲಾ, ಮರೆತುಹೋಗಿ, ಇನ್ನೇನೋ ಕೇಳಿ, ಆಭಾಸವಾಗುವ ಸಾಧ್ಯತೆಗಳಿವೆಯಲ್ಲವೆ? ಇರಬಹುದೇನೋ, ಯಾಕೆಂದರೆ, ನನಗಂತೂ ಅದರ ಅನುಭವವೇ ಇಲ್ಲ!&lt;/div&gt;&lt;div align="justify"&gt;&lt;br /&gt;ಒಬ್ಬ ಬುದ್ಧಿವಂತ, ಬಡ ಬ್ರಹ್ಮಚಾರಿ, ದೇವರು ಪ್ರತ್ಯಕ್ಷನಾದಾಗ, "ನನ್ನ ಸುಂದರ ಮರಿಮಗ, ಚಿನ್ನದ ಸುಪ್ಪತ್ತಿಗೆಯಲ್ಲಿ ಮಲಗಿ, ಚಿನ್ನದ ಚೊಂಬಿನಲ್ಲಿ ಹಾಲು ಕುಡಿಯುವಂತೆ ವರಕೊಡು" ಅಂತ ಕೇಳಿದಾಗ, ಆ ದೇವರೇ ಸುಸ್ತಾದನಂತೆ (ಜೋಕು!). ತನ್ನ ಖಾನ್‌ದಾನೇ ಚೆನ್ನಾಗಿರಲಿ ಅಂತ ಒಂದೇ ಮಾತಿನಲ್ಲಿ ಕೇಳಿದ್ದ. ವರ ಕೇಳುವುದಕ್ಕೂ ಬುದ್ಧಿ ಬೇಕು!&lt;/div&gt;&lt;div align="justify"&gt;&lt;br /&gt;ಇಷ್ಟಾದರೂ ದೇವರು ಪ್ರತ್ಯಕ್ಷವಾದಾಗ ಏನೂ ಅಂತ ಕೇಳುವುದು? "ದೇವರೇ ನನ್ನನ್ನು ಚೆನ್ನಾಗಿಟ್ಟಿರು ತಂದೆ" ಅಂತಲೇ? ಈ "ಚೆನ್ನ" ಅಂದರೆ ಏನು? ಎಷ್ಟು? ಆ ದೇವರು, "ನೀನು ಈಗ್ಲೆ ಸಾಕಷ್ಟು ಚೆನ್ನಾಗಿದ್ದೀಯ, ನಿಂಗೇನಾಗಿದೆ ಧಾಡಿ" ಅಂತ ಹೇಳಿ ಅಂತರ್ಧಾನನಾದರೆ? ಅದರಲ್ಲೂ ದೇವರಂತಹ ಮಹಾನುಭಾವ ಎದುರಿಗೆ ಬಂದಾಗ, "ನನ್ನನ್ನು ಚೆನ್ನಾಗಿಟ್ಟಿರಪ್ಪ" ಅಂತ ಕೇಳಿ, ನನ್ನ ಸ್ವಾರ್ಥತನ ತೋರಿಸುವುದಕ್ಕಾಗುತ್ತದೆಯೆ? ದೇವರಿಗೆ ಈ ನನ್ನ narrow mindedness ಇಷ್ಟ ಆಗ್ದೇ ಕೋಪ ಮಾಡ್ಕೊಂಡು ಶಾಪ ಕೋಟ್ಬಿಟ್ರೆ? ಬೇಡ, "ಎಲ್ಲರನ್ನು ಚೆನ್ನಾಗಿಟ್ಟಿರಪ್ಪ" ಅಂತ  universal ಆಗಿ ಕೇಳಿದ್ರೆ, "ಎಲ್ಲರನ್ನು ಚೆನ್ನಾಗಿಟ್ಟಿರು ಅಂತ ಕೇಳೋಕ್ಕೆ, ನೀನೇನು ಅವರ ಯೂನಿಯನ್ ಲೀಡರ್ರಾ?" ಅಂತ ಕೇಳಬಹುದಲ್ವಾ? ಅಲ್ದೇ ಅವನು ಸೃಷ್ಟಿ ಮಾಡಿರೋ ಯಾರೂ ಚೆನ್ನಾಗಿಲ್ಲ ಅಂತ ಅಪಾರ್ಥ ಮಾಡ್ಕೊಂಡ್ಬಿಟ್ರೆ? ಛೆ.. ವರ ಕೇಳೋದು ಹುಡುಗಾಟ ಅಲ್ಲ! ದೇವರ ಮನಸ್ಸಿಗೆ ನೋವು ಮಾಡದಲೇ ವರ ಕೇಳೋದು ಎಷ್ಟು ಕಷ್ಟ! ಸಿಕ್ಕಾಪಟ್ಟೆ ಪ್ರಿಪರೇಷನ್ ಬೇಕು!&lt;/div&gt;&lt;div align="justify"&gt;&lt;br /&gt;ಇಷ್ಟಾದರೂ ನಮಗೆ ವರ ಬೇಕೇ? ಎಲ್ಲ ಪ್ರಾಣಿಗಿಂತಲೂ ಬುದ್ಧಿವಂತ ಪ್ರಾಣಿಯಾಗಿ ಮಾಡಿ, ಓಡಾಡಲು ಕಾಲು, ಕೆಲಸಮಾಡಲು ಕೈ, ನೋಡಲು ಕಣ್ಣು , ಕೇಳಲು ಕಿವಿ, ಉಸಿರಾಡಲು ಮೂಗು, ಮತ್ತೆ ಇವೆಲ್ಲಾ ಚೆನ್ನಾಗಿ ಕೆಲಸಮಾಡಲು ಮಿಕ್ಕ ಭಾಗಗಳನ್ನೆಲ್ಲ, ತುಂಬ ಮುತುವರ್ಜಿಯಿಂದ ಕೊಟ್ಟು, ಪ್ರತಿಯೊಬ್ಬರನ್ನೂ ವಿಶೇಷವಾಗಿ ಸೃಷ್ಟಿ ಮಾಡಿ ಭೂಮಿಗೆ ಕಳಿಸಿರುವ ಭಗವಂತನನ್ನು, ದಿನಾ ಪ್ರಾರ್ಥಿಸಿ ನನಗೆ ಅದು ಕೊಡು, ಇದು ಕೊಡು ಅಂತ ಪೀಡಿಸುವುದು ಸರಿಯೇ? Is it not asking for too much?&lt;/div&gt;&lt;div align="justify"&gt; &lt;/div&gt;&lt;div align="justify"&gt;-ಗಿರೀಶ್ ಜಮದಗ್ನಿ&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5064341961341191540-4862507006546561197?l=girishjamadagni.blogspot.com' alt='' /&gt;&lt;/div&gt;</content><link rel='replies' type='application/atom+xml' href='http://girishjamadagni.blogspot.com/feeds/4862507006546561197/comments/default' title='Post Comments'/><link rel='replies' type='text/html' href='http://www.blogger.com/comment.g?blogID=5064341961341191540&amp;postID=4862507006546561197' title='0 Comments'/><link rel='edit' type='application/atom+xml' href='http://www.blogger.com/feeds/5064341961341191540/posts/default/4862507006546561197'/><link rel='self' type='application/atom+xml' href='http://www.blogger.com/feeds/5064341961341191540/posts/default/4862507006546561197'/><link rel='alternate' type='text/html' href='http://girishjamadagni.blogspot.com/2008/11/blog-post.html' title='ಆ ದೇವರು ವರವನು ಕೊಟ್ರೇ....'/><author><name>Girish Jamadagni</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-5064341961341191540.post-2800331209496852387</id><published>2008-10-31T02:34:00.000+08:00</published><updated>2008-10-31T02:53:36.231+08:00</updated><title type='text'>ನಿಜವಾದ ಸತ್ಯ!</title><content type='html'>&lt;div align="justify"&gt;&lt;span style="font-family:verdana;"&gt;"ನಾನು ಸತ್ಯವನ್ನೇ ಹೇಳುತ್ತೇನೆ. ಅಕಸ್ಮಾತ್ ಇನ್ನೇನಾದರು ಹೇಳಿದರೂ, ಅದು ಸುಳ್ಳೇ ಹೊರತು ಬೇರೇನೂ ಅಲ್ಲ"! ಕಟಕಟೆಯಲ್ಲಿ ನಿಂತ ಅಪರಾಧಿ ಪ್ರಮಾಣ ತೆಗೆದುಕೊಂಡಿದ್ದು ಕೇಳಿ, ತಕ್ಕಡಿ ಪಕ್ಕ ಕುಳಿತ ಜಡ್ಜ್ ಬೆಪ್ಪಾದ!&lt;br /&gt;&lt;/span&gt;&lt;/div&gt;&lt;div align="justify"&gt;&lt;span style="font-family:verdana;"&gt;&lt;strong&gt;"I always tell the truth, even when I lie&lt;/strong&gt;" ಎಂಬುದು ಹಳೇ ಕೊಂಕು ಮಾತು. ಪ್ರತಿ ನಿತ್ಯದ ಜೀವನದಲ್ಲಿ, ನಾವು ಸತ್ಯ-ಸುಳ್ಳಿನ ಸಂಧಿಗ್ಧಕ್ಕೆ ಸಿಕ್ಕಿಹಾಕಿಕೊಳ್ಳುತ್ತೇವೆ. ಯಾವುದನ್ನು, ಎಷ್ಟು, ಯಾವಾಗ, ಯಾರಿಗೆ ಹೇಳಬೇಕು ಎನ್ನುವುದು ನಿಜಕ್ಕೂ ಕಲಿಯಬೇಕಾದ ಕಲೆ. ಸ್ವಲ್ಪ ಹೆಚ್ಚು ಕಮ್ಮಿಯಾದರೂ, ಸ್ನೇಹಕ್ಕೆ, ಸಂಬಂಧಕ್ಕೆ ಧಕ್ಕೆ! ಹಲವು ಸಾರಿ ಸತ್ಯವನ್ನು ಹೇಳಬೇಕಿನಿಸಿದರೂ ಯಾವುದೋ ದಾಕ್ಷಿಣ್ಯಕ್ಕೆ ಸಿಕ್ಕಿ, ಹೇಳಲಾಗದೆ, ಹೇಳದಿರಲಾಗದೆ ತೋಳಲಾಡುತ್ತೇವೆ.&lt;br /&gt;&lt;br /&gt;"ಸತ್ಯಂ ಭ್ರೂಯಾತ್ ಪ್ರಿಯಮ್ ಭ್ರೂಯಾತ್, ನ ಭ್ರೂಯಾತ್ ಸತ್ಯಮಪ್ರಿಯಂ" ಎನ್ನುವುದು ಸಂಸ್ಕೃತದ ಒಂದು ಸುಭಾಷಿತ. ಅಂದರೆ, ಸತ್ಯವನ್ನು ಹೇಳಿದರೆ, ಪ್ರಿಯವಾದ, ಹಿತವಾದ ಸತ್ಯವನ್ನು ಹೇಳು, ಅಪ್ರಿಯವಾದ, ಅಹಿತವಾದ ಸತ್ಯವನ್ನು ಹೇಳಬೇಡ ಎಂದು. ನಮ್ಮ ಪೂರ್ವಜರು ಬುದ್ಧಿವಂತರು. ಬರಿ ಇಷ್ಟಕ್ಕೇ ನಿಲ್ಲಿಸಲಿಲ್ಲ. ಮುಂದುವರಿದು ಹೇಳಿದರು - "ಪ್ರಿಯಂ ಚ ನಾನೃತಮ್ ಭ್ರೂಯಾತ್, ಏಷ ಧರ್ಮ ಸನಾತನಹ". ಅಂದರೆ, ಮುಂದೆ ನಿಂತ್ಕೊಂಡು ಕೇಳ್ತಾಯಿರುವವನಿಗೆ ಭಯಂಕರ ಖುಶಿಯಗುತ್ತೆ ಅಂತ ಹಿತವಾದ ಸುಳ್ಳುಗಳನ್ನೂ ಹೇಳಬೇಡ!&lt;br /&gt;&lt;br /&gt;ಸತ್ಯ ಹೇಳುವುದು ತಪ್ಪೇ? "ಸತ್ಯವಂತರಿಗಿದು ಕಾಲವಲ್ಲ" ಅಂತ ಪುರಂದರದಾಸರು, ಎಚ್ಚರಿಸಿದ್ದರೂ ಕೂಡ, ಸತ್ಯವನ್ನಾಡುವುದು ಖಂಡಿತ ತಪ್ಪಲ್ಲ! ಆದರೆ, ಒಬ್ಬರಿಗೆ ನೋವಾಗುವಂತ ಸತ್ಯವನ್ನು ಹೇಳುವಾಗ ಸ್ವಲ್ಪ ಎಚ್ಚರವಹಿಸುವುದು ಉತ್ತಮ. ನಮ್ಮ ಎರಡು ಮಾತು, ಸತ್ಯವೇ ಇದ್ದರೂ, ಒಳ್ಳೆಯದು ಮಾಡುವುದಕ್ಕಿಂತ, ಹಾನಿಯೇ ಹೆಚ್ಚು ಮಾಡುವುದಾದರೆ, ಅ ಸತ್ಯ ಹೇಳುವುದಕ್ಕಿಂತ ಸುಮ್ಮನಿರುವುದು ಲೇಸು. ರೋಗದಿಂದ ಹಾಸಿಗೆ ಹಿಡಿದು ಮಲಗಿದ ವ್ಯಕ್ತಿಗೆ, ವೈದ್ಯ, ಸತ್ಯ ಹೇಳ್ತೀನಿ ಅಂತ "ನೀನು ಅಬ್ಬಬ್ಬ ಅಂದರೆ, ಇನ್ನೊಂದು ವಾರ ಬದುಕ್ತೀಯ ಅಷ್ಟೆ" ಅಂದರೆ, ವಾರ ಆದ್ಮೇಲೆ ಸಾಯಬೇಕಿದ್ದ ಪಾರ್ಟಿ, ಈ ಮಾತು ಕೇಳಿದ ತಕ್ಷಣ ಪರಲೋಕ ಸೇರಿದರೆ, ಏನು ಸಾಧಿಸಿದಂತಾಯ್ತು?&lt;br /&gt;&lt;br /&gt;ಆದರೆ ಸ್ನೇಹಿತರಿಗೆ, ಆತ್ಮೀಯರಿಗೆ, ಆಪ್ತರಿಗೆ, ನಮ್ಮನ್ನು ತಿಳಿದವರಿಗೆ ಯಾವುದೇ ಹಿಂಜರಿಕೆಯಿಲ್ಲದೆ ಅನಿಸಿದ್ದನ್ನು ಹೇಳಬಹುದು. ಏಕೆಂದರೆ ಅವರು ನಮ್ಮನ್ನು ಅಪಾರ್ಥಮಾಡಿಕೊಳ್ಳುವ ಸಂಭವವೇ ಇಲ್ಲ.&lt;br /&gt;&lt;br /&gt;ಇಷ್ಟಾದರೂ ಸತ್ಯ ಎಂದರೆ ಏನು? ನಮಗೆ "ಅನಿಸಿದ್ದೆಲ್ಲಾ" ಸತ್ಯವಿರಲಾರದು ಅಲ್ಲವೇ? ಐದು ಜನ ಕುರುಡರು ಆನೆ ಬಣ್ಣಿಸುವ ಕಥೆ ನೆನಪಿದೆಯಲ್ಲವೇ? ಅವರವರ ನೇರಕ್ಕೆ ಆ ಐದೂ ಜನರು ಸರಿಯೇ!&lt;br /&gt;&lt;br /&gt;ಒಬ್ಬ ಜಾಣ ಹೇಳಿದಂತೆ, ನಮ್ಮ ಅನುಭವಗಳಿಗೆ ಬಣ್ಣ ಕಟ್ಟದೆ, ವಿಕಾರಗೊಳಿಸದೇ ಹೇಳಿದರೆ, ಆ ಅನುಭವವೇ ಸತ್ಯ. ಆಧ್ಯಾತ್ಮಿಕವಾಗಿ ಹೇಳುವುದಾದರೆ, ಯಾವುದು ತ್ರಿಕಾಲಕ್ಕೂ ಅನ್ವಯಿಸುತ್ತದೋ (ಭೂತ, ವರ್ತಮಾನ ಮತ್ತು ಭವಿಷ್ಯತ್) ಅದೇ ನಿಜವಾದ ಸತ್ಯ!&lt;br /&gt;&lt;br /&gt;ಯೋಚನೆ ಮಾಡಿ! ನಾನೂ ಸ್ವಲ್ಪ, ಸತ್ಯಾನ್ವೇಷಣೆ ಮಾಡಿ ಬರ್ತೀನಿ!&lt;br /&gt;&lt;/span&gt;&lt;/div&gt;&lt;div align="justify"&gt;&lt;span style="font-family:verdana;"&gt;-ಗಿರೀಶ್ ಜಮದಗ್ನಿ&lt;/span&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5064341961341191540-2800331209496852387?l=girishjamadagni.blogspot.com' alt='' /&gt;&lt;/div&gt;</content><link rel='replies' type='application/atom+xml' href='http://girishjamadagni.blogspot.com/feeds/2800331209496852387/comments/default' title='Post Comments'/><link rel='replies' type='text/html' href='http://www.blogger.com/comment.g?blogID=5064341961341191540&amp;postID=2800331209496852387' title='0 Comments'/><link rel='edit' type='application/atom+xml' href='http://www.blogger.com/feeds/5064341961341191540/posts/default/2800331209496852387'/><link rel='self' type='application/atom+xml' href='http://www.blogger.com/feeds/5064341961341191540/posts/default/2800331209496852387'/><link rel='alternate' type='text/html' href='http://girishjamadagni.blogspot.com/2008/10/blog-post_30.html' title='ನಿಜವಾದ ಸತ್ಯ!'/><author><name>Girish Jamadagni</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-5064341961341191540.post-1403704768536585659</id><published>2008-10-26T20:18:00.000+08:00</published><updated>2008-10-26T20:20:25.288+08:00</updated><title type='text'>ಕಾಯೋದೇ ಕೈಲಾಸ !</title><content type='html'>&lt;span style="font-family:lucida grande;"&gt;ಮೊನ್ನೆ ಯಾರಿಗೋ ಕಾದೂ ಕಾದೂ ಸುಸ್ತಾಗಿದ್ದೆ. ೩ ಘಂಟೆಗೆ ಬರ್ತೀನಿ ಅಂದವರು ಆರಾದ್ರೂ ಬರಲೇ ಇಲ್ಲ ಆಸಾಮಿ. ಒಂದು ಘಂಟೆ, ಎರಡು ಘಂಟೆ stretch ಮಾಡಿದ್ರೆ O.K! 3 ಘಂಟೆ ಅಂದ್ರೆ ಆಗುತ್ತೇ ತಡೆಯೋಕ್ಕೆ? ಈ ಕಾಯೋದರ ಬಗ್ಗೇನೆ ಯೋಚನೆ ಶುರು ಆಯ್ತು!&lt;br /&gt;&lt;br /&gt;ಬಾಲ್ಯದಿಂದ ಮುಪ್ಪಿನವರೆಗೆ ಏನಾದ್ರು ಒಂದಕ್ಕೆ ಕಾಯೋದೇ ಆಗುತ್ತೆ ಅಲ್ವಾ? ಬಾಲ್ಯದಲ್ಲಿ, ಶಾಲೆ ಇದ್ದಾಗ ರಜಾದಿನಕ್ಕೆ, ರಜೆ ಮುಗಿಯುತಿರಬೇಕಾದ್ರೆ ಶಾಲಾ ದಿನಕ್ಕೆ, ಶಾಲೆಯ ದಿನಗಳಲ್ಲಿ ಕೊನೆಯ ಪೀರಿಯಡ್‍ಗೆ, ಶನಿವಾರದ ಅಸೆಂಬ್ಲಿಗೆ, ವಾರದಲ್ಲಿ ಒಂದು ದಿನ ಸಿಗುತ್ತಿದ್ದ ಪಿ.ಟಿ ಪೀರಿಯಡ್‍ಗೆ, ಕೊನೆಯ ಪರೀಕ್ಷೆಗೆ, ಆಮೇಲೆ ಫಲಿತಾಂಶಕ್ಕೆ, ನೆಚ್ಚಿನ ಹೀರೋ ನಟಿಸಿದ ಚಿತ್ರದ ಬಿಡುಗಡೆಯ ದಿನಕ್ಕೆ, ಊರಿನ ಕೆರೆಗೆ ಹೋಗಿ ಗಣಪತಿ ಮುಳುಗಿಸೋಕ್ಕೆ, ದೀಪಾವಳಿ ಹಬ್ಬದಲ್ಲಿ ಪಟಾಕಿ ಹೊಡೆಯೋಕ್ಕೆ, ಪ್ಯಾಂಟ್ ತೊಡುವ ದಿನಕ್ಕೆ, ಮೀಸೆ ಬರುವ ಕಾಲಕ್ಕೆ, ಎದುರು ಮನೆ ಹುಡುಗಿಯ ಕುಡಿನೋಟಕ್ಕೆ, ಮೊದಲ ಪ್ರೇಮ-ಪತ್ರದ ಉತ್ತರಕ್ಕೆ, ಮೆಚ್ಚಿದ ಹುಡುಗಿಯ ಮದುವೆಯಾಗಲು ಅಪ್ಪ ಅಮ್ಮನ ಅನುಮತಿಗೆ, ಕೆಲಸದ ಮೊದಲ ದಿನಕ್ಕೆ, ಮೊದಲ ತಿಂಗಳ ಸಂಬಳಕ್ಕೆ, ಮದುವೆಯ ದಿನಕ್ಕೆ, ಮಧುಚಂದ್ರಕೆ, ಮೊದಲ ಮಗುವಿನ ಆಗಮನಕ್ಕೆ, ಮತ್ತೆ ಮಕ್ಕಳ ಜೀವನದ ಆಗುಹೋಗುಗಳಿಗೆ, ಅವರ ಮದುವೆಯ ದಿನಕ್ಕೆ, ಜವಾಬ್ದಾರಿ ಕಳೆಯುವ ದಿನಕ್ಕೆ, ನಿವೃತ್ತಿ ಜೀವನದ ದಿನಗಳಿಗೆ, ಅಂತಕನ ದೂತರ ಆಗಮನಕ್ಕೆ......ಹೀಗೆ ಎಲ್ಲವುದಕ್ಕೂ ಕಾಯುವುದು!&lt;br /&gt;&lt;br /&gt;ನಮಗೆ ಬೇಕಿನಿಸಿದ್ದು ತಕ್ಷಣ ಸಿಕ್ಕಿಬಿಟ್ಟರೆ, ಅದರಲ್ಲಿ ಮಜವೇ ಇರುವುದಿಲ್ಲ! ಕಾದನಂತರ ಅದು ದೊರೆತಾಗ ಸಿಗುವ ಸುಖ, ಖುಷಿ ಅಪರಿಮಿತ. ನಮ್ಮ ದೇಶದಲ್ಲಿ ಬಿಡಿ, ಎಲ್ಲದಕ್ಕೂ ಕಾಯಬೇಕು. ಬರ್ತ್ ಸರ್ಟಿಪಿಕೇಟ್‌ನಿಂದ ಹಿಡಿದು ಡೆತ್ ಸರ್ಟಿಪಿಕೇಟ್ ತನಕ! ಸಣ್ಣ ಸಣ್ಣ ಕೆಲಸಕ್ಕೂ ಕಾಯಲೇಬೇಕು. ಹೀಗೆ ಕಾದೂ ಕಾದೂ ನಾವು ಅದಕ್ಕೆ ಒಗ್ಗಿ ಹೋಗಿದ್ದೇವೆ! ನೀವು ಏನೇ ಹೇಳಿ, ಒಂದು ಹತ್ತು ಸಾರಿ ಅಲೆದು, ಎರಡು ತಿಂಗಳು ಕಾದು, ಸ್ವಲ್ಪ ಗರಂ ಆಗಿ, ಕೂಗಾಡಿ, ರೇಗಾಡಿ, ಸ್ವಲ್ಪ ಅವರಿವರಿಂದ "ಹೇಳಿಸಿ", ಅವರಿವರಿಗೆ "ತಿನ್ನಿಸಿ" , ಆಮೇಲೆ ನಮ್ಮ ಕೆಲಸವಾದರೆ, ಆಗ ಏನೋ ಸಾಧಿಸಿದ ಹಿಗ್ಗು! ಅಪ್ಲಿಕೇಷನ್ ಕೊಟ್ಟ ಹತ್ತು ನಿಮಿಷದಲ್ಲೇ ಕೆಲಸವಾದರೆ, ಏನೋ ಕಸಿವಿಸಿ. ಕೆಲಸ ಮುಗಿದರೂ, ಸುಖವಿಲ್ಲ, ಸಮಾಧಾನವಿಲ್ಲ. ಕೆಲಸ ಸರಿಯಾಗಿ ಆಯಿತೋ ಇಲ್ಲವೋ ಎನ್ನುವ ಗುಮಾನಿ!&lt;br /&gt;&lt;br /&gt;&lt;strong&gt;Between the wish and the thing, life lies waiting&lt;/strong&gt; ಅನ್ನೋ ಹಾಗೇ, ಕಾಯುವುದೇ ಜೀವನ, ಕಾಯುವುದರಲ್ಲೇ ಜೀವನ! ಕಾಯುವುದು ಇಲ್ಲದಿದ್ದರೆ, ಜೀವನಕ್ಕೆ ಅರ್ಥವೇ ಇರುತ್ತಿರಲಿಲ್ಲವೇನೋ...&lt;br /&gt; &lt;/span&gt;&lt;br /&gt;&lt;span style="font-family:lucida grande;"&gt;ನನ್ನ ಮುಂದಿನ ಬ್ಲಾಗ್ ಲೇಖನಕ್ಕೆ ಕಾಯ್ತೀರ ತಾನೆ? ನಾನು, ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ ಕಾಯ್ತಾ ಇರ್ತೀನಿ....&lt;br /&gt;&lt;br /&gt;ಗಿರೀಶ್ ಜಮದಗ್ನಿ&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5064341961341191540-1403704768536585659?l=girishjamadagni.blogspot.com' alt='' /&gt;&lt;/div&gt;</content><link rel='replies' type='application/atom+xml' href='http://girishjamadagni.blogspot.com/feeds/1403704768536585659/comments/default' title='Post Comments'/><link rel='replies' type='text/html' href='http://www.blogger.com/comment.g?blogID=5064341961341191540&amp;postID=1403704768536585659' title='1 Comments'/><link rel='edit' type='application/atom+xml' href='http://www.blogger.com/feeds/5064341961341191540/posts/default/1403704768536585659'/><link rel='self' type='application/atom+xml' href='http://www.blogger.com/feeds/5064341961341191540/posts/default/1403704768536585659'/><link rel='alternate' type='text/html' href='http://girishjamadagni.blogspot.com/2008/10/blog-post_26.html' title='ಕಾಯೋದೇ ಕೈಲಾಸ !'/><author><name>Girish Jamadagni</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>1</thr:total></entry><entry><id>tag:blogger.com,1999:blog-5064341961341191540.post-2761081683716578359</id><published>2008-10-21T02:23:00.000+08:00</published><updated>2008-10-21T03:05:48.660+08:00</updated><title type='text'>ನಿದ್ದೆ ಬಲ್ಲವನಿಗೆ ರೋಗವಿಲ್ಲ !</title><content type='html'>ಆಶ್ಚರ್ಯದ ಸಂಗತಿಯೆಂದರೆ, ನಮ್ಮ ಜೀವನದ ಸುಮಾರು ೩೦ ಪ್ರತಿಶತ ಆಯಸನ್ನು ನಿದ್ದೆಯಲ್ಲೇ ಕಳೆಯುತ್ತೇವೆ. ಆದರೂ ನಿದ್ದೆ ಬಗ್ಗೆ ಆಲಸ್ಯ ನಮಗೆ! ಅಂದರೆ, ನಿದ್ದೆಯ ಮಹತ್ವ ತಿಳಿದುಕೊಳ್ಳಲು ಹೋಗುವುದೇ ಇಲ್ಲ ನಾವು. "ಚಿಂತೆಯಿಲ್ಲದವನಿಗೆ, ಸಂತೆಯಲ್ಲೂ ನಿದ್ದೆ ಬರುತ್ತೆ" ಎನ್ನುವುದು ಗಾದೆ ಮಾತು. ಎಲ್ಲಿ , ಹೇಗೆ, ಯಾವಾಗ ಬೇಕಾದರೂ ನಿದ್ದೆ ಮಾಡಿಬಿಡುವ ಜನರಿದ್ದಾರೆ. ಯಾಕೆ, ಗಿಜಿಗುಟ್ಟುವ ಕಚೇರಿಯಲ್ಲೇ ಸಲೀಸಾಗಿ ಗಂಟೆಗಟ್ಟಳೆ ನಿದ್ದೆ ಮಾಡುವ ಮಹಾನುಭಾವರಿಲ್ಲವೆ ನಮ್ಮಲ್ಲಿ? ಅವರಿಗೆಲ್ಲ ಒರಗಿಕೊಳ್ಳಲು ಜಾಗ ಬೇಕು ಅಷ್ಟೆ. ಜನಜಂಗುಳಿ ಇರಲಿ, ಸದ್ದು ಗದ್ದಲವಿರಲಿ, ದೀಪವಿರಲಿ, ವಾದ್ಯವಿರಲಿ, ಉಹುಂ. ತೊಂದರೆಯೇ ಇಲ್ಲ. ಪೊಗದಸ್ತಾಗಿ ನಿದ್ದೆ ಮಾಡಿಬಿಡುತ್ತಾರೆ. ನಿಜವಾಗಲೂ ಈ ಗುಂಪಿನ ಜನ ತುಂಬಾ ಪುಣ್ಯವಂತರು.&lt;br /&gt;&lt;br /&gt;ಹಲವರಿಗೆ, ನಿದ್ದೆ ಬರಲು ಸುಮಾರು ಕಂಡಿಷನ್ನುಗಳು! ದೀಪವಿರಬಾರದು-ಗಾಢಾಂದಕಾರದಲ್ಲೇ ಮಲಗಿ ಅಭ್ಯಾಸ. ಸದ್ದಿರಬಾರದು -ಸೊಳ್ಳೆ ಗುಯ್ಗುಡುವ ಸದ್ದೂ ಅವರ ನಿದ್ದೆಗೆ ಶತ್ರು! ಕೆಲವರಿಗೆ ತಮ್ಮ ಗೊರಕೆ ಸದ್ದಿಗೇ ಎಚ್ಚರಾಗಿ ಧಿಗ್ಗನೆದ್ದು ಕುಳಿತುಬಿಡುವ ಪರಿಸ್ತಿತಿ! ಕೆಲವರಿಗೆ, ನಿದ್ದೆ ಬರಲು ಏನಾದರೂ ಸದ್ದಿರಲೇಬೇಕು! (ಕಮಲ್ ಹಾಸನ್‌ನ "ಪುಷ್ಪಕ ವಿಮಾನ" ಚಿತ್ರ ನೋಡಿದವರಿಗೆ ಙ್ನಾಪಕ ಇರಬಹುದು). ಹೊಸ ಜಾಗವಾದರೆ ನಿದ್ದೆ ಬರುವುದಿಲ್ಲ. ದಿಂಬಿನ ಎತ್ತರ ಇಂತಿಷ್ಟೇ ಇರಬೇಕು, ಹೆಚ್ಚು ಅಥವಾ ಕಮ್ಮಿಯಾದರೆ, ನಿದ್ದೆಗೇ ಆಪತ್ತು. ಆಕಾಶ ನೋಡುತ್ತ ಮಲಗುವ ಭಂಗಿಯಲ್ಲಿ ನಿದ್ದೆ ಬರುವುದಿಲ್ಲ! ಹೊಟ್ಟೇ ಮೇಲೇ ಮಲಗಬೇಕು. ಅದೂ ಲಂಕೆಯತ್ತ ಹಾರುತಿರುವ ಹನುಮಂತನ ಪೋಸಿನಲ್ಲಿ! ಇನ್ನೂ ಕೆಲವರಿಗೆ, ನಿದ್ದೆ ಬರಲು, ಕೈಯಲ್ಲಿ ಏನಾದರೂ ಪುಸ್ತಕವಿರಲೇಬೇಕು. ಇಲ್ಲದಿದ್ದರೆ ನಿದ್ದೆ ಬರುವುದಿಲ್ಲ. ಪುಸ್ತಕವಿದ್ದರೆ, ಮೊದಲ ಪುಟ ಓದಿಮುಗಿಸುವ ಮೊದಲೇ ಗಾಢನಿದ್ದೆ!&lt;br /&gt;&lt;br /&gt;ಇದೆಲ್ಲ ನಾವೇ ಕಲಿತಿರುವ (ಕೆಟ್ಟ) ಅಭ್ಯಾಸಗಳು, ಮಾನಸಿಕ ಸಂಕೋಲೆಗಳು. ಹುಟ್ಟಿದ ಮಗು ಎಲ್ಲಾದರೂ , ಹೇಗಾದರೂ ನಿದ್ದೆ ಮಾಡಿಬಿಡುತ್ತವೆ. ಯಾವ ಕಂಡೀಷನ್‍ಗಳೂ ಇಲ್ಲದೇ!&lt;br /&gt;&lt;br /&gt;ನಿದ್ದೆ ಬರದಿರಲು ಹಲವು ಕಾರಣಗಳಿರಬಹುದು. ಕೆಲವರಿಗೆ ಸ್ವಭಾವತಹ ನಿದ್ದೆ ಕಮ್ಮಿ. ಪರಿಸ್ತಿತಿ ಉಲ್ಭಣವಾದರೆ, ಇದೊಂದು ವ್ಯಾಧಿ (Insomnia!). ಅತೀನಿದ್ದೆ ಮಾಡುವುದೂ ಒಂದು ಖಾಯಿಲೆಯೇ( Hypersomnia). ಅದರೆ ಬಹಳ ಜನಕ್ಕೆ ಇದರ ಬಗ್ಗೆ ತಿಳುವಳಿಕೆಯೇ ಇರುವುದಿಲ್ಲ. ಮನುಷ್ಯನಿಗೆ, ಸಾಮಾನ್ಯವಾಗಿ ೬ ರಿಂದ ೮ ಘಂಟೆಯ ಕಾಲ ನಿದ್ದೆ ಸಾಕೆಂದು ವಿಙ್ನಾನಿಗಳ ಅಂಬೋಣ. ಹುಟ್ಟಿದ ಮಗು ಸರಸರಿ ೨೨ ಘಂಟೆ ಕಾಲ ಮಲಗುತ್ತದೆ. ಬೆಳೆಯುತ್ತ ಹೋದಂತೆ, ನಿದ್ದೆ ಅವಧಿ ಕಮ್ಮಿ ಆಗಿ ೮ ಘಂಟೆಯಾಗುತ್ತದೆ. ವಯಸ್ಸಾದಂತೆ, ನಿದ್ದೆಯ ಅವಧಿ ಇನ್ನೂ ಕಡಿಮೆಯಗುತ್ತದೆ. ವಯಸ್ಸಾದವರ ಗತಿ ನಿಜವಾಗಲೂ ಚಿಂತಾಜನಕ. ಮಾಡಲು ಕೆಲಸವಿಲ್ಲ (ಮಾಡಿದರೆ ಬೇರೆಯವರು ಒಪ್ಪಬೇಕಲ್ಲ!), ನಿದ್ದೆ ಬರುವುದಿಲ್ಲ. ಕಾಲಕಳೆಯುವುದು ಚಿತ್ರಹಿಂಸೆ.&lt;br /&gt;&lt;br /&gt;ನಿದ್ದೆಯೆಂಬ ಪ್ರಕ್ರಿಯೆ, ಪ್ರಕೃತಿ ನಮಗೆ ನೀಡಿರುವ ಮದ್ದು. ಅದನ್ನು ಸರಿಯಾಗಿ ಬಳಸಿಕೊಂಡರೆ, ದೇಹಕ್ಕೆ, ಮನಸ್ಸಿಗೆ ಬೇಕಾದ ವಿಶ್ರಾಂತಿ ದೊರಕುತ್ತದೆ. ಅತಿಯಾದರೆ ಅಥವಾ ಕಮ್ಮಿಯದರೆ, ಸಮತೋಲನ ತಪ್ಪಿ, ಇಲ್ಲ ಸಲ್ಲದ ಖಾಯಿಲೆಗೆ ಆಹ್ವಾನ ನೀಡಿದಂತಾಗುತ್ತದೆ. ಆದ್ದರಿಂದ, ನಿದ್ದೆಯ ಬಗ್ಗೆ ಎಚ್ಚರವಿರಲಿ!&lt;br /&gt;&lt;br /&gt;ಅರೆ, ಇದೇನು, ನಿದ್ದೆ ಮಾಡಿಬಿಟ್ರಾ?&lt;br /&gt;&lt;br /&gt;- ಗಿರೀಶ್ ಜಮದಗ್ನಿ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5064341961341191540-2761081683716578359?l=girishjamadagni.blogspot.com' alt='' /&gt;&lt;/div&gt;</content><link rel='replies' type='application/atom+xml' href='http://girishjamadagni.blogspot.com/feeds/2761081683716578359/comments/default' title='Post Comments'/><link rel='replies' type='text/html' href='http://www.blogger.com/comment.g?blogID=5064341961341191540&amp;postID=2761081683716578359' title='0 Comments'/><link rel='edit' type='application/atom+xml' href='http://www.blogger.com/feeds/5064341961341191540/posts/default/2761081683716578359'/><link rel='self' type='application/atom+xml' href='http://www.blogger.com/feeds/5064341961341191540/posts/default/2761081683716578359'/><link rel='alternate' type='text/html' href='http://girishjamadagni.blogspot.com/2008/10/blog-post_20.html' title='ನಿದ್ದೆ ಬಲ್ಲವನಿಗೆ ರೋಗವಿಲ್ಲ !'/><author><name>Girish Jamadagni</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-5064341961341191540.post-6231092254274564893</id><published>2008-10-17T21:22:00.000+08:00</published><updated>2008-10-17T22:24:36.235+08:00</updated><title type='text'>ಮೊದಲ ಬ್ಲಾಗ್ !</title><content type='html'>ನಮಸ್ಕಾರ ( )&lt;br /&gt;ಎಲ್ಲರಿಗಿರುವಂತೆ ನನ್ನದು ಒಂದು ಬ್ಲಾಗ್ ! ಇದುವರೆಗೂ ನನ್ನದೇ ಬ್ಲಾಗ್ ತಾಣ ತೆರೆಯುವ ಬಗ್ಗೆ ಯೋಚಿಸಿಯೇ ಇರಲಿಲ್ಲ. ಇವತ್ತು ಯಾಕೋ ಎಲ್ಲೋ ಏನೋ "ಸರ್ಫಿ"ಸುತ್ತಿದ್ದಾಗ, ಈ ಬ್ಲಾಗ್‍ಸ್ಪಾಟ್ ತಾಣ ತಲುಪಿದ್ದೆ! ಹಾಗೆ ಶುರುವಾಯಿತು ನನ್ನ ಬ್ಲಾಗ್‍ನ ಜನ್ಮ ಗಾಥೆ! ಸರಿ, ಇನ್ನು ಕೂಸು ಹುಟ್ಟಾದ ಮೇಲೆ ಕುಲಾವಿ ಹೊಲೆಯಬೇಕಲ್ಲ! ಸಿಂಗಾರವೂ ಮಾಡಿಯಾಯ್ತು. ಈಗಂತು ಬ್ಲಾಗ್ ತೆಗೆಯುವುದು ಆಕಳಿಸಿದಷ್ಟೇ ಸುಲಭ! ಅರ್ಧ ಘಂಟೆಯಲ್ಲಿ ರೆಡಿಯಾಗಿತ್ತು ನನ್ನ ಬ್ಲಾಗ್ ತಾಣ!&lt;br /&gt;&lt;span class=""&gt;&lt;/span&gt;&lt;br /&gt;ನನ್ನ ಬ್ಲಾಗ್‍ಗೆ ಹೆಸರೇನಿಡಬೇಕೆಂದು ಕೆಲಕಾಲ ಯೋಚಿಸಿದ್ದಾಯ್ತು! ಮಗುವಿಗೆ ಹೆಸರಿಡುವಷ್ಟೇ ಕಷ್ಟ ಬ್ಲಾಗ್‍ಗೆ ಹೆಸರಿಡುವುದೂ ಕೂಡ ಅಂತ ಅರ್ಥವಾಯ್ತು. ಕೊನೆಗೆ "ಕಪ್ಪು-ಬಿಳುಪು" (Black &amp;amp; White) ಹೆಸರು ನನ್ನ ಬ್ಲಾಗ್‍ಗೆ ಸೂಕ್ತವೆನ್ನಿಸಿತು. ಇದೇ ಹೆಸರಿನ ಬ್ಲಾಗ್‍ಗಳು ಈಗಾಗಲೇ ಇರಬಹುದಲ್ಲವೇ ಎಂಬ ಗುಮಾನಿ ಕೂಡ ಬಂತು. ಇರಬಾರದೇಕೆ? ನನ್ನ ಹೆಸರಿನವರೇ ಸಾವಿರಾರು ಜನರಿರುವಾಗ, ನನ್ನ ಬ್ಲಾಗ್ ಹೆಸರಿನದೇ ಬ್ಲಾಗ್‍ಗಳು ಇದ್ದರೇನಾಯ್ತು? &lt;span class=""&gt;After &lt;/span&gt;all  what's&lt;span class=""&gt; in a name ಅಂತ ಯಾವುದೋ ಪುಣ್ಯಾತ್ಮ ಹೇಳಿಲ್ಲವೇ? &lt;/span&gt;&lt;br /&gt;&lt;span class=""&gt;&lt;/span&gt;&lt;br /&gt;&lt;span class=""&gt;ಇನ್ನು, ಇಲ್ಲಿ ಏನು ಬರೀತೀನಿ ಅಂತ ಇನ್ನು ಯೋಚಿಸಿಲ್ಲ. ಇಷ್ಟಂತೂ ಹೇಳಬಲ್ಲೆ. ನನಗೆ ಅಭಿರುಚಿಯಿರುವ ಎಲ್ಲ ವಿಷಯ / ಲಲಿತಕಲೆಗಳ ಬಗ್ಗೇನೂ ಆದಷ್ಟು ಬರೆಯುವ , ವಿಷಯ ಹಂಚಿಕೊಳ್ಳುವ ಯೋಚನೆ ಇದೆ. ನೋಡೋಣ. ಆ "ಸರ್ವಾಂತರ್ಯಾಮಿ" ನನ್ನ ಬ್ಲಾಗ್ ನೋಡಿ ಸುಸ್ತಾಗದೆ, ತಥಾಸ್ತು ಅಂದರೆ , ಎಲ್ಲವೂ ಸಾಧ್ಯ!&lt;/span&gt;&lt;br /&gt;&lt;span class=""&gt;&lt;br /&gt;ನನ್ನ ಬಗ್ಗೆ ಬರೆಯಲು ನಾನೇನೂ "ಗ್ರೇಟ್" ವ್ಯಕ್ತಿ ಅಲ್ಲ. ಆದ್ದರಿಂದ ನನ್ನ ಬ್ಲಾಗ್‍ನಲ್ಲಿ ವ್ಯಕ್ತಿಗಿಂತ ವಿಚಾರಕ್ಕೆ ಮಹತ್ವ. ನನಗೆ ಹವ್ಯಾಸಗಳಿವೆ ಹಲವು. ಯಾವುದರಲ್ಲೂ expert ಆಗಲಿಲ್ಲವೆಂಬ ವಿಷಾದವೂ ಇದೆ. ಭಗವಂತನ ಕೃಪೆ, ಎಲ್ಲವನ್ನು ಅನುಭವಿಸುವ ಧೋರಣೆ ಇದೆ. ನನ್ನ ಹವ್ಯಾಸಗಳಲ್ಲಿ ಸಂಗೀತ ಮತ್ತು ಸಾಹಿತ್ಯಕ್ಕೆ ಹೆಚ್ಚು ಪ್ರಾಮುಖ್ಯತೆ. ಸಂಗೀತದಲ್ಲಿ  ಎಲ್ಲಾ ಪ್ರಾಕಾರಗಳೂ, ಕಿವಿಗೆ ಇಂಪಾಗುವುದೆಲ್ಲವೂ ಸಖ್ಯ. ಕಥೆ, ಕವನ ಬರೆಯುವ "ಚಟ" ಕೂಡ ಇದೆ (ಅಂದರೆ ನಿಮಗೆ ಅಪಾಯ ಕಾದಿದೆ!!!).&lt;br /&gt;&lt;/span&gt;&lt;br /&gt;&lt;/span&gt;&lt;br /&gt;&lt;span class=""&gt;ಈ ಬ್ಲಾಗ್ ಎಷ್ಟು ಅವಧಿಯಲ್ಲಿ update ಮಾಡುತ್ತೇನೆ ಗೊತ್ತಿಲ್ಲ. ಆದಷ್ಟೂ ಶೀಘ್ರಗತಿಯಲ್ಲಿ ( ಕನಿಷ್ಠ ತಿಂಗಳಿಗೊಮ್ಮೆ!)  ಮಾಡುವ ಯೋಚನೆಯಿದೆ. ನನ್ನ ಬ್ಲಾಗ್ ತಾಣದಲ್ಲಿ ಇನ್ನು ಕೆಲವು "utilities" ಇದೆ.  ನಿಮಗೆ ಇಷ್ಟವಾಗಬಹುದು.&lt;br /&gt;&lt;/span&gt;&lt;br /&gt;ಸಿಗೋಣ,&lt;br /&gt;&lt;span class=""&gt;ಗಿರೀಶ್ ಜಮದಗ್ನಿ&lt;/span&gt;&lt;br /&gt;&lt;span class=""&gt;&lt;/span&gt;&lt;br /&gt;&lt;span class=""&gt;&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/5064341961341191540-6231092254274564893?l=girishjamadagni.blogspot.com' alt='' /&gt;&lt;/div&gt;</content><link rel='replies' type='application/atom+xml' href='http://girishjamadagni.blogspot.com/feeds/6231092254274564893/comments/default' title='Post Comments'/><link rel='replies' type='text/html' href='http://www.blogger.com/comment.g?blogID=5064341961341191540&amp;postID=6231092254274564893' title='0 Comments'/><link rel='edit' type='application/atom+xml' href='http://www.blogger.com/feeds/5064341961341191540/posts/default/6231092254274564893'/><link rel='self' type='application/atom+xml' href='http://www.blogger.com/feeds/5064341961341191540/posts/default/6231092254274564893'/><link rel='alternate' type='text/html' href='http://girishjamadagni.blogspot.com/2008/10/blog-post.html' title='ಮೊದಲ ಬ್ಲಾಗ್ !'/><author><name>Girish Jamadagni</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry></feed>
